Webdunia - Bharat's app for daily news and videos

Install App

ಫೈರ್ ಮಾಡಿ ಕಳ್ಳನನ್ನು ಅರೆಸ್ಟ್ ಮಾಡಿದ ಪೊಲೀಸರು!

Webdunia
ಮಂಗಳವಾರ, 11 ಡಿಸೆಂಬರ್ 2018 (19:56 IST)
ರಾಜಧಾನಿಯಲ್ಲಿ ಮತ್ತೆ ಪೊಲೀಸರ ಗುಂಡಿನ ಸದ್ದು ಕೇಳಿಬಂದಿದೆ. ಗುಂಡು ಹೊಡೆದು ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿಸಿ ಕರೆತರುವಾಗ ತಪ್ಪಿಸಿಕೊಂಡು ಪರಾರಿಯಾಗಲು ಯತ್ನಿಸಿದ ಕುಖ್ಯಾತ ಗಂಧದ ಮರ ಕಳ್ಳ ಮುಜಾಯಿದ್ ಉಲ್ಲಾನಿಗೆ ಕಬ್ಬನ್ಪಾರ್ಕ್ ಪೊಲೀಸರು ಗುಂಡು ಹೊಡೆದು ಬಂಧಿಸಿದ್ದಾರೆ.

ನೆರೆಯ ತಮಿಳುನಾಡಿನಿಂದ ಕೂಲಿಯವರನ್ನು ಕರೆತಂದು ವ್ಯವಸ್ಥಿತವಾಗಿ ಸುಮಾರು 50 ಕ್ಕೂ ಹೆಚ್ಚು ಕಡೆಗಳಲ್ಲಿ ಗಂಧದ ಮರಗಳ ಕಳವು ಮಾಡಿಸಿದ್ದ ಸಾರಾಯಿಪಾಳ್ಯದ ಮುಜಾಯಿದ್ ಉಲ್ಲಾ (30)ಪೊಲೀಸರ ಗುಂಡೇಟು ತಗುಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಮುಜಾಯಿದ್ ಉಲ್ಲಾ ಮತ್ತವನ ಸಹೋದರ ಇಮ್ದಾದ್ನನ್ನು ಬಂಧಿಸಿ ಕಬ್ಬನ್ಪಾರ್ಕ್ ಠಾಣೆಗೆ ವಿಚಾರಣೆ ನಡೆಸಲು ಕರೆತರುತ್ತಿದ್ದಾಗ ಕಬ್ಬನ್ ಪಾರ್ಕ್ ಸಮಾನಾಂತರ ರಸ್ತೆಯಲ್ಲಿ ಹೋಗುತ್ತಿರುವಾಗ ಖಾಸಗಿ ವಾಹನದಲ್ಲಿದ್ದ ಮುಜಾಯಿದ್ ಉಲ್ಲಾ ಬೆಂಗಾವಲಿಗಿದ್ದ ಪೇದೆ ಕೃಷ್ಣಮೂರ್ತಿಯನ್ನು ಚಲಿಸುವ ವಾಹದಿಂದ ಕೆಳಗೆ ತಳ್ಳಿ ಕಬ್ಬನ್ ಪಾರ್ಕ್ ಒಳಗೆ ಓಡಿ ಹೋಗಿದ್ದಾನೆ.
ಆಗ ಪೊಲೀಸರ ಮೇಲೆಯೇ ಮುಜಾಯಿದ್ ಉಲ್ಲಾ ಹಲ್ಲೆಗೆ ಯತ್ನಿಸಿದ್ದಾನೆ. ಆಗ ಆತನ ಮೇಲೆ ಒಂದು ಸುತ್ತು ಗುಂಡು ಪೊಲೀಸರು ಹಾರಿಸಿದ್ದಾರೆ ಗುಂಡು ಆರೋಪಿಯ ಬಲಗಾಲಿಗೆ ತಗುಲಿ ಕುಸಿದುಬಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments