Webdunia - Bharat's app for daily news and videos

Install App

ಸ್ತಬ್ದವಾದ ಬೆಂಗಳೂರು ವಿಶ್ವವಿದ್ಯಾಲಯ

Webdunia
ಸೋಮವಾರ, 30 ಮೇ 2022 (21:01 IST)
ಬೆಂಗಳೂರು ವಿಶ್ವವಿದ್ಯಾಲಯ ಯಾವಾಗ್ಲೂ ಒಂದಲ್ಲ ಒಂದು ವಿಷಯದಲ್ಲಿ ಸುದ್ದಿಯಲ್ಲಿರುತ್ತೆ. ಅಂದಹಾಗೆ ಇಂದು ಸಂಶೋಧನಾ ಮತ್ತು ಸ್ನಾತಕೋತ್ತರ  ವಿದ್ಯಾರ್ಥಿಗಳ ಮೇಲೆ ನೀಡಿರುವ ದೂರು ಹಿಂಪಡೆಯುವಂತೆ ಆಗ್ರಹಿಸಿ  ಯುನಿವರ್ಸಿಟಿ ಮುಂಭಾಗ ವಿದ್ಯಾರ್ಥಿಗಳು ಧರಣಿ ನಡೆಸಿದ್ರು.ಅಷ್ಟೇ ಅಲ್ಲದೆ ಯುನಿವರ್ಸಿಟಿಯಲ್ಲಿ  ದೊಡ್ಡ ಹೈಡ್ರಾಮವೇ ನಡೆದಿತ್ತು.ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಮೊನ್ನೆ ದೊಡ್ಡ ಹೈಡ್ರಾಮವೇ ನಡೆದು ಹೋಗಿತ್ತು. ವಿತ್ತಾಧಿಕಾರಿ ಜಯಲಕ್ಷ್ಮೀ  ರಾತ್ರೋ ರಾತ್ರಿ ವಿಸಿಯೂ ಗಾಗಿ   28  ಕೋಟಿ ಹಣ ಬಿಡುಗಡೆಮಾಡಬೇಂದು ಸೈನ್ ಹಾಕಿಸಿಕೊಡಿದ್ದಾರೆ ಎಂಬ ವಿಷಯ ತಿಳಿಯುತ್ತಿದ್ದಂತೆ ವಿದ್ಯಾರ್ಥಿಗಳು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಜಯಲಕ್ಷ್ಮೀ  ಸರಿಯಾಗಿ ಪ್ರತಿಕ್ರಿಯೆ ನೀಡದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ರಾತ್ರೋ ರಾತ್ರಿ ಸೈನ್ ಹಾಕಿಸಿಕೊಳ್ಳುವ ಅವಶ್ಯಕತೆಯಾದ್ರು ಏನಿದೆ ಎಂದು ಆಕ್ರೋಶ ಹೊರಹಾಖಿದ್ದಾರೆ. ಕೊನೆಗೂ ಕುಲಪತಿ ವೇಣುಗೋಪಾಲ್ ಮತ್ತು ವಿತ್ತಾಧಿಕಾರಿ ಜಯಲಕ್ಷ್ಮೀ ವಿರುದ್ಧ 2000 ಪ್ರತ್ಯೇಕ ದೂರು ಸಲ್ಲಿಸಲು ತೀರ್ಮಾನ ಮಾಡಿಕೊಂಡಿದ್ರು. ಕಾನೂನುಬಾಹಿರವಾಗಿ ಆಕ್ರಮ ಹಣ ವರ್ಗಾವಣೆಗೆ ಮುಂದಾಗಿದ್ದ  ವಿತ್ತಾಧಿಕಾರಿ ವಿರುದ್ಧ ದೂರ ದಾಖಲಿಸಲು ವಿದ್ಯಾರ್ಥಿಗಳು ಮುಂದಾಗ್ತಿದ್ದಂತೆ ಜಯಲಕ್ಷ್ಮೀ ವಿದ್ಯಾರ್ಥಿ ಮತ್ತು ವಿದ್ಯಾರ್ಥಿ ಮುಖಂಡರ ಮೇಲೆ ದೂರು ದಾಖಲಿಸಿದ್ದಾರೆ. ಇದು ವಿದ್ಯಾರ್ಥಿಗಳ ಕೆಂಗಣ್ಣಿಗೆ ಕಾರಣವಾಗಿದೆ.
ಹೌದು,  ಯುನಿವರ್ಸಿಟಿಯಲ್ಲಿ 28 ಕೋಟಿ ರಿಲೀಸ್ ಪ್ರಕರಣ ದಿನಕ್ಕೊಂದು ಟ್ವಿಸ್ಟ್  ಪಡೆಯುತ್ತಿದೆ. ವಿತ್ತಾಧಿಕಾರಿ ಜಯಲಕ್ಷ್ಮೀ ವಿದ್ಯಾರ್ಥಿಗಳ ಮೇಲೆ ದೂರು ನೀಡಿದ ಬಳಿಕ ವಿದ್ಯಾರ್ಥಿಗಳು ಸಿಡಿದೆದ್ದಿದ್ರು.ಹೀಗಾಗಿ ವಿದ್ಯಾರ್ಥಿಗಳ ಮೇಲೆ ನೀಡಿರುವ ಕಂಪ್ಲೇಟ್ ನ್ನ ವಾಪಸ್ಸು ತೆಗೆದುಕೊಳ್ಳಬೇಕು. ನ್ಯಾಯ ಸಿಗಬೇಕು. ನಮ್ಮ ಹಣವನ್ನ ಬೇರೆ  ಕಾಲೇಜ್ ಗೆ ಬಳಸಿಕೊಳ್ಳಬಾರದು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ರು. ಅಷ್ಟೇ ಅಲ್ಲದೆ ಯುನಿವರ್ಸಿಟಿಯ ಸುಮಾರು 52 ವಿಭಾಗಗಳನ್ನ ಬಂದ್ ಮಾಡಿ ವಿದ್ಯಾರ್ಥಿಗಳು ಯುನಿವರ್ಸಿಟಿ ಮುಂಭಾಗ ಧರಣಿ ನಡೆಸಿದ್ರು .ತಮಟೆ ಹೊಡೆದು ಘೋಷಣೆ ಕೂಗಿ ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ರು.

