ಪ್ರಜ್ವಲ್ ರೇವಣ್ಣ ಇಫೆಕ್ಟ್: ದೇವೇಗೌಡ ಆಂಡ್ ಫ್ಯಾಮಿಲಿ ಮೇಲೆ ಜನರಿಗೆ ನಂಬಿಕೆ ಹೋಯ್ತಾ

Krishnaveni K
ಶನಿವಾರ, 23 ನವೆಂಬರ್ 2024 (16:45 IST)
ಬೆಂಗಳೂರು: ಚನ್ನಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸೋಲು ದೇವೇಗೌಡ ಕುಟುಂಬಕ್ಕೆ ಮರ್ಮಾಘಾತ ನೀಡಿದಂತಾಗಿದೆ. ರಾಮನಗರ ಭಾಗದಲ್ಲಿ ಜೆಡಿಎಸ್ ಹಿಡಿತ ಕೈ ತಪ್ಪಲು ಪ್ರಜ್ವಲ್ ರೇವಣ್ಣ ಪ್ರಕರಣವೂ ಕಾರಣವಾಯ್ತಾ ಎಂಬ ಅನುಮಾನ ಶುರುವಾಗಿದೆ.

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದಲ್ಲಿ ಸಿಕ್ಕಿ ಹಾಕಿಕೊಂಡಾಗ ಇಡೀ ದೇವೇಗೌಡರ ಕುಟುಂಬವೇ ಮುಜುಗರಕ್ಕೀಡಾಯಿತು. ಈ ಪ್ರಕರಣದಲ್ಲಿ ಇನ್ನೂ ಪ್ರಜ್ವಲ್ ಜೈಲಿನಲ್ಲೇ ಇದ್ದಾರೆ. ಅವರ ಲೈಂಗಿಕ ಹಗರಣ ಬಯಲಿಗೆ ಬಂದ ಬಳಿಕ ಕುಮಾರಸ್ವಾಮಿ ಅಂತರ ಕಾಯ್ದುಕೊಳ್ಳಲು ಯತ್ನಿಸಿದರು.

ಆದರೆ ಎಷ್ಟೇ ಅಂತರ ಕಾಯ್ದುಕೊಂಡರೂ ಅವರೂ ದೇವೇಗೌಡರ ಕುಟುಂಬದವರೇ ಎನ್ನುವುದನ್ನು ಜನ ಮರೆತಿಲ್ಲ. ಜೊತೆಗೆ ಚನ್ನಪಟ್ಟಣದಲ್ಲಿ ಮತ್ತೆ ತಮ್ಮದೇ ಕುಟುಂಬದ ಮತ್ತೊಬ್ಬ ಕುಡಿಗೆ ಟಿಕೆಟ್ ಕೊಡಿಸಲಾಯಿತು. ಇಲ್ಲಿ ಯೋಗೇಶ್ವರ್ ಗೆಲ್ಲಬಹುದು ಎಂಬುದು ಬಿಜೆಪಿಗೂ ಗೊತ್ತಿತ್ತು. ಆದರೂ ಮೈತ್ರಿ ಧರ್ಮ ಪಾಲನೆಗಾಗಿ ನಿಖಿಲ್ ಗೆ ಟಿಕೆಟ್ ಕೊಡಲು ಒಪ್ಪಿಗೆ ನೀಡಲಾಯಿತು.

ನಿಖಿಲ್ ಈಗಾಗಲೇ ಎರಡು ಚುನಾವಣೆ ಸೋತಿದ್ದಾರೆ. ನಾಯಕರಾಗಿ ಅವರು ಇನ್ನೂ ಪಕ್ವವಾಗಿಲ್ಲ. ಜನರನ್ನು ಸೆಳೆಯಲು ಯಶಸ್ವಿಯಾಗಿಲ್ಲ. ಕೇವಲ ದೊಡ್ಡಗೌಡರ ಕುಟುಂಬದ ಹಿನ್ನಲೆಯಿದೆ ಎಂದು ಚುನಾವಣೆ ಗೆಲ್ಲಲು ಸಾಧ್ಯವಿಲ್ಲ. ಪ್ರಜ್ವಲ್ ರೇವಣ್ಣ ಕೇಸ್ ಬಳಿಕ ಕುಗ್ಗಿ ಹೋಗಿದ್ದ ದೇವೇಗೌಡರ ಕುಟುಂಬ ನಿಖಿಲ್ ಗೆಲುವಿನಲ್ಲಿ ಹೊಸ ಉತ್ಸಾಹ ಪಡೆಯುತ್ತಿತ್ತು. ಕುಮಾರಸ್ವಾಮಿ ಕೇಂದ್ರ ರಾಜಕಾರಣಕ್ಕೆ ಹೋಗಿದ್ದರಿಂದ ನಿಖಿಲ್ ಗೆ ರಾಜ್ಯದ ಪಟ್ಟ ಕಟ್ಟಬಹುದು ಎಂಬ ಲೆಕ್ಕಾಚಾರಗಳಿತ್ತು. ಅದೆಲ್ಲಾ ಈಗ ತಲೆಕೆಳಗಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ತಾಯಂದಿರ ಎದೆಹಾಲಿನಲ್ಲಿ ಯುರೇನಿಯಂ ಪತ್ತೆ, ಮಕ್ಕಳ ಮೇಲೆ ಪರಿಣಾಮವೇನು ಗೊತ್ತಾ

ದುಬೈ ಏರ್ ಶೋ ದುರಂತ, ತಾಯ್ನಾಡಿಗೆ ಪೈಲೆಟ್ ನಮನ್ಶ್‌ ಸಿಯಾಲ್ ಪಾರ್ಥಿವ ಶರೀರ

ಕರೂರು ಕಾಲ್ತುಳಿತ ಬೆನ್ನಲ್ಲೇ ಪಕ್ಷದ ಮುಖಂಡರ ಸಭೆ ಕರೆದ ನಟ ವಿಜಯ್

ಸುಪ್ರೀಂಕೋರ್ಟ್‌ನ 53ನೇ ಮುಖ್ಯ ನ್ಯಾಯಮೂರ್ತಿಯಾಗಿ ಸೂರ್ಯಕಾಂತ್‌ ನಾಳೆ ಪ್ರಮಾಣ ಸ್ವೀಕಾರ

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮತ್ತಷ್ಟು ಕಳಪೆ ಮಟ್ಟಕ್ಕೆ ಇಳಿದ ವಾಯು ಗುಣಮಟ್ಟ

ಮುಂದಿನ ಸುದ್ದಿ