Webdunia - Bharat's app for daily news and videos

Install App

ಸುರತ್ಕಲ್​​​ನಲ್ಲಿ ರಾಜಕೀಯ ಮುಖಂಡ ಅಶೋಕ್ ರೈ ಗೂಂಡಾಗಿರಿ

Webdunia
ಗುರುವಾರ, 16 ಫೆಬ್ರವರಿ 2023 (18:17 IST)
ರಿಯಲ್ ಎಸ್ಟೇಟ್ ಉದ್ಯಮಿ , ಪೂತ್ತೂರಿನ ಟಿಕೆಟ್​​​​ ಆಕಾಂಕ್ಷಿ ಅಶೋಕ್ ರೈ ಭಾರತೀಯ ಸೇನೆಯ ಯೋಧನ ಕುಟುಂಬದ ಮೇಲೆ ಅಟ್ಟಹಾಸ ಮೆರೆದಿದ್ದಾನೆ. ಸುರತ್ಕಲ್​​​ನಲ್ಲಿ ರಾಜಕೀಯ ಮುಖಂಡ ಅಶೋಕ್ ರೈ ಗೂಂಡಾಗಿರಿ ಮಾಡಿದ್ದು, ಯೋಧನಿಗೆ ಸೇರಿದ ಕಟ್ಟಡವನ್ನ ಅಶೋಕ್ ರೈ ಧ್ವಂಸಗೊಳಿಸಿದ್ದಾನೆ. ಯಾವುದೇ ದಾಖಲೆ ನೀಡದೆ ಯೋಧನ ಕುಟುಂಬದ ಕಟ್ಟಡವನ್ನ ರಾತ್ರೋರಾತ್ರಿ ಧ್ವಂಸಗೊಳಿಸಿದ್ದಾನೆ. ಜನವರಿ 9ರಂದು ಅಶೋಕ್ ರೈ ಏಕಾಏಕಿ ಕಟ್ಟಡವನ್ನ ನೆಲಸಮಗೊಳಿಸಿದ್ದಾನೆ. ಕಟ್ಟಡ ನೆಲಸಮಗೊಳಿಸಿರುವ ಅಶೋಕ್ ರೈ ವಿರುದ್ಧ ಯೋಧನ ಪತ್ನಿ ಪ್ರಭಾವತಿ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸುರತ್ಕಲ್​​​​ ಠಾಣಾ ಪೊಲೀಸರು ಅಶೋಕ್ ರೈ ವಿರುದ್ಧ FIR ದಾಖಲಿಸಿದ್ದಾರೆ. ಸುರತ್ಕಲ್​​ ಸಮೀಪದ ಬಾಳಾದಲ್ಲಿ ತನ್ನ ಜಾಗದ ರಸ್ತೆ ಸಂಪರ್ಕಕ್ಕೆ ಅಡ್ಡಿಯಾಗುತ್ತೆಂದು ಅಶೋಕ್ ರೈ ಬಿಲ್ಡಿಂಗ್ ಧ್ವಂಸ ಮಾಡಿದ್ದಾನೆ. ಬಿಲ್ಡಿಂಗ್​ ಇದ್ದ ಜಾಗದಲ್ಲಿ ಬಿಲ್ಡಿಂಗ್ ಹೊಡೆದು ಅಶೋಕ್ ರೈ ರಸ್ತೆ ನಿರ್ಮಿಸುತ್ತಿದ್ದಾನೆ. ಅಶೋಕ್ ರೈ ಗೂಂಡಾ ವರ್ತನೆಗೆ ಬೆಚ್ಚಿದ್ದಿರುವ ಯೋಧನ ಪತ್ನಿ ಕಣ್ಣೀರು ಹಾಕುತ್ತಿದ್ದಾರೆ. ಬೆಳಿಗ್ಗೆ ಇದ್ದ ಬಿಲ್ಡಿಂಗ್ ರಾತ್ರಿ ಇಲ್ಲದ್ದನ್ನ ನೋಡಿ ಯೋಧನ ಕುಟುಂಬಕ್ಕೆ ಆಘಾತಕ್ಕೊಳಗಾಗಿದೆ. ಈ ಅನ್ಯಾಯವನ್ನ ಪ್ರಶ್ನಿಸಿದ ಯೋಧನ ಕುಟುಂಬಕ್ಕೆ ಅಶೋಕ್ ರೈ ಬೇಕಿದ್ರೆ ಪೊಲೀಸ್ ಠಾಣೆಗೆ ಹೋಗಿ, ಕೋರ್ಟ್​ಗೆ ಹೋಗಿ ಎಂದು ಆವಾಜ್​ ಹಾಕಿದ್ದಾನೆ. ಯಾವುದೇ ದಾಖಲೆ, ಅನುಮತಿ ಪತ್ರ, ನೋಟಿಸ್ ನೀಡದೆ ದುಂಡಾವರ್ತನೆ ಮಾಡಿರುವ ಅಶೋಕ್ ರೈ ದಾದಾಗಿರಿಗೆ ಯೋಧನ ಕುಟುಂಬ ದಿಕ್ಕೇ ತೋಚದಂತಾಗಿ ಕುಳಿತಿದೆ. ಸುರತ್ಕಲ್​​ನಿಂದ 3 ಕಿ.ಮೀ ದೂರದಲ್ಲಿರುವ ಸರ್ವೆ ನಂ.185/3ನಲ್ಲಿದ್ದ ಬಿಲ್ಡಿಂಗ್​ನ್ನ ಅಶೋಕ್ ರೈ ನೆಲಸಮ ಮಾಡಿದ್ದಾನೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Waqf Bill: ವಕ್ಫ್ ತಿದ್ದುಪಡಿ ಕಾಯ್ದೆಗೆ ಸುಪ್ರೀಂಕೋರ್ಟ್ ಅಂಕುಶ: ತೀರ್ಪಿನಲ್ಲಿ ಹೇಳಿದ್ದೇನು

ನಾವು ಹಾಲಿನ ದರ ಹೆಚ್ಚಳ ಮಾಡಿದ್ದು ರೈತರಿಗೆ ಸಿಗ್ತಿದೆ, ಮೋದಿ ಗ್ಯಾಸ್ ಸಬ್ಸಿಡಿ ರದ್ದು ಮಾಡಿದ್ದು ಯಾರಿಗೆ ಸಿಗ್ತಿದೆ: ಸಿದ್ದರಾಮಯ್ಯ

ಹಿಂದೂಗಳಿಗೆ ಯಾತಕ್ಕೋಸ್ಕರ ಅಪಮಾನ ಮಾಡುತ್ತಿದ್ದೀರಿ ಸಿದ್ದರಾಮಯ್ಯನೋರೇ: ವಿಜಯೇಂದ್ರ

DK Shivakumar: ಕೇಂದ್ರ ಚಿನ್ನದ ಬೆಲೆ ಏರಿಕೆ ಮಾಡಿ ಮಹಿಳೆಯರು ಮಾಂಗಲ್ಯ ಕಟ್ಟಿಕೊಳ್ಳಲಾಗದ ಪರಿಸ್ಥಿತಿಯಾಗಿದೆ: ಡಿಕೆ ಶಿವಕುಮಾರ್

ಸಿಎಂ ಕುರ್ಚಿ ಗುದ್ದಾಟದ ನಡುವೆಯೂ ಗುಟ್ಟಾಗಿ ಮಾತುಕತೆ ನಡೆಸಿದ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌

ಮುಂದಿನ ಸುದ್ದಿ
Show comments