Select Your Language

Notifications

webdunia
webdunia
webdunia
webdunia

ಪ್ರಧಾನಿ ಮಧ್ಯಸ್ಥಿಕೆಗೆ ಒತ್ತಾಯಿಸಿ ಕಾರ್ಪೋರೇಟರ್‌ಗಳ ರಾಜೀನಾಮೆ

ಪ್ರಧಾನಿ ಮಧ್ಯಸ್ಥಿಕೆಗೆ ಒತ್ತಾಯಿಸಿ ಕಾರ್ಪೋರೇಟರ್‌ಗಳ ರಾಜೀನಾಮೆ
ಬೆಂಗಳೂರು , ಬುಧವಾರ, 21 ಸೆಪ್ಟಂಬರ್ 2016 (19:18 IST)
ಕಾವೇರಿ ವಿವಾದದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಕಾಂಗ್ರೆಸ್ ಕಾರ್ಪೋರೇಟರ್‌ಗಳು ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಯಶವಂತಪುರ ವಾರ್ಡ್​ ಸದಸ್ಯ ಜಿ.ಕೆ.ವೆಂಕಟೇಶ್​, ಲಕ್ಷ್ಮಿದೇವಿ ನಗರ ವಾರ್ಡ್​’ನ ಎಂ.ವೇಲು ನಾಯಕರ್, ಕೊಟ್ಟಿಗೆಪಾಳ್ಯ ವಾರ್ಡ್’ನ ಜಿ.ಮೋಹನ್​ ಕುಮಾರ್​  ಹಾಗೂ ಜಾಲಹಳ್ಳಿ ವಾರ್ಡ್​ ಶ್ರೀನಿವಾಸ ಮೂರ್ತಿ ನಾಳೆ ರಾಜೀನಾಮೆ ನೀಡಲಿದ್ದಾರೆ.
 
ರಾಜೀನಾಮೆ ನೀಡಲಿರುವ ಕಾಂಗ್ರೆಸ್​ ಕಾರ್ಪೊರೇಟರ್​ಗಳು ನಾಳೆ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್​ಗೆ ರಾಜೀನಾಮೆ ಸಲ್ಲಿಸಲಿದ್ದಾರೆ.
 
ಸುಪ್ರೀಂಕೋರ್ಟ್‌ ಆದೇಶದಂತೆ ತಮಿಳುನಾಡಿಗೆ ಪ್ರತಿದಿನ 6 ಸಾವಿರ ಕ್ಯೂಸೆಕ್ ನೀರು ಹರಿದುಬಿಡುವಂತೆ ಆದೇಶ ನೀಡಿರುವುದು ಕಾವೇರಿ ಕಣಿವೆಯ ಜನತೆಗೆ ಮರಣಶಾಸನವಾಗಿದೆ ಎಂದು ರಾಜ್ಯದ ಜನತೆ ಕಿಡಿಕಾರಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಪಾಕ್ ಪ್ರಧಾನಿ ವಿರುದ್ಧ ಗುಡುಗಿದ ಸಲೀಮ್ ಖಾನ್