Webdunia - Bharat's app for daily news and videos

Install App

60 ವರ್ಷದ ವೃದ್ಧೆ ಮೇಲೆ ಪ್ರಜ್ವಲ್ ರೇವಣ್ಣ ರಾಸಲೀಲೆ ಇಂಚಿಂಚೂ ಬಯಲು

Krishnaveni K
ಮಂಗಳವಾರ, 10 ಸೆಪ್ಟಂಬರ್ 2024 (09:34 IST)
ಬೆಂಗಳೂರು: 60 ವರ್ಷದ ಮಹಿಳೆಯನ್ನೂ ಬಿಡದ ಕಾಮುಕ ಪ್ರಜ್ವಲ್ ರೇವಣ್ಣ ಬೇಡ ಬಿಟ್ಬಿಡಣ್ಣಾ ಎಂದು ಕೇಳಿಕೊಂಡರೂ ಬಿಡದೇ ರೇಪ್ ಮಾಡಿದ್ದಾನೆ ಎಂಬ ಅಂಶ ಈಗ ಬೆಳಕಿಗೆ ಬಂದಿದೆ.

ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿಬಂಧಿತರಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ತನಿಖಾ ತಂಡ ಎರಡನೇ ಆರೋಪ ಪಟ್ಟಿ ಸಲ್ಲಿಸಿದೆ. ಈ ಆರೋಪ ಪಟ್ಟಿಯಲ್ಲೂ ಪ್ರಜ್ವಲ್ ರೇವಣ್ಣ ರಾಸಲೀಲೆಗಳ ಬಗ್ಗೆ ಪೊಲೀಸರು ವಿವರ ನೀಡಿದ್ದಾರೆ.

ಪ್ರಜ್ವಲ್ ಪ್ರಕರಣಗಳ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ವಿಶೇಷ ಕೋರ್ಟ್ ಗೆ ಎರಡನೇ ಆರೋಪ ಪಟ್ಟಿ ನೀಡಿದೆ. ಈ ಆರೋಪ ಪಟ್ಟಿಯಲ್ಲಿ 60 ವರ್ಷದ ವೃದ್ಧೆ ಮೇಲೆ ಪ್ರಜ್ವಲ್ ರಾಸಲೀಲೆ ಬಗ್ಗೆ ಕೇಳಿದರೆ ನಿಜಕ್ಕೂ ಶಾಕಿಂಗ್ ಆಗಿದೆ. ಆಕೆ ಬೇಡ ಎಂದು ಕೈ ಮುಗಿದು ಬೇಡಿಕೊಂಡರೂ ಪ್ರಜ್ವಲ್ ಬಿಟ್ಟಿಲ್ಲ ಎನ್ನಲಾಗಿದೆ.

ಆಕೆ ಬೇಡಿದರೂ ಬಿಡದೇ ರೇಪ್ ಮಾಡಿದ್ದ ಪ್ರಜ್ವಲ್ ಅದರ ವಿಡಿಯೋ ಕೂಡಾ ಮಾಡಿಕೊಂಡು ಬೆದರಿಕೆ ಹಾಕುತ್ತಿದ್ದ ಎಂಬ ವಿಚಾರ ಎರಡನೇ ಆರೋಪ ಪಟ್ಟಿಯಲ್ಲಿದೆ. ಮೊದಲನೇ ಆರೋಪ ಪಟ್ಟಿಯಲ್ಲೂ ಮನೆಕೆಲಸದಾಕೆಯನ್ನು ಬಸವನಗುಡಿಯ ಮನೆಗೆ ಮನೆ ಕ್ಲೀನಿಂಗ್ ಮಾಡಿಸುವ ನೆಪದಲ್ಲಿ ಕರೆಸಿಕೊಂಡು ರೇಪ್ ಮಾಡಿ ವಿಡಿಯೋ ಮಾಡಿದ್ದ ವಿಚಾರ ಬೆಳಕಿಗೆ ಬಂದಿತ್ತು. ಜೊತೆಗೆ ಆಕೆಯ ಮಗಳಿಗೂ ವಿಡಿಯೋ ಕಾಲ್ ನಲ್ಲಿ ನಗ್ನಳಾಗಲು ಹೇಳಿ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿತ್ತು.

ಹೊಳೆನರಸೀಪುರ ಮನೆಗೆ ಕೆಲಸಕ್ಕೆ ಬರುತ್ತಿದ್ದ 60 ರ ವೃದ್ಧೆ ಮೇಲೆ ಅತ್ಯಾಚಾರವೆಸಗಿದ್ದ ಪ್ರಜ್ವಲ್ ಅದನ್ನು ವಿಡಿಯೋ ಮಾಡಿಕೊಂಡು ಪದೇ ಪದೇ ಅತ್ಯಾಚಾರವೆಸಗುತ್ತಿದ್ದ ಎಂದು ತಿಳಿದುಬಂದಿದೆ. ಪ್ರಜ್ವಲ್ ರಾಸಲೀಲೆ ಪ್ರಕರಣಗಳು ಬೆಳಕಿಗೆ ಬಂದ ಮೇಲೆ ಈ ಮಹಿಳೆಯ ಹೇಳಿಕೆ ದಾಖಲಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಮಿತ್ ಶಾ ವಿರುದ್ಧ ಅವಹೇಳನಕಾರಿ ಹೇಳಿಕೆ ಪ್ರಕರಣ: ರಾಹುಲ್ ಗಾಂಧಿಗೆ ಬಿಗ್ ರಿಲೀಫ್‌

ಪಂಜಾಬ್‌: ಆಮ್ಲಜನಕ ಸಿಲಿಂಡರ್‌ ಘಟಕದಲ್ಲಿ ಸ್ಫೋಟ, ಸ್ಥಳದಲ್ಲಿ ಇಬ್ಬರು ಸಾವು, ಮೂವರಿಗೆ ಗಂಭೀರ

ಡಿಕೆ ಶಿವಕುಮಾರ್‌ಗೆ ಸಿಎಂ ಸ್ಥಾನ ಸಿಗಬೇಕು: ಶಾಸಕ ಇಕ್ಬಾಲ್ ಹುಸೇನ್‌

ಮತ್ತೆ ಡಿಕೆ ಶಿವಕುಮಾರ್ ಪರ ಬ್ಯಾಟ್ ಮಾಡಿದ ಶಾಸಕ ಇಕ್ಬಾಲ್ ಹುಸೇನ್: ಇನ್ನೇನು ಕಾದಿದ್ಯೋ

ತಮಿಳುನಾಡು, ತಂದೆ ಮಗನ ಜಗಳವನ್ನು ಬಿಡಿಸಲು ಹೋಗಿ ಪ್ರಾಣ ಕಳೆದುಕೊಂಡ ಸಬ್‌ ಇನ್‌ಸ್ಪೆಕ್ಟರ್‌

ಮುಂದಿನ ಸುದ್ದಿ