Select Your Language

Notifications

webdunia
webdunia
webdunia
webdunia

ಬಿ.ಎಸ್.ಯಡಿಯೂರಪ್ಪ ಓರ್ವ ಬುರುಡೆ ಶಂಕರ: ಕಾಗೋಡು

ಬಿ.ಎಸ್.ಯಡಿಯೂರಪ್ಪ ಓರ್ವ ಬುರುಡೆ ಶಂಕರ: ಕಾಗೋಡು
ಬೆಂಗಳೂರು , ಬುಧವಾರ, 22 ಫೆಬ್ರವರಿ 2017 (13:01 IST)
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಬುರುಡೆ ಶಂಕರನಂತೆ.  ಯಾವುದೇ ಆಧಾರವಿಲ್ಲದೇ ತಳಬುಡವಿಲ್ಲದ ಆರೋಪಗಳನ್ನು ಮಾಡುತ್ತಾರೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಕಿಡಿಕಾರಿದ್ದಾರೆ.
 
ಮಾಜಿ ಮುಖ್ಯಮಂತ್ರಿಯಾಗಿರುವ ಯಡಿಯೂರಪ್ಪ ಪ್ರೌಢತೆಯಿಂದ ವರ್ತಿಸಬೇಕು. ಯಡಿಯೂರಪ್ಪರನ್ನು ಜೈಲಿಗೆ ಹಾಕಲು ಎಷ್ಟು ದಿನಗಳು ಬೇಕಾಯಿತು ಎಂದು ಪ್ರಶ್ನಿಸಿದ್ದಾರೆ.
 
ಒಂದು ವೇಳೆ, ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಅವರ ಸಹದ್ಯೋಗಿ ಸಚಿವರನ್ನು ಜೈಲಿಗೆ ಅಟ್ಟುತ್ತೇನೆ ಎಂದು ಯಡಿಯೂರಪ್ಪ ಗುಡುಗಿದ್ದರು.
 
ಯಡಿಯೂರಪ್ಪ ವಿರುದ್ಧ ಏಕವಚನದಲ್ಲಿ ಟೀಕಿಸಿದ ಅವರು, ಮಾನನಷ್ಟು ಮೂಕದ್ದಮೆ ಹಾಕಿದ್ರೆ ಏನಾಗುತ್ತಾ ಗೊತ್ತಾ. ಸಿಎಂ ಆಗಿದ್ದವರು ಇಂತಹ ಮಾತನಾಡಬಹುದಾ ಎಂದು ಸಚಿವ ಕಾಗೋಡು ತಿಮ್ಮಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ನನ್ನನ್ನು ನೋಡಲು ಬರಬೇಡಿ: ಪಳನಿಗೆ ಶಶಿಕಲಾ ತಾಕೀತು