ಹಣೆಯಲ್ಲಿ ಕುಂಕುಮವಿಟ್ಟುಕೊಂಡಿದ್ದಾರೆಂದು ಬಂಧನ: ಪೊಲೀಸರ ಮೇಲೆ ಆಕ್ರೋಶ

Krishnaveni K
ಶನಿವಾರ, 19 ಅಕ್ಟೋಬರ್ 2024 (11:04 IST)
ಗದಗ: ಹಣೆಯಲ್ಲಿ ಕುಂಕುಮವಿಟ್ಟುಕೊಂಡಿದ್ದಾರೆಂದು ಯುವಕನನ್ನು ವಶಕ್ಕೆ ಪಡೆದಿರುವ ಗದಗ ಪೊಲೀಸರ ವಿರುದ್ಧ ಈಗ ಭಾರೀ ಆಕ್ರೋಶ ವ್ಯಕ್ತವಾಗಿದೆ. ಹೆದ್ದಾರಿಯಲ್ಲಿ ವಾಹನ ತಪಾಸಣೆ ವೇಳೆ ಘಟನೆ ನಡೆದಿದೆ.

ಗದಗ ಪೊಲೀಸರು ಹೆದ್ದಾರಿಯಲ್ಲಿ ತಪಾಸಣೆ ನಡೆಸುತ್ತಿದ್ದಾಗ ವಾಹನವೊಂದನ್ನು ತಡೆದಿದ್ದಾರೆ. ಈ ಪೈಕಿ ಒಬ್ಬ ಹಣೆ ತುಂಬಾ ಕುಂಕುಮ ಹಚ್ಚಿಕೊಂಡಿದ್ದ. ಈತನನ್ನು ನೋಡಿ ಈತ ಹಿಂದೂ ಸಂಘಟನೆಯ ಕಾರ್ಯಕರ್ತನಿರಬೇಕೆಂದು ಅನುಮಾನಿಸಿದ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಬಗ್ಗೆ ಮಾತನಾಡಿರುವ ಈ ವ್ಯಕ್ತಿ ನಾನು ಒಬ್ಬ ರಿಕ್ಷಾ ಡ್ರೈವರ್ ಇದ್ದೇನೆ. ಬಸವನಿಗೆ ಕಾಯಿ ಒಡೆಸ್ಕೊಳ್ಳಕೆ ಬಂದಿದ್ದೀನಿ ಸರ್. ನಾನೂ ನನ್ನ ದೋಸ್ತ ಇಬ್ಬರೂ 20 ಕಾಯಿ ಒಡೆಸ್ಕೊಂಡು ನನ್ನ ಅಟೋ ಹತ್ಕೊಂಡು ಹೋಗ್ತೀನಿ ಅಷ್ಟೇ. ಆದರೆ ನನ್ನ ಹಣೆಲಿ ಕುಂಕುಮ ಇರೋದನ್ನು ನೋಡಿ ಕೂರಿಸ್ಕೊಂಡಿದ್ದಾರೆ.

ಪ್ರತೀ ಶನಿವಾರ ಇಲ್ಲಿ ಬಂದು ಕಾಯಿ ಒಡೆಸ್ಕೊಂಡು ಹೋಗ್ತೀವಿ. ಹಾಗೇ ಬಂದಿದ್ದೆವು ಅಷ್ಟೇ. ಕಾಯಿ ಒಡೆಸ್ಕೊಂಡು ಆಮೇಲೆ ನಮ್ಮ ಅಟೋ ಹತ್ಕೊಂಡು ಹೋಗ್ತೀವಿ. ನಾವು ಯಾವ ಸಂಘಟನೆಯವರೂ ಅಲ್ಲ ಎಂದು ಯುವಕ ಹೇಳಿರುವ ವಿಡಿಯೋ  ವೈರಲ್ ಆಗಿದೆ. ಈ ಘಟನೆ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಿಧಾನಸೌಧದ ಎದುರು ಕಿತ್ತಾಟ, 11ಮಂದಿ ಅರೆಸ್ಟ್‌

ತಿರುಮಲ ಲಡ್ಡು ಕಲಬೆರಕೆ ಪ್ರಕರಣ, ಮತ್ತೊಂದು ಬೆಚ್ಚಿಬೀಳಿಸುವ ಅಂಶ

ಕಾಂಗ್ರೆಸ್ ಎರಡೂವರೆ ವರ್ಷ ಪೂರೈಸಿದ್ದೇ ಸಾಧನೆ: ವಿಜಯೇಂದ್ರ

ಸಿದ್ದರಾಮಯ್ಯ ಸಿಎಂ ಸ್ಥಾನ ಬಿಟ್ಟುಕೊಡಲ್ಲ, ಡಿಕೆಶಿ ಆ ಸ್ಥಾನದಲ್ಲಿ ಮುಂದುವರೆಯಲು ಬಿಡಲ್ಲ: ಪ್ರಹ್ಲಾದ್ ಜೋಶಿ

ರೈಲಿನ ಎಸಿ ಕೋಚ್‌ನಲ್ಲಿ ಕೆಟಲ್‌ನಲ್ಲಿ ನೂಡಲ್ಸ್ ಮಾಡಿದ ಮಹಿಳೆಗೆ ಇದೀಗ ಢವಢವ

ಮುಂದಿನ ಸುದ್ದಿ
Show comments