Select Your Language

Notifications

webdunia
webdunia
webdunia
webdunia

ಪ್ರತಾಪ್ ಚಂದ್ರಶೆಟ್ಟಿ ಕೈ ಹಿಡಿದ ಸಭಾಪತಿ ಸ್ಥಾನ?

ಪ್ರತಾಪ್ ಚಂದ್ರಶೆಟ್ಟಿ ಕೈ ಹಿಡಿದ ಸಭಾಪತಿ ಸ್ಥಾನ?
ಬೆಳಗಾವಿ , ಮಂಗಳವಾರ, 11 ಡಿಸೆಂಬರ್ 2018 (19:23 IST)
ಜೆಡಿಎಸ್ ನ ಬಸವರಾಜ ಹೊರಟ್ಟಿ ಹಾಗೂ ಕಾಂಗ್ರೆಸ್ ನ ಎಸ್.ಆರ್.ಪಾಟೀಲ್ ಪ್ರಬಲ ಸ್ಪರ್ಧೆಯ ನಡುವೆಯೂ  ಮಹತ್ವದ ಬೆಳವಣಿಗೆಯೊಂದರಲ್ಲಿ ಸಭಾಪತಿ ಸ್ಥಾನ ಪ್ರತಾಪ್ ಚಂದ್ರಶೆಟ್ಟಿಯವರ ಪಾಲಾಗುವ ಲಕ್ಷಣಗಳು ಗೋಚರಿಸಿವೆ.

ಅಚ್ಚರಿಯ ಬೆಳವಣಿಗೆವೊಂದರಲ್ಲಿ ಸಭಾಪತಿ ಸ್ಥಾನ ಕಾಂಗ್ರೆಸ್ ಪ್ರತಾಪ್ ಚಂದ್ರಶೆಟ್ಟಿ ಅವರಿಗೆ ಒಲಿದಿದ್ದು, ನಾಳೆ ನಡೆಯುವ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ಇಬ್ಬರ ಜಗಳ ಮೂರನೇ ಅವರಿಗೆ ಲಾಭ ಎಂಬಂತೆ ಜೆಡಿಎಸ್ ಬಸವರಾಜ ಹೊರಟ್ಟಿ ಮತ್ತು ಕಾಂಗ್ರೆಸ್ ಎಸ್.ಆರ್.ಪಾಟೀಲ್ ಅವರಿಗೆ  ಸಭಾಪತಿ ಸ್ಥಾನ ದೊರೆಕದೆ ಕಾಂಗ್ರೆಸ್ ಹಿರಿಯ ಸದಸ್ಯ  ಪ್ರತಾಪ್ ಚಂದ್ರಶೆಟ್ಟಿ ಅವರ ಪಾಲಾಗಿದೆ.

 ಕಾಂಗ್ರೆಸ್ ಹೈಕಮಾಂಡ್ ನಿಂದ ನಾಮಪತ್ರ ಸಲ್ಲಿಸುವಂತೆ ಪ್ರತಾಪ್ ಚಂದ್ರಶೆಟ್ಟಿ ಅವರಿಗೆ ಸೂಚನೆ ಬಂದಿದ್ದರಿಂದ ಸಹಜವಾಗಿಯೇ ಎಸ್.ಆರ್. ಪಾಟೀಲ್ ಅವರಿಗೆ ನಿರಾಶೆ ಉಂಟಾಯಿತು. ಇತ್ತ ಜೆಡಿಎಸ್ ಆಲಿ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೂ ನಾಮಪತ್ರ ಸಲ್ಲಿಸುವಂತೆ ಯಾವುದೇ ಸೂಚನೆಗಳು ಕಡೆ ಗಳಿಗೆಯವರೆಗೂ ಬರಲಿಲ್ಲ.



Share this Story:

Follow Webdunia kannada

ಮುಂದಿನ ಸುದ್ದಿ

ಅತಿಥಿ ಉಪನ್ಯಾಸಕರಿಂದ ಬೆಳಗಾವಿ ಚಲೋ