Select Your Language

Notifications

webdunia
webdunia
webdunia
webdunia

ಬೆಂಗಳೂರಲ್ಲಿ ವಿದ್ಯಾರ್ಥಿಗಳ ಎದುರೇ ಪ್ರಿನ್ಸಿಪಾಲ್ ಕಗ್ಗೊಲೆ

ಬೆಂಗಳೂರಲ್ಲಿ ವಿದ್ಯಾರ್ಥಿಗಳ ಎದುರೇ ಪ್ರಿನ್ಸಿಪಾಲ್ ಕಗ್ಗೊಲೆ
ಬೆಂಗಳೂರು , ಸೋಮವಾರ, 15 ಅಕ್ಟೋಬರ್ 2018 (08:44 IST)
ಬೆಂಗಳೂರು: ಸ್ಪೆಷಲ್ ಕ್ಲಾಸ್ ಮಾಡುತ್ತಿದ್ದ ಪ್ರಾಂಶುಪಾಲರನ್ನು ವಿದ್ಯಾರ್ಥಿಗಳ ಎದುರೇ ದುಷ್ಕರ್ಮಿಗಳ ಗುಂಪೊಂದು ನುಗ್ಗಿ ಕಗ್ಗೊಲೆ ಮಾಡಿದ ಘಟನೆ ಬೆಂಗಳೂರಿನ ದಾಸರಹಳ್ಳಿಯಲ್ಲಿ ನಡೆದಿದೆ.

ದಾಸರಹಳ್ಳಿಯ ಹವನೂರು ಪಬ್ಲಿಕ್ ಸ್ಕೂಲ್ ನ ಪ್ರಾಂಶುಪಾಲರು 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಸ್ಪೆಷಲ್ ಕ್ಲಾಸ್ ಮಾಡುತ್ತಿದ್ದರು. ಆಗ ಸುಮಾರು 6 ಜನರ ಗುಂಪು ತರಗತಿಗೆ ನುಗ್ಗಿ ಈ ಕೃತ್ಯವೆಸಗಿದೆ.

ನಂತರ ಕಾರೊಂದನ್ನು ಹತ್ತಿ ಆರೋಪಿಗಳು ಪರರಾರಿಯಾಗಿದ್ದಾರೆ. ಭೂ ವಿವಾದವೇ ಈ ಕೃತ್ಯಕ್ಕೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ. ಆರೋಪಿಗಳಲ್ಲಿ ಒಬ್ಬಾತನನ್ನು ಪೊಲೀಸರು ಸೆರೆಹಿಡಿದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಈ ರಾಜ್ಯದಲ್ಲಿ ಇನ್ನು ಆನ್ ಲೈನ್ ನಲ್ಲೇ ಮದ್ಯ ಖರೀದಿಸಿಬಹುದು!