Select Your Language

Notifications

webdunia
webdunia
webdunia
webdunia

ಗಡಿ ಜಿಲ್ಲೆಯಲ್ಲಿ ವಾಟಾಳ್ ಪ್ರತಿಭಟನೆ

ಗಡಿ ಜಿಲ್ಲೆಯಲ್ಲಿ ವಾಟಾಳ್ ಪ್ರತಿಭಟನೆ
ಉತ್ತರ ಕನ್ನಡ- ಕಾರವಾರ , ಶನಿವಾರ, 24 ನವೆಂಬರ್ 2018 (19:43 IST)
ಗಡಿ ಜಿಲ್ಲೆ ಕಾರವಾರದ ಅಭಿವೃದ್ದಿಗಾಗಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕಾರವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ನಗರದ ಮಾಲಾದೇವಿ ಮೈದಾನದಿಂದ ಪ್ರತಿಭಟನಾ ಮೆರವಣಿಗೆ ಪ್ರಾರಂಭವಾಗಿ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಗಡಿ ಭಾಗವಾಗಿದ್ದರೂ  ಕಾರವಾರ ಅಭಿವೃದ್ದಿಯಲ್ಲಿ ಸಾಕಷ್ಟು ಹಿಂದುಳಿದಿದೆ. ಇಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಿಲ್ಲ, ಪ್ರತಿನಿತ್ಯ ಉದ್ಯೋಗಕ್ಕಾಗಿ ಗೋವಾಕ್ಕೆ ಕಾರವಾರದಿಂದ ಸಾವಿರಾರು  ಯುವಕರು ತೆರಳುತ್ತಿದ್ದಾರೆ.  ಹೀಗಾಗಿ ರಾಜ್ಯದ ಗಡಿಭಾಗವಾದ  ಕಾರವಾರವನ್ನ ಅಭಿವೃದ್ದಿ ಮಾಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಇನ್ನು ಹೈದರಾಬಾದ್ ಕರ್ನಾಟಕ ಮಾದರಿಯಲ್ಲಿ ಗೋವಾ ಕರ್ನಾಟಕವೆಂದು ಕಾರವಾರಕ್ಕೆ ವಿಶೇಷ ಸ್ಥಾನಮಾನ ನೀಡಬೇಕು. ಕೈಗಾರಿಕೆಗಳು ಸ್ಥಾಪನೆ ಮಾಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ವಾಟಾಳ್ ನಾಗರಾಜ್ ಎತ್ತಿನಗಾಡಿಯಲ್ಲಿ ಸಂಚರಿಸುವ ಮೂಲಕ ಗಮನ ಸೆಳೆದರು. ವಿವಿಧ ಸಂಘಟನೆಗಳು ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆಗೆ ಬೆಂಬಲ ನೀಡಿದರು. 



 


Share this Story:

Follow Webdunia kannada

ಮುಂದಿನ ಸುದ್ದಿ

ವಿಷದ ಬಾಟಲಿಯೊಂದಿಗೆ ರೈತ ಪ್ರತಿಭಟನೆ ಯಾಕೆ ಗೊತ್ತಾ?