ಈತ ಕಾಮುಕ ಉಮೇಶ್ ರೆಡ್ಡಿಗಿಂತಲೂ ಭಯನಾಯಕ, ಕಾಮಕೇಳಿಗಾಗಿ ಪ್ರತಿಷ್ಠಿತನ ವೇಷ ಧರಿಸುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರತಿಷ್ಠರ ಮಡದಿಯರನ್ನು ಗುರಿಯಾಗಿಸಿಕೊಂಡು ಅವರನ್ನು ಕಾಮಕೇಳಿಗೆ ಎಳೆಯಲು ಹಲವಾರು ತಂತ್ರಗಳನ್ನು ರೂಪಿಸುತ್ತಿದ್ದ. ಈಗಾಗಲೇ ಹಲವಾರು ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ್ದಾನೆ ಎನ್ನಲಾಗಿದೆ.
ಪೊಲೀಸ್ ಹಾಗೂ ವಕೀಲರ ಸೋಗಿನಲ್ಲಿ ಮನೆಗೆ ನುಗ್ಗುತ್ತಿದ್ದ ಆರೋಪಿ ಫಕೀರಪ್ಪ ಕಾಡಣ್ಣನವರ್, ಮಹಿಳೆಯರ ಮೇಲೆ ಅತ್ಯಾಚಾರವೆಸಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಫಕೀರಪ್ಪ ಕಾಡಣ್ಣನವರ್ಗೆ ಸಹಕರಿಸುತ್ತಿದ್ದ ಮಹಿಳಾ ಆರೋಪಿ ಮಹಾದೇವಿ, ಮಹಿಳೆಯರ ಫೋನ್ ನಂಬರ್ಗಳನ್ನು ಸಂಗ್ರಹಿಸಿ ಆರೋಪಿಗಳಿಗೆ ಕೊಡುತ್ತಿದ್ದಳು ಎಂದ ಮಾಹಿತಿ ನೀಡಿದ್ದಾರೆ.
ಆರೋಪಿ ಫಕೀರಪ್ಪಗೆ ಸಹಕರಿಸುತ್ತಿದ್ದ ಬಸವರಾಜ ಗದಿಗೆಪ್ಪಗೌಡರ, ಮಹಾದೇವಿ ಬೇವಿನಮರದ ಎನ್ನುವ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಫಕೀರಪ್ಪ, ಹಾವೇರಿ ಜಿಲ್ಲೆಯ ಸವಣೂರು ತಾಲುಕಿನ ಕಲಿವಾಳ ಗ್ರಾಮದವನು ಎಂದು ತಿಳಿದು ಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