Select Your Language

Notifications

webdunia
webdunia
webdunia
webdunia

ಪಿಪಿಎ ಕಿಟ್ ಖರೀದಿ ಅವ್ಯವಹಾರ ಆರೋಪ : ಬಿ.ಶ್ರೀರಾಮುಲು ಹೇಳಿದ್ದೇನು?

ಪಿಪಿಎ ಕಿಟ್ ಖರೀದಿ ಅವ್ಯವಹಾರ ಆರೋಪ : ಬಿ.ಶ್ರೀರಾಮುಲು ಹೇಳಿದ್ದೇನು?
ಬಳ್ಳಾರಿ , ಶುಕ್ರವಾರ, 3 ಜುಲೈ 2020 (19:56 IST)
ರಾಜ್ಯದಲ್ಲಿ ಕೊರೊನಾ ಕೇಸ್ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಒಂದು ಲಕ್ಷ ರ್ಯಾಪಿಡ್ ಆ್ಯಂಟಿಜನ್ ಕಿಟ್ ಬಳಸಲು ನಿರ್ಧಾರ ಮಾಡಲಾಗಿದೆ.

ಬಳ್ಳಾರಿಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಹೇಳಿಕೆ ನೀಡಿದ್ದು, ಟೆಸ್ಟ್ ಮಾಡಿದ ಅರ್ಧ ಗಂಟೆಯಲ್ಲಿಯೇ ಸೋಂಕನ್ನು ಪತ್ತೆ ಹಚ್ಚಲಾಗುತ್ತೆ ಎಂದರು.

ಬೆಂಗಳೂರಲ್ಲಿ ಹೆಚ್ಚು ಕೇಸ್ ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ವಾರ್ಡ್ ಗೆ ಎರಡು ಪ್ರತ್ಯೇಕ ಆಂಬ್ಯುಲೆನ್ಸ್ ಹಾಗೂ  ಉಸ್ತುವಾರಿಗೆ ಒಬ್ಬ ಐಪಿಎಸ್ ಆಫೀಸರ್ ರನ್ನು ನೇಮಿಸಲಾಗುವುದು ಎಂದಿದ್ದಾರೆ.

ಪಿಪಿಎ ಕಿಟ್ ಖರೀದಿಯಲ್ಲಿ ಯಾವುದೇ ರೀತಿಯ ಅವ್ಯವಹಾರ ನಡೆದಿಲ್ಲ. ಆಧಾರವಿಲ್ಲದೇ ಮಾತನಾಡಬಾರದು. ಕೀಳು ಪ್ರಚಾರಕ್ಕೆ ಸಿದ್ದರಾಮಯ್ಯ ಈ ರೀತಿ ಹೇಳಿಕೆ ನೀಡಬಾರದು ಎಂದು ಬಿ.ಶ್ರೀರಾಮುಲು ಟೀಕಿಸಿದರು.



Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ತಡೆಗೆ ಯುವಕರು ಮಾಡಿದ್ದೇನು?