Select Your Language

Notifications

webdunia
webdunia
webdunia
webdunia

ಕರ್ನಾಟಕವನ್ನು ರಕ್ಷಣಾ ಉತ್ಪಾದನಾ ಕೇಂದ್ರವಾಗಿ ಉತ್ತೇಜಿಸುತ್ತದೆ: ಸಚಿವ ನಿರಾಣಿ

ಕರ್ನಾಟಕವನ್ನು ರಕ್ಷಣಾ ಉತ್ಪಾದನಾ ಕೇಂದ್ರವಾಗಿ ಉತ್ತೇಜಿಸುತ್ತದೆ: ಸಚಿವ ನಿರಾಣಿ
bangalore , ಭಾನುವಾರ, 19 ಜೂನ್ 2022 (19:49 IST)
ಮುಂಬರುವ ನವೆಂಬರ್ 2, 3, 4 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶ ದ  ಪೂರ್ವಭಾವಿಯಾಗಿ, ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯ  ಇಲಾಖೆಯು  ವೈಮಾನಿಕ (ಏರೋಸ್ಪೇಸ್) ಮತ್ತು ರಕ್ಷಣಾ ನೀತಿ (2022-27)ಯನ್ನು ‌ಸಿದ್ದಪಡಿಸಿದೆ. ಬಹು ನಿರೀಕ್ಷಿತ  ಈ  ಹೊಸ ನೀತಿಯು ಕರ್ನಾಟಕವನ್ನು ಆದ್ಯತೆಯ ಹೂಡಿಕೆಯ ತಾಣವನ್ನಾಗಿ ರೂಪಿಸುವ ಗುರಿಯನ್ನು ಹಾಕಿಕೊಂಡಿದೆ.
 
ಏರೋಸ್ಪೇಸ್ ಮತ್ತು ರಕ್ಷಣಾ ತಯಾರಿಕಾ ವಲಯದಲ್ಲಿ ‌
ರಕ್ಷಣಾ ಸಚಿವಾಲಯವು 2027 ರ ವೇಳೆಗೆ ಶಸ್ತ್ರಾಸ್ತ್ರದಲ್ಲಿ 70% ಸ್ವಾವಲಂಬನೆಯ ಗುರಿಯನ್ನು ಹೊಂದಿದೆ, ಇದು
ಬಂಡವಾಳ ಹೂಡಿಕೆದಾರರಿಗೆ ದೊಡ್ಡ ನಿರೀಕ್ಷೆಗಳನ್ನು ಸೃಷ್ಟಿಸುವ ಸಂಭವವಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
 
5 ವರ್ಷಗಳ ನೀತಿಯ ಅವಧಿಯಲ್ಲಿ ಏರೋಸ್ಪೇಸ್ ಮತ್ತು ರಕ್ಷಣಾ ವಲಯದಲ್ಲಿ 45,000 ಕೋಟಿ ರೂಪಾಯಿಗಳ (USD 6 Bn) ಹೂಡಿಕೆಗಳನ್ನು ಆಕರ್ಷಿಸಲು, 60,000 ಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಲಾಗಿದೆ. ಎಂ.ಆರ್.‌ಒ ಸೇರಿದಂತೆ ರಾಜ್ಯವನ್ನು ಉತ್ಪಾದನಾ ಕೇಂದ್ರವಾಗಿ ಅಭಿವೃದ್ಧಿಪಡಿಸುವುದರ‌ ಜೊತೆಗೆ ಭಾರತೀಯ ಮಾರುಕಟ್ಟೆ, ಮತ್ತು ರಫ್ತು ಎರಡಕ್ಕೂ
ಇದು ಹೆಚ್ಚಿನ ಅನುಕೂಲ ಕಲ್ಪಿಸುವುದು ಈ‌ ನೀತಿಯ 
 ಪ್ರಮುಖ ಲಕ್ಷಣವಾಗಿದೆ ಎಂದು ಸಚಿವ ನಿರಾಣಿ ಅವರು ಮಾಧ್ಯಮ ಹೇಳಿಕೆಯಲ್ಲಿ ಭಾನುವಾರ ತಿಳಿಸಿದ್ದಾರೆ.
 
