Webdunia - Bharat's app for daily news and videos

Install App

ದರ್ಶನ್ ಅಭಿಮಾನಿಯ ಶರ್ಟ್ ಬಿಚ್ಚಿಸಿ ಬೆಂಡೆತ್ತಿದ ಪೊಲೀಸರು

Krishnaveni K
ಮಂಗಳವಾರ, 25 ಜೂನ್ 2024 (12:25 IST)
Photo Credit: X
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಅರೆಸ್ಟ್ ಆದ ಬಳಿಕ ನಿರ್ಮಾಪಕ ಉಮಾಪತಿ ಗೌಡ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ನಿಂದಿಸಿದ ಅಭಿಮಾನಿಯೊಬ್ಬನನ್ನು ಪೊಲೀಸಸರು ಬಂಧಿಸಿ ಬೆಂಡೆತ್ತಿದ್ದಾರೆ.

ದರ್ಶನ್ ಬಂಧನವಾಗುತ್ತಿದ್ದಂತೇ ಉಮಾಪತಿ ಗೌಡ ತಮ್ಮಿಬ್ಬರ ನಡುವೆ ನಡೆದ ಹಳೆಯ ವೈಮನಸ್ಯದ ಬಗ್ಗೆ ಮಾತನಾಡಿದ್ದರು. ತಮ್ಮನ್ನು ತಗಡು ಎಂದು ಕರೆದಿದ್ದ ದರ್ಶನ್ ಗೆ ಉಮಾಪತಿ ಗೌಡ ತಿರುಗೇಟು ನೀಡಿದ್ದರು. ಅಲ್ಲದೆ, ದರ್ಶನ್ ಗೆ ಲ್ಯಾಂಬೋರ್ಗಿನಿ ಕಾರು ಖರೀದಿಸಲು ಅಡ್ವಾನ್ಸ್ ಕೊಟ್ಟಿದ್ದೇ ನಾನು ಎಂದು ಟಾಂಗ್ ಕೊಟ್ಟಿದ್ದರು.

ಅವರ ಈ ಹೇಳಿಕೆಗಳ ಬಗ್ಗೆ ಅಭಿಮಾನಿಯೊಬ್ಬ ಸಾರ್ವಜನಿಕವಾಗಿ ಬೆದರಿಕೆ ಹಾಕಿದ್ದ. ಅವಾಚ್ಯ ಶಬ್ಧಗಳಲ್ಲಿ ನಿಂದಿಸಿದ್ದ ಚೇತನ್ ಎಂಬ ದರ್ಶನ್ ಅಭಿಮಾನಿ ಪ್ರಚೋದನಕಾರೀ ಹೇಳಿಕೆ ನೀಡಿದ್ದ. ಅಲ್ಲದೆ, ಬಾಸ್ ಹೊರಬಂದ ಮೇಲೆ ನಿಮ್ಮನ್ನು ನೋಡಿಕೊಳ್ಳುತ್ತಾರೆ ಎಂದು ಉಮಾಪತಿಗೆ ಬೆದರಿಕೆ ಹಾಕಿದ್ದ.

ಈತನನ್ನು ಬಂಧಿಸಿದ ಬಸವೇಶ್ವರನಗರ ಪೊಲೀಸರು ಚೆನ್ನಾಗಿ ಬೆಂಡೆತ್ತಿದ್ದಲ್ಲದೆ, ಶರ್ಟ್ ಬಿಚ್ಚಿಸಿ ವಿಡಿಯೋ ಮಾಡಿ ಕ್ಷಮೆ ಕೇಳಿಸಿದ್ದಾರೆ. ಕಾನೂನು ಪ್ರಕಾರವಾಗಿ ಏನು ಕ್ರಮವಾಗುತ್ತದೆ ಅದು ಆಗಲಿದೆ. ತಪ್ಪಾಗಿ ಮಾತನಾಡಿದ್ದಕ್ಕೆ ಕ್ಷಮೆ ಕೇಳುತ್ತೇನೆ ಎಂದು ಆತ ವಿಡಿಯೋದಲ್ಲಿ ಹೇಳಿಕೆ ನೀಡಿದ್ದಾನೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments