Select Your Language

Notifications

webdunia
webdunia
webdunia
webdunia

ರಾಜಕೀಯ ಮಾಡಲು ಆಸೆ ಪಟ್ಟು ಬಂದವನಲ್ಲ: ಕಾಗೋಡು ತಿಮ್ಮಪ್ಪ

ರಾಜಕೀಯ ಮಾಡಲು ಆಸೆ ಪಟ್ಟು ಬಂದವನಲ್ಲ: ಕಾಗೋಡು ತಿಮ್ಮಪ್ಪ
ಶಿವಮೊಗ್ಗ , ಬುಧವಾರ, 22 ಫೆಬ್ರವರಿ 2017 (13:09 IST)
ರಾಜಕಾರಣ ಒಂದು ಸಾಮಾಜಿಕ ಕ್ಷೇತ್ರವೆಂದು ಭಾವಿಸಿದವನು ನಾನು. ರಾಜಕೀಯ ಮಾಡಲು ಆಸೆ ಪಟ್ಟು ಬಂದವನಲ್ಲ ಎಂದು ಕಂದಾಯ ಖಾತೆ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.
 
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಂದಾಯ ಖಾತೆ ಕೊನೆಯ ದಿನಗಳಲ್ಲಿ ನನ್ನ ಕೈಗೆ ಬಂದಿದೆ. ನನ್ನಿಂದ ಆದಷ್ಟು ಒಳ್ಳೆಯದನ್ನು ಮಾಡಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.
 
ಕಂದಾಯ ಖಾತೆ ಹೊಂದಬೇಕು ಎನ್ನುವುದು ಬಹುವರ್ಷಗಳ ಕನಸಾಗಿತ್ತು. ಕಂದಾಯ ಇಲಾಖೆಯಲ್ಲಿ ಬಡವರಿಗೆ, ಶೋಷಿತರಿಗೆ ನೆರವು ನೀಡಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು. 
 
ಯಡಿಯೂರಪ್ಪ ವಿರುದ್ಧ 20 ಕೇಸ್‌ಗಳು ಬಾಕಿ ಇರುವುದನ್ನು ಮರೆತಿದ್ದಾರಾ? ಆಧಾರವಿದ್ದಲ್ಲಿ ಆರೋಪಗಳನ್ನು ಮಾಡಲಿ. ಸಖಾ ಸುಮ್ಮನೆ ಆರೋಪಗಳನ್ನು ಮಾಡುವುದು ಎವರ ಘನತೆಗೆ ತಕ್ಕುದಲ್ಲ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಬಿಎಸ್‌ವೈ ಬುರುಡೆ ಶಂಕರ: ಕಾಗೋಡು ತಿಮ್ಮಪ್ಪ