Webdunia - Bharat's app for daily news and videos

Install App

ಮಳೆ ಇಫೆಕ್ಟ್: ತರಕಾರಿಗೆ ಎಷ್ಟಾಗಿದೆ ರೇಟು ಇಲ್ಲಿದೆ ವಿವರ

Krishnaveni K
ಶನಿವಾರ, 19 ಅಕ್ಟೋಬರ್ 2024 (10:50 IST)
ಬೆಂಗಳೂರು: ಅಕಾಲಿಕವಾಗಿ ಭಾರೀ ಮಳೆಯಾಗಿದ್ದರಿಂದ ರೈತರ ಬೆಳೆಗಳಿಗೆ ಭಾರೀ ಹಾನಿಯಾಗಿದೆ. ಇದರಿಂದಾಗಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ತರಕಾರಿ ರೇಟು ಗಗನಕ್ಕೇರಿದೆ. ಯಾವ ತರಕಾರಿಗೆ ಯಾವ ಬೆಲೆ ಇಲ್ಲಿದೆ ವಿವರ.

ಈರುಳ್ಳಿ, ಟೊಮೆಟೊ ಸೇರಿದಂತೆ ರೈತರು ಬೆಳೆದು ದಾಸ್ತಾನು ಇರಿಸಿದ್ದ ತರಕಾರಿಗಳು ಭಾರೀ ಮಳೆಯಿಂದಾಗಿ ಕೊಳೆಯುವ ಪರಿಸ್ಥಿತಿ ಬಂದಿದೆ. ಇದರಿಂದಾಗಿ ತರಕಾರಿ ರೇಟು ವಿಪರೀತ ಏರಿಕೆಯಾಗಿದೆ. ಅದರಲ್ಲೂ ಟೊಮೆಟೊ ಬಲು ದುಬಾರಿಯಾಗಿದ್ದು 60-70 ರೂ.ಗೆ ಬಂದು ನಿಂತಿದೆ.

ಕಳೆದ ವಾರ ಟೊಮೆಟೊ ದರ 50 ರೂ.ಗಳಷ್ಟಿತ್ತು. ಆದರೆ ಈಗ ಮಳೆಯಿಂದಾಗಿ 70 ರೂ.ವರೆಗೆ ಬಂದು ನಿಂತಿದೆ. ಈರುಳ್ಳಿಯೂ ಹೆಚ್ಚು ಕಡಿಮೆ ಇದೇ ಬೆಲೆ ಹೊಂದಿದೆ. ಆಲೂಗಡ್ಡೆಯೂ ಬೆಲೆ ಏರಿಕೆಯಾಗಿದೆ. ಹಸಿಮೆಣಸು, ಬೀನ್ಸ್, ಕ್ಯಾರೆಟ್ ಬೆಲೆಯೂ ಹೆಚ್ಚಾಗಿದ್ದು ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.

ನಾಟಿ ಬೀನ್ಸ್ 120 ರೂ, ಟೊಮೆಟೊ 60, ಬದನೆ 60 ರೂ., ನುಗ್ಗೆಕಾಯಿ 100, ಮೆಣಸಿನಕಾಯಿ 80 ರೂ., ಮೂಲಂಗಿ 40 ರೂ., ಆಲೂಗಡ್ಡೆ 40 ರೂ., ದಪ್ಪ ಈರುಳ್ಳಿ 60 ರೂ., ಕ್ಯಾಪ್ಸಿಕಂ 40 ರೂ., ಶುಂಠಿ 150 ರೂ., ಬೆಳ್ಳುಳ್ಳಿ 400 ರೂ., ನಾಟಿ ಬಟಾಣಿ 200 ರೂ., ಪುದಿನ ಸೊಪ್ಪು ಕಟ್ಟಿಗೆ 90 ರೂ., ಕೊತ್ತಂಬರಿ ಸೊಪ್ಪು ಕಟ್ಟು 30 ರೂ. ಗಳಷ್ಟಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಇದು ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Sonia Gandhi: ಮತ್ತೇ ಆಸ್ಪತ್ರೆಗೆ ಭೇಟಿ, ಕಾಂಗ್ರೆಸ್‌ನ ಹಿರಿಯ ನಾಯಕಿಯ ಆರೋಗ್ಯ ಈಗ ಹೀಗಿದೆ

ಹಸಿವು, ನಿರುದ್ಯೋಗದಿಂದ ಬಳಲುತ್ತಿದ್ದರು ಪಾಕ್‌ ಭಯೋತ್ಪಾದನೆ ಬಿಡುತ್ತಿಲ್ಲ: ಸಚಿವ ನಿತಿನ್ ಗಡ್ಕರಿ ಆಕ್ರೋಶ

ಅಧಿಕಾರದಲ್ಲಿ ಮುಂದುವರೆಯಲು ಸಿಎಂ, ಡಿಸಿಎಂಗೆ ಯಾವುದೇ ನೈತಿಕತೆಯಿಲ್ಲ: ಪ್ರಹ್ಲಾದ್ ಜೋಶಿ ಆಕ್ರೋಶ

Bengaluru Stampede: ಈ ದುರಂತದಿಂದ ರಾಜ್ಯ ಸರ್ಕಾರ ಪಾಠ ಕಲಿತಿದೆ, ಡಿಸಿಎಂ ಡಿಕೆ ಶಿವಕುಮಾರ್‌

Bengaluru Stampede: ಅಮಾನತುಗೊಂಡ ಐಪಿಎಸ್ ಅಧಿಕಾರಿಯಿಂದ ಹೊಸ ಹೆಜ್ಜೆ

ಮುಂದಿನ ಸುದ್ದಿ
Show comments