ಭಾರತದ ಪ್ರಸ್ತುತ ಮಾರುಕಟ್ಟೆ ಗಾತ್ರದ ಅಂದಾಜು
7 ಅಮೇರಿಕನ್  ಬಿಲಿಯನ್‌ ಡಾಲರ್ ಆಗಲಿದ್ದು
2032 ರ ವೇಳೆಗೆ  15 ಬಿಲಿಯನ್ ಬೆಳೆಯುವ ನಿರೀಕ್ಷೆಯಿದೆ ಎಂದು  ನಿರಾಣಿ ಹೇಳಿದ್ದಾರೆ.
 
ಕರ್ನಾಟಕವು ರಕ್ಷಣಾ ಎಲೆಕ್ಟ್ರಾನಿಕ್ಸ್ ವ್ಯವಸ್ಥೆಗಳು/ಉತ್ಪನ್ನಗಳಲ್ಲಿ 40% ರಷ್ಟು ಪ್ರಮುಖ ಪಾಲನ್ನು ನೀಡುತ್ತದೆ. ಮತ್ತಷ್ಟು ಉತ್ತೇಜನ ನೀಡಲು, ಈ ನೀತಿಯು ಬಾಹ್ಯಾಕಾಶ, ರಕ್ಷಣಾ ಮತ್ತು ಏರೋಸ್ಪೇಸ್ ತಯಾರಕರು ಹಾಗೂ  ಇತರ ಉಪ-ವಲಯಗಳಿಗೆ ಬೃಹತ್ ಭೂಮಿ ಮತ್ತು ಆರ್ಥಿಕ ಪ್ರೋತ್ಸಾಹದ ಪ್ಯಾಕೇಜ್‌ಗಳನ್ನು ಒದಗಿಸಲಿದೆ.
 
ಆಧುನಿಕ ಯುದ್ಧ ವ್ಯವಸ್ಥೆಗಳಲ್ಲಿ ಎಲೆಕ್ಟ್ರಾನಿಕ್ಸ್ ಪ್ರಾಥಮಿಕ ಸಾಮರ್ಥ್ಯವಾಗಿದ್ದು, ಪ್ರಮುಖ ವೇದಿಕೆಗಳಲ್ಲಿ 40% ಕ್ಕಿಂತ ಹೆಚ್ಚಿನ ಮೌಲ್ಯದ ಕೊಡುಗೆಯಾಗಿದೆ. ಭಾರತೀಯ
ವೈಮಾನಿಕ ಮತ್ತು ರಕ್ಷಣಾ ನೀತಿ ಯಲ್ಲಿ ಎಲೆಕ್ಟ್ರಾನಿಕ್ಸ್ ಬೇಡಿಕೆಯ ಬೆಳವಣಿಗೆಯು ಶಸ್ತ್ರಾಸ್ತ್ರ ವೇದಿಕೆಗಳ ಆಧುನೀಕರಣ, ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಪರಿಚಯ, ಸ್ವದೇಶೀಕರಣದ ಪ್ರಭಾವ ಮತ್ತು ಮೇಕ್ ಇನ್ ಇಂಡಿಯಾ ಉಪಕ್ರಮದಿಂದ ನಡೆಸಲ್ಪಡುತ್ತದೆ.
 
ಹೊಸ ‌ ನೀತಿಯ ಅಡಿಯಲ್ಲಿ ಬೆಂಗಳೂರು, ಬೆಳಗಾವಿ, ಮೈಸೂರು, ತುಮಕೂರು ಮತ್ತು ಚಾಮರಾಜನಗರ 
ಸೇರಿದಂತೆ ರಾಜ್ಯದ 5 ಏರೋಸ್ಪೇಸ್ ಮತ್ತು ಡಿಫೆನ್ಸ್ ಹಬ್‌ಗಳನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ.
 
"ರಸ್ತೆಗಳು, ಕ್ಯಾಪ್ಟಿವ್ ಪವರ್ ಉತ್ಪಾದನೆ, ನೀರು ಸರಬರಾಜು, ಆರ್ & ಡಿ ಸೌಲಭ್ಯಗಳು, ಸಾಮಾನ್ಯ ತರಬೇತಿ ಸೌಲಭ್ಯಗಳು, ಸಾಮಾನ್ಯ ಗೋದಾಮಿನ ಸೌಲಭ್ಯಗಳು, ಉತ್ಪಾದನಾ ಸಂಕೀರ್ಣ ಮತ್ತು ಅಂತರ್ನಿರ್ಮಿತ ಸ್ಥಳದಂತಹ ಪ್ಲಗ್-ಎನ್-ಪ್ಲೇ ಸೌಲಭ್ಯಗಳು ಸೇರಿದಂತೆ ಸಮಗ್ರ ಮೂಲಸೌಕರ್ಯ ಸೌಲಭ್ಯಗಳನ್ನು ಹೊಂದಿರುವ ಎ & ಡಿ ಪಾರ್ಕ್‌ಗಳಿಗೆ ನೀತಿಯು ಉತ್ತೇಜನ ನೀಡುತ್ತದೆ. 
 
ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಹರಳೂರಿನ ಎ & ಡಿ ಪಾರ್ಕ್‌ನ 2 ನೇ ಹಂತವನ್ನು ಇಲಾಖೆ ಈಗಾಗಲೇ 1,200 ಎಕರೆ ಪ್ರದೇಶದಲ್ಲಿ ಅಭಿವೃದ್ಧಿಪಡಿಸುತ್ತಿದೆ. ಕರ್ನಾಟಕ ಕೈಗಾರಿಕಾ ನೀತಿ (2020-25) ಪ್ರಕಾರ ಎ & ಡಿ   ಪಾರ್ಕ್ ಡೆವಲಪರ್‌ಗಳಿಗೆ ಆರ್ಥಿಕ ಪ್ರೋತ್ಸಾಹವನ್ನು ನಿಗದಿಪಡಿಸಲಾಗಿದೆ.
 
ರಕ್ಷಣಾ ಪರೀಕ್ಷೆಯ ಮೂಲಸೌಕರ್ಯ (ಡಿಟಿಐ) ಸ್ಥಾಪನೆಯ ಮೇಲೆ ಕೇಂದ್ರೀಕರಿಸುವುದು ನೀತಿಯ ಮತ್ತೊಂದು ಪ್ರಮುಖ ಅಂಶವಾಗಿದೆ. "ಪ್ರವೇಶಸಾಧ್ಯವಾದ ಪರೀಕ್ಷಾ ಮೂಲಸೌಕರ್ಯಗಳ ಕೊರತೆಯು ದೇಶೀಯ ಎ & ಡಿ   ಉತ್ಪಾದನಾ ಘಟಕಗಳಿಗೆ ಮುಖ್ಯ ಅಡಚಣೆಯಾಗಿದೆ. ಸರ್ಕಾರದ ನೆರವಿನೊಂದಿಗೆ ಖಾಸಗಿ ವಲಯದ ಅಡಿಯಲ್ಲಿ ಡಿಟಿಐಗಳನ್ನು ಸ್ಥಾಪಿಸಲಾಗುವುದು ಎಂದು ನಿರಾಣಿ ಹೇಳಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಟಯರ್ ಪಂಚರ್ ಆದ ಕಾರು ಟ್ಯಾಂಕರ್ ಗೆ ಡಿಕ್ಕಿ: ಇಬ್ಬರು ಮಹಿಳಾ ಇಂಜಿನಿಯರ್ ಸಾವು