Publish Date: Mon, 17 Jul 2023 (17:02 IST)
Updated Date: Mon, 17 Jul 2023 (17:04 IST)
ಸಿಎಂ ಸಿದ್ದರಾಮಯ್ಯ ನಿವಾಸದ ಎದುರು ನೂರಾರು ಸಂಖ್ಯೆಯಲ್ಲಿ ಪೌರ ಕಾರ್ಮಿಕರು ಆಗಮಿಸಿದ್ದು ಪ್ರತಿಭಟನೆ ನಡೆಸಿದ್ದಾರೆ.
ಪೌರಕಾರ್ಮಿಕರ ಸೇವೆಯನ್ನು ಖಾಯಂ ಮಾಡಬೇಕು ಹಾಗೂ ಮೈಸೂರು ನಾರಾಯಣರವರಿಗೆ ಎಂಎಲ್ಸಿ ಮಾಡಬೇಕು.೨ ಪ್ರಮುಖ ಬೇಡಿಕೆಗಳನ್ನು ಇಟ್ಟು ಪ್ರತಿಭಟನೆ ಮಾಡಿದ್ದಾರೆ.ಪ್ರತಿ ಬಾರಿ ಹೊಸ ಸರ್ಕಾರ ಬಂದಾಗ ಪೌರಕಾರ್ಮಿಕರ ಖಾಯಂ ಮಾಡೋ ಭರವಸೆ ನೀಡ್ತಾರೆ.ಆದರೆ ಅದು ಕಾರ್ಯರೂಪಕ್ಕೆ ಬರೋದಿಲ್ಲ.ಈ ಬಾರಿಯಾದ್ರೂ ಖಾಯಂ ಮಾಡಬೇಕು ಎಂಬುದು ನಮ್ಮ ಬೇಡಿಕೆ ಎಂದು ಒತ್ತಾಯಿಸಿ ಪೌರ ಕಾರ್ಮಿಕರು ಪ್ರತಿಭಟನೆ ಮಾಡ್ತಿದ್ದಾರೆ.