ಪುಟಾಣಿ ಎಕ್ಸ್ ಪ್ರೆಸ್ ರೈಲಿನಲ್ಲಿ ಪುಟಾಣಿಗಳ ರೌಂಡ್ಸ್

Webdunia
ಭಾನುವಾರ, 30 ಜುಲೈ 2023 (19:38 IST)
ಚಿಕು ಬುಕು ರೈಲು ಅಂತಾ ಪುಟಾಣಿ ಎಕ್ಸ್ ಪ್ರೆಸ್ ರೈಲಿನಲ್ಲಿ ಮಕ್ಕಳ ಜೊತೆ ರೌಂಡ್ಸ್ ಹಾಕಿದ ಪೋಷಕರು. ಮಕ್ಕಳೊಂದಿಗೆ ಪೋಷಕರ ಆಟದ ಜೊತೆ ಅವರ ತುಂಟಾಟ ನೋಡೋಕೆ ಚೆಂದವೊ ಚೆಂದ. ಯೆಸ್ ವಾರ ಪೂರ್ತಿ ಮನೆ ಆಫೀಸ್ ಅನ್ನೋ ಪೋಷಕರು ಮಕ್ಕಳೊಂದಿಗೆ ಆಟ ಆಡಿ ಕಾಲ ಕಳೆದ್ರೂ. ಇನ್ನು ಸ್ಕೂಲ್ ಹೋಮ್ ವರ್ಕ್ ಅಂತಾ ಬೋರ್ ಆಗಿದ್ದ ಮಕ್ಕಳು, ರೈಲಿನಲ್ಲಿ ರೌಂಡ್ಸ್ ಹಾಕಿದ್ರೂ.ಸಧಾ ತಮ್ಮ ತಮ್ಮ ಕೆಲಸಗಳಲ್ಲೇ ಬ್ಯುಸಿ ಆಗಿ ಮಕ್ಕಳಿಗೂ ಸಮಯ ಕೊಡದ ರಾಜಧಾನಿ ಜನ ಮೊಬೈಲ್ ಮಾಲ್ ಅಂತಷ್ಟೇ ಇದ್ರು, ಆದ್ರೆ ಈಗ ಬೆಂಗಳೂರಿನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಕಬ್ಬನ್ ಪಾರ್ಕ್ ನ ಬಾಲಭವನ ಇದೀಗ ಮತ್ತಷ್ಟು ಮೆರಗು ಪಡೆದುಕೊಂಡಿದ್ದು ವೀಕೆಂಡ್ ನಲ್ಲಿ ಇಲ್ಲಿಗೆ ಭೇಟಿ ನೀಡೋ ಜನರ ಸಂಖ್ಯೆ ಕೂಡ ಹೆಚ್ಚಳವಾಗಿದೆ.

ಕಬ್ಬನ್ ಪಾರ್ಕ್ ಬಾಲಭವನದಲ್ಲಿ ವೀಕೆಂಡ್ ಹಿನ್ನೆಲೆ ಜನಸಾಗರ ಹರಿದು ಬಂದಿತ್ತು. ಮಕ್ಕಳ ಜೊತೆ ಪೋಷಕರು ಬಾಲ್ಯ ಮೆಲುಕು ಹಾಕಿದರು. ಇನ್ನು ಮೊಹರಂ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಕೂಡ ಆಗಮಿಸಿದರು. ಚಿಣ್ಣರು, ಜನರಿಂದ ಬಾಲಭವನ ತುಂಬಿ ಹೋಗಿತ್ತು. ಕೋವಿಡ್ ಬಳಿಕ ಕೆಟ್ಟು ನಿಂತಿದ್ದ ಪುಟಾಣಿ ರೈಲಿಗೆ ಮರುಜೀವ ನೀಡಲಾಗಿದ್ದು, ಬಾಲಭವನಕ್ಕೂ ಹೊಸ ಟಚ್ ನೀಡಿರೋದರಿಂದ ಪ್ರವಾಸಿಗರು ಹೆಚ್ಚಿದ್ದಾರೆ. ರಜೆ ಅಂತಾ ಮೊಬೈಲ್, ಟಿವಿ ಎಂದು ಮಕ್ಕಳು ಕಾಲ ಹರಣ ಮಾಡುವ ಬದಲು ಪ್ರಕೃತಿಯೊಂದಿಗೆ ಆಟ ಆಡಿ, ಫ್ಯಾಮಿಲಿ ಜೊತೆ ಎಂಜಾಯ್ ಮಾಡಿದ್ರು. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪಶ್ಚಿಮ ಏಷ್ಯಾ ಸಂಘರ್ಷ: ರಾಜ್ಯಸಭೆಯಲ್ಲಿ ನರೇಂದ್ರ ಮೋದಿ ಮಹತ್ವದ ಮಾತು ಸಾಧ್ಯತೆ

ಇಸ್ರೇಲ್‌ನಲ್ಲಿರುವ ಭಾರತೀಯರ ಬಗ್ಗೆ ಹೊಸ ಅಪ್ಡೇಟ್ ಕೊಟ್ಟ ವಿದೇಶಾಂಗ ವ್ಯವಹಾರಗಳ ಸಚಿವಾಲಯ

ಪ್ರಯಾಗ್‌ರಾಜ್‌ ಕಟ್ಟಡ ಕುಸಿತ ಪ್ರಕರಣ, ಮೃತರ ಕುಟುಂಬಕ್ಕೆ ಪ್ರಧಾನಿ 2ಲಕ್ಷ ಘೋಷಣೆ

ಕೊನೆಗೂ ಸಂಚಾರಕ್ಕೆ ಸಿದ್ಧವಾದ ಪಿಂಕ್ ಲೈನ್‌, ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್‌

ಎರಡು ಕ್ಷೇತ್ರಗಳ ಉಪಚುನಾವಣೆ: ಬಿಜೆಪಿ ಗೆಲುವು ಪಕ್ಕಾ ಎಂದಾ ಬಿ.ಶ್ರೀರಾಮುಲು

ಮುಂದಿನ ಸುದ್ದಿ
Show comments