Publish Date: Sat, 11 Sep 2021 (20:06 IST)
Updated Date: Sat, 11 Sep 2021 (20:08 IST)
ಹಾಸನ ತಾಲೂಕಿನ ಉಡುವಾರೆ ಗ್ರಾಮದ ಆಂಜನೇಯ ದೇವಾಲಯಕ್ಕೆಮಾಜಿ ಪ್ರಧಾನಿ ದೇವೇಗೌಡರು ಭೇಟಿ ಕೊಟ್ಟಿದ್ದಾರೆ. ಈ ವೇಳೆ ಗ್ರಾಮಸ್ಥರು ದೇವೇಗೌಡರಿಗೆ ಪೂರ್ಣಕುಂಬ ಸ್ವಾಗತ ಕೋರಿದ್ದಾರೆ. ಕಳೆದ ವಾರ ಉದ್ಘಾಟನೆಯಾಗಿದ್ದ ಆಂಜನೇಯ ದೇವಾಲಯಕ್ಕೆ ಹೆಚ್ಡಿಡಿ ಭೇಟಿ ಕೊಡಬೇಕಿತ್ತು. ಆದ್ರೆ, ಕಾರಣಾಂತರದಿಂದ ಭೇಟಿ ಕೊಟ್ಟಿರಲಿಲ್ಲ. ಗಣೇಶ ಹಬ್ಬದ ದಿನ ಬರುವುದಾಗಿ ಗ್ರಾಮಸ್ಥರಿಗೆ ಗೌಡರು ಭರವಸೆ ಕೊಟ್ಟಿದ್ರು. ಕೊಟ್ಟ ಮಾತಂತೆ ಆಂಜನೇಯ ದೇವಾಲಯಕ್ಕೆ ದೇವೇಗೌಡರು ಭೇಟಿ ಕೊಟ್ಟಿದ್ದಾರೆ.