Publish Date: Sat, 27 Jun 2026 (16:42 IST)
Updated Date: Sat, 27 Jun 2026 (16:46 IST)
ಚಿಕ್ಕಬಳ್ಳಾಪುರ: ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಎಚ್ ಡಿ ಕುಮಾರಸ್ವಾಮಿ ಮತ್ತು ಸಂಸದ ಡಾ ಸುಧಾಕರ್ ಬೆಂಬಲಿಗರಿಂದ ಪ್ರತಿಭಟನೆ ನಡೆದಿದ್ದು, ಶಾಸಕರು ಕಾರಿನ ಮೇಲೆ ನಿಂತು ತೋಳು ತಟ್ಟಿ ಮೀಸೆ ತಿರುವಿ ಸವಾಲು ಹಾಕಿದ್ದಾರೆ.
ನಾಡಿನಾದ್ಯಂತ ಇಂದು ಕೆಂಪೇಗೌಡ ಜಯಂತಿ ಉತ್ಸವ ಕಾರ್ಯಕ್ರಮ ಮಾಡಲಾಗುತ್ತಿದೆ. ಚಿಕ್ಕಬಳ್ಳಾಪುರದಲ್ಲಿ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮದಲ್ಲಿ ಶಾಸಕ ಪ್ರದೀಪ್ ಈಶ್ವರ್ ಭಾಗಿಯಾಗಿದ್ದರು. ಆದರೆ ಕಾರ್ಯಕ್ರಮ ನಡೆಯುವಾಗ ವೇದಿಕೆ ಕೆಳಗೆ ಬಂದ ಕುಮಾರಸ್ವಾಮಿ ಬೆಂಬಲಿಗರು ಜೋರಾಗಿ ಘೋಷಣೆಗಳನ್ನು ಕೂಗಿ ಗಲಾಟೆ ಎಬ್ಬಿಸಿದ್ದಾರೆ.
ಪರಿಸ್ಥಿತಿ ಕೈ ಮೀರುತ್ತಿದ್ದಂತೇ ಪೊಲೀಸರು ಲಾಠಿ ಪ್ರಹಾರ ನಡೆಸಬೇಕಾಯಿತು. ಹಾಗಿದ್ದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದೇ ಇದ್ದಾಗ ಆದಿಚುಂಚನಗಿರಿ ಶಾಖಾ ಮಠದ ಮಂಗಳನಾಥ ಶ್ರೀಗಳನ್ನು ಕರೆಸಿ ಪ್ರತಿಭಟನಾಕಾರರನ್ನು ಸುಮ್ಮನಾಗಿಸಬೇಕಾಯಿತು.
ಈ ಘಟನೆ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡಿರುವ ಪ್ರದೀಪ್ ಈಶ್ವರ್, ಎಚ್ ಡಿಕೆ ಬೆಂಬಲಿಗರು ಎಣ್ಣೆ, ಹಣದ ಆಸೆಗೆ ಬಂದು ಗಲಾಟೆ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ. ಅಲ್ಲದೆ, ತಮ್ಮ ಕಾರಿನ ರೂಫ್ ಟಾಪ್ ಮೇಲೆ ನಿಂತು ಪ್ರತಿಭಟನಾಕಾರರತ್ತ ತೋಳು ತಟ್ಟಿ ಮೀಸೆ ತಿರುವಿ ಸವಾಲು ಹಾಕಿದ್ದಾರೆ. ಆ ವಿಡಿಯೋಗಳು ವೈರಲ್ ಆಗಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