ಆಕ್ರಮ ಹಣ ವರ್ಗಾವಣೆಯನ್ನ ವಿವಿ ಮಾಡ್ತಿದೆ . ವಿತ್ತಾಧಿಕಾರಿ ಜಯಲಕ್ಷ್ಮೀ ಹಾಗೂ ವಿಸಿ ವಿರುದ್ಧ ಹೋರಾಡಿದಕ್ಕೆ ನಮ್ಮಗೆ ಕಾನೂನಿನ ಮೂಲಕ ಬೆದರಿಕೆ ಹಾಕ್ತಿದ್ದಾರೆ ಎಂದು ವಿದ್ಯಾರ್ಥಿಗಳು ಅಸಾಮಾಧಾನ ಹೊರಹಾಕಿದ್ರು. ಹಣಕಾಸು ಒಂದು ವಿಷಯಕ್ಕೆ ವಿವಿಯಲ್ಲಿ ದೊಡ್ಡ ರಂಪಾಟ-ರದ್ದಾಂತವೇ ನಡೆಯಿತ್ತು. ಬೆಂಗಳೂರು ವಿವಿಯ ಕುಲಸಚಿವ ಪ್ರೊ ಕೊಟ್ರೇಶ್ ವಿದ್ಯಾರ್ಥಿಗಳ ಮೇಲೆ ಹಾಕಿರುವ ದೂರನ್ನ ಹಿಂಪಡೆಯುವ ಬಗ್ಗೆ ಚರ್ಚೆ ಮಾಡಲಾಗುತ್ತೆ. fir ಹಿಂಪಡೆಯಲು ಕಾನೂನಿನಲ್ಲಿ ಅವಕಾಶ ಇದೆ. ಹೀಗಾಗಿ ವಿಸಿ ವಿದ್ಯಾರ್ಥಿಗಳ ಮೇಲೆ ಹಾಕಿರುವ  fir  ಹಿಂಪಡೆಯಲು ತಿಳಿಸಿದ್ದಾರೆ. ಈಗಾಗಲ್ಲೇ ಈ ಬಗ್ಗೆ ಪೊಲೀಸ್ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದಾರೆ. 14 ದಿನಗಳ ಕಾಲ ಎಫ್ ಐ ಆರ್ ಹೋಲ್ಡ್ ಮಾಡುವುದಾಗಿ ಹೇಳಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳ ಮೇಲಿನ ಎಫ್ ಐ ಆರ್ ಹಿಂಪಡೆಯುತ್ತೇವೆ ಅಂದಿದ್ದಾರೆ. ಆದ್ರೆ ವಿದ್ಯಾರ್ಥಿಗಳು ಮಾತ್ರ  ಭರವೆಸೆಗೆ ಮಾತಿಗೆ ಜಾಗುತ್ತಿಲ್ಲ

ಒಟ್ನಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಹೊತ್ತಿದ ಒಂದು ಕಿಡಿಯಿಂದ ಯುನಿವರ್ಸಿಟಿಯೇ ಅಲ್ಲೋಲ-ಕಲೋಲವಾಗೋಗಿದೆ.ವಿದ್ಯಾರ್ಥಿಗಳು ಭರವಸೆಯ ಮಾತನ್ನ ಕೇಳ್ತಿಲ್ಲ. ಇನ್ನೂ ಹೋರಾಟ ಮಾಡಲು ನಿರ್ಧಾರ ಮಾಡಿದ್ದಾರೆ. ಇನ್ನು ದೂರನ್ನ ಸಂಪೂರ್ಣವಾಗಿ ಹಿಂಪಡೆಯುವವರೆಗೂ ವಿದ್ಯಾರ್ಥಿಗಳ ಅನಿರ್ದಿಷ್ಟವಾಧಿ ಧರಣಿ ನಿಲ್ಲಲ್ಲ. ಕುಲಸಚಿವರಿಗೆ ತಲೆನೋವು ತಪ್ಪಲ್ಲ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Siddaramaiah: ಇದೆಲ್ಲಾ ಚೆನ್ನಾಗಿರಲ್ಲ, ಆಂಧ್ರಪ್ರದೇಶ ಸಿಎಂಗೆ ಖಡಕ್ ಎಚ್ಚರಿಕೆ ನೀಡಿದ ಸಿಎಂ ಸಿದ್ದರಾಮಯ್ಯ

ಟೀಕೆಗಳ ಬಳಿಕ ಕೊನೆಗೂ ಹಣಕಾಸು ಆಯೋಗದ ಸಭೆಗೆ ಹೋಗಲು ತೀರ್ಮಾನಿಸಿದ ಸಿಎಂ ಸಿದ್ದರಾಮಯ್ಯ

Karnataka Caste census: ಜಾತಿಗಣತಿ ಮಾಡಲು ಯಾಕೆ ಕೋಟ್ಯಾಂತರ ರೂಪಾಯಿ ಖರ್ಚಾಗುತ್ತದೆ, ಇಲ್ಲಿದೆ ಸೀಕ್ರೆಟ್

Chinnaswamy stampede: ವಿರಾಟ್ ಕೊಹ್ಲಿ ಸ್ನೇಹಿತನ ಭವಿಷ್ಯ ಇಂದು ನಿರ್ಧಾರ

Funny video: ಗೆಜ್ಜೆ ಕಟ್ಟಿಸಲು ಆಟ ಆಡಿಸಿದ ವಧು, ಕೊನೆಗೆ ಆಗಿದ್ದೇನು

ಮುಂದಿನ ಸುದ್ದಿ
Show comments