Webdunia - Bharat's app for daily news and videos

Install App

ಮಳೆ ಇಫೆಕ್ಟ್: ತರಕಾರಿಗೆ ಎಷ್ಟಾಗಿದೆ ರೇಟು ಇಲ್ಲಿದೆ ವಿವರ

Krishnaveni K
ಶನಿವಾರ, 19 ಅಕ್ಟೋಬರ್ 2024 (10:50 IST)
ಬೆಂಗಳೂರು: ಅಕಾಲಿಕವಾಗಿ ಭಾರೀ ಮಳೆಯಾಗಿದ್ದರಿಂದ ರೈತರ ಬೆಳೆಗಳಿಗೆ ಭಾರೀ ಹಾನಿಯಾಗಿದೆ. ಇದರಿಂದಾಗಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ತರಕಾರಿ ರೇಟು ಗಗನಕ್ಕೇರಿದೆ. ಯಾವ ತರಕಾರಿಗೆ ಯಾವ ಬೆಲೆ ಇಲ್ಲಿದೆ ವಿವರ.

ಈರುಳ್ಳಿ, ಟೊಮೆಟೊ ಸೇರಿದಂತೆ ರೈತರು ಬೆಳೆದು ದಾಸ್ತಾನು ಇರಿಸಿದ್ದ ತರಕಾರಿಗಳು ಭಾರೀ ಮಳೆಯಿಂದಾಗಿ ಕೊಳೆಯುವ ಪರಿಸ್ಥಿತಿ ಬಂದಿದೆ. ಇದರಿಂದಾಗಿ ತರಕಾರಿ ರೇಟು ವಿಪರೀತ ಏರಿಕೆಯಾಗಿದೆ. ಅದರಲ್ಲೂ ಟೊಮೆಟೊ ಬಲು ದುಬಾರಿಯಾಗಿದ್ದು 60-70 ರೂ.ಗೆ ಬಂದು ನಿಂತಿದೆ.

ಕಳೆದ ವಾರ ಟೊಮೆಟೊ ದರ 50 ರೂ.ಗಳಷ್ಟಿತ್ತು. ಆದರೆ ಈಗ ಮಳೆಯಿಂದಾಗಿ 70 ರೂ.ವರೆಗೆ ಬಂದು ನಿಂತಿದೆ. ಈರುಳ್ಳಿಯೂ ಹೆಚ್ಚು ಕಡಿಮೆ ಇದೇ ಬೆಲೆ ಹೊಂದಿದೆ. ಆಲೂಗಡ್ಡೆಯೂ ಬೆಲೆ ಏರಿಕೆಯಾಗಿದೆ. ಹಸಿಮೆಣಸು, ಬೀನ್ಸ್, ಕ್ಯಾರೆಟ್ ಬೆಲೆಯೂ ಹೆಚ್ಚಾಗಿದ್ದು ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.

ನಾಟಿ ಬೀನ್ಸ್ 120 ರೂ, ಟೊಮೆಟೊ 60, ಬದನೆ 60 ರೂ., ನುಗ್ಗೆಕಾಯಿ 100, ಮೆಣಸಿನಕಾಯಿ 80 ರೂ., ಮೂಲಂಗಿ 40 ರೂ., ಆಲೂಗಡ್ಡೆ 40 ರೂ., ದಪ್ಪ ಈರುಳ್ಳಿ 60 ರೂ., ಕ್ಯಾಪ್ಸಿಕಂ 40 ರೂ., ಶುಂಠಿ 150 ರೂ., ಬೆಳ್ಳುಳ್ಳಿ 400 ರೂ., ನಾಟಿ ಬಟಾಣಿ 200 ರೂ., ಪುದಿನ ಸೊಪ್ಪು ಕಟ್ಟಿಗೆ 90 ರೂ., ಕೊತ್ತಂಬರಿ ಸೊಪ್ಪು ಕಟ್ಟು 30 ರೂ. ಗಳಷ್ಟಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಇದು ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments