Webdunia - Bharat's app for daily news and videos

Install App

ಖೆಡ್ಡಾಕ್ಕೆ ಬಿದ್ದ ಪುಂಡಾನೆ!

Webdunia
ಗುರುವಾರ, 29 ಜೂನ್ 2023 (18:21 IST)
ಇಬ್ಬರು ಸಾರ್ವಜನಿಕರನ್ನ ಬಲಿ ಪಡೆದಿದ್ದ ಪುಂಡಾನೆಯನ್ನ ಅರಣ್ಯ ಇಲಾಖೆ‌ ಸೆರೆಹಿಡಿದಿದೆ. ಅರಣ್ಯ ಇಲಾಖೆಯ ಆದೇಶದ ಮೇರೆಗೆ ದಸರಾ ಕ್ಯಾಪ್ಟನ್ ಅಭಿಮನ್ಯು ತಂಡದಿಂದ ಆನೆಯನ್ನ ಸೆರೆಹಿಡಿಯಲಾಗಿದೆ.
ವಿರಾಜಪೇಟೆ ತಾಲೂಕಿನ ಗುಹ್ಯ ಸಮೀಪದ ಶಿವಾಜಿ ಎಂಬುವವರ ತೋಟದಲ್ಲಿ ಸುಮಾರು 35 ವರ್ಷ ಪ್ರಾಯದ ಗಂಡಾನೆಯನ್ನ ಸೆರೆ‌ ಹಿಡಿಯಲಾಗಿದೆ. ನಾಗರಹೊಳೆ ಪಶುವೈದ್ಯ ರಮೇಶ್ ನೇತೃತ್ವದಲ್ಲಿ ಆನೆಗೆ ಅರವಳಿಕೆ ನೀಡಲಾಗಿತ್ತು. ಸೆರೆಯಾದ ಆನೆಗೆ ರೆಡಿಯೋಕಾಲರ್ ಅಳವಡಿಸಿ ಡಿ‌.ಬಿ.ಕುಪ್ಪೆ ಅರಣ್ಯ ವಲಯಕ್ಕೆ ಸ್ಥಳಾಂತರಿಸಲಾಗಿದೆ. ವಿರಾಜಪೇಟೆ ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಬಿ.ಎಂ‌.ಚೆನ್ನಬಸಪ್ಪ ನೇತೃತ್ವದಲ್ಲಿ 60 ಸಿಬ್ಬಂದಿಗಳು ಕಾರ್ಯಚರಣೆ‌ಯಲ್ಲಿ ಭಾಗಿಯಾಗಿದ್ದರು. ಆನೆ ಸೆರೆಯಲ್ಲಿ ಸಾಕಾನೆಗಳಾದ ಕ್ಯಾಪ್ಟನ್ ಅಭಿಮನ್ಯು, ಭೀಮಾ, ನೇಂದ್ರ ಸೇರಿ ನಾಲ್ಕು ಆನೆಗಳು ಭಾಗಿಯಾಗಿದ್ವು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments