Webdunia - Bharat's app for daily news and videos

Install App

ಅಪ್ಪು ಕ್ರೀಡಾ ಪ್ರೀತಿ

Webdunia
ಬುಧವಾರ, 16 ಮಾರ್ಚ್ 2022 (18:43 IST)
ಚಿನ್ನಸ್ವಾಮಿ ಕ್ರೀಡಾಂಗಣ, ಶ್ರೀಕಂಠೀರವ ಕ್ರೀಡಾಂಗಣ, ಫುಟ್ಬಾಲ್‌ ಅಂಗಣ ಇಲ್ಲಿ ನಡೆದ ಕ್ರೀಡಾಕೂಟಗಳನ್ನು, ಕ್ರಿಕೆಟ್‌ ಪಂದ್ಯಗಳನ್ನು ಕಂಡವರಿಗೆ, ವರದಿ ಮಾಡಿದವರಿಗೆ ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ಅವರ ಕ್ರೀಡಾಪ್ರೇಮ, ಕ್ರೀಡಾಪಟುಗಳಿಗೆ ಅವರು ನೀಡುತ್ತಿದ್ದ ಸ್ಫೂರ್ತಿ ಇವುಗಳ ಪರಿಚಯ ಇದ್ದೇ ಇರುತ್ತದೆ.
ಮಾರ್ಚ್‌ 17 ಪುನೀತ್‌ ರಾಜ್‌ ಕುಮಾರ್‌ ಅವರ ಜನುಮದಿನ, ಅವರು ನಮ್ಮನ್ನಗಲಿ ಮಾಸಗಳು ಕಳೆದರೂ, ಅವರ ನೆನಪು ಮಾಸದೇ ಉಳಿದಿದೆ. ಇದಕ್ಕೆ ಮುಖ್ಯ ಕಾರಣ ಅವರು ಹೆಜ್ಜೆ ಇಟ್ಟಲ್ಲೆಲ್ಲ ಅರಳಿದ ಸ್ಫೂರ್ತಿ. ಕ್ರೀಡೆಗೂ ಪುನೀತ್‌ಗೂ ಅಪಾರ ನಂಟಿದೆ. ಕರ್ನಾಟಕದಲ್ಲಿ ಕೆಲವು ಕ್ರೀಡಾಕೂಟಗಳು ಇಂದಿಗೂ ಯಶಸ್ಸನ್ನು ಕಾಣಲು ಪುನೀತ್‌ ರಾಜ್‌ಕುಮಾರ್‌ ಅವರ ಹೆಸರೇ ಕಾರಣ.
 
ಪುನೀತ್‌ ಕ್ರೀಡೆಯ ಅಂಬಾಸಿಡರ್‌. ಯಾವುದೇ ಕ್ರೀಡಾಕೂಟವಿರಲಿ ಪುನೀತ್‌ ಅವರು ಅದರ ರಾಯಭಾರಿಯಾಗಿದ್ದರೆಂದರೆ ಆ ಕ್ರೀಡಾಕೂಟ ಯಶಸ್ವಿಯಾಗುತ್ತದೆ. ಮೊನ್ನೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಶ್ರೀಲಂಕಾ ನಡುವಿನ ಟೆಸ್ಟ್‌ ಪಂದ್ಯದ ವೇಳೆ ನೆರೆದ ಪ್ರೇಕ್ಷಕರೆಲ್ಲರೂ ʼಗೊಂಬೆ ಹೇಳುತೈತೆ..ʼ ಹಾಡಿಗೆ ಎದ್ದು ನಿಂತು ಧ್ವನಿಗೂಡಿಸಿದ್ದನ್ನು ಕಂಡಾಗ ಪುನೀತ್‌ ಕ್ರೀಡಾಂಗಣದ ವಿಐಪಿ ಗ್ಯಾಲರಿಯಲ್ಲಿ ಕುಳಿತಿರುವಂತೆ ಕಂಡು ಬಂತು. ಇಲ್ಲವೆಂದರೂ ಕ್ರೀಡಾಭಿಮಾನಿಗಳ ಹೃಯಾಂಗಣದಲ್ಲಿ ಅವರು ಅಮರರಾಗಿಯೇ ಉಳಿದಿದ್ದಾರೆ.
 
ಅಂತಾರಾಷ್ಟ್ರೀಯ ಮ್ಯಾರಥಾನ್‌ಗಳಲ್ಲಿ ಬೆಂಗಳೂರಿನಲ್ಲಿ ನಡೆಯುವ ವಿಶ್ವ10K ಮ್ಯಾರಥಾನ್‌ ಅತ್ಯಂತ ಪ್ರಸಿದ್ಧವಾದುದು. ಈ ಮ್ಯಾರಥಾನ್‌ಗೆ ಪುನೀತ್‌ ರಾಜ್‌ಕುಮಾರ್‌ ಬ್ರಾಂಡ್‌ಅಂಬಾಸಿಡರ್‌ ಆದಾಗಿನಿಂದು ಇದು ಜಾಗತಿಕ ಮಟ್ಟದಲ್ಲಿ ಗೋಲ್ಡ್‌ ಮ್ಯಾರಥಾನ್‌ ಆಗಿ ರೂಪುಗೊಂಡಿದೆ. ಅಂತಾರಾಷ್ಟ್ರೀಯ ಓಟಗಾರರ ಜೊತೆಯಲ್ಲಿ ಭಾರತದ ವಿವಿಧ ಸ್ಥರದ ಕ್ರೀಡಾಪಟುಗಳು, ಸಾಮಾನ್ಯ ಜನರು, ವಿಶೇಷ ಚೇತನರು ಇದರಲ್ಲಿ ಪಾಲ್ಗೊಂಡು ಕೊಟ್ಯಂತರ ರೂ. ಹರಿದು ಬಂತು. ದುರ್ಬಲರಿಗೆ ನೆರವಾಗುವ ಕೆಲಸವೂ ನಡೆಯಿತು. ಪುನೀತ್‌ ಬ್ರಾಂಡ್‌ ಅಂಬಾಸಿಡರ್‌ ಎಂದು ಕೇವಲ ಸ್ಟೇಜ್‌ನಲ್ಲಿ ನಿಂತು ಅಭಿಮಾನಿಗಳಿಗೆ ಕೈ ಬೀಸಿಲ್ಲ, 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments