ಬೆಂಗಳೂರು: ಕೇಂದ್ರ ಸರ್ಕಾರ ನೀಡುವ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಮುಂಗಾರು ಬೆಳೆ ವಿಮೆಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು ಇಲ್ಲಿದೆ ವಿವರ.
ಈ ಯೋಜನೆಯಡಿ ರೈತರು ಮಳೆ ಆಶ್ರಿತ ಬೆಳೆಗಳಾದ ರಾಗಿ, ಭತ್ತ, ಮುಸುಕಿನ ಜೋಳ ಬೆಳೆಗಳಿಗೆ ವಿಮೆಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಬೆಳೆ ಸಾಲ ಪಡೆದ ರೈತರಿಗೆ ವಿಮೆ ಕಡ್ಡಾಯವಾಗಿದೆ. ಇದಕ್ಕೆ ಆನ್ ಲೈನ್ ಅಥವಾ ಕಚೇರಿಗೆ ತೆರಳಿ ಅರ್ಜಿ ಸಲ್ಲಿಸಬಹುದಾಗಿದೆ.
ಯಾವ ಬೆಳೆಗೆ ಯಾವಾಗ ಕೊನೆಯ ದಿನಾಂಕ?
ಮುಸುಕಿನ ಜೋಳ: ಜುಲೈ 31
ಭತ್ತ, ಜೋಳ, ರಾಗಿ: ಆಗಸ್ಟ್ 16
ಟೊಮೆಟೊ, ಎಳ್ಳು: ಜೂನ್ 30
ಈರುಳ್ಳಿ, ಹತ್ತಿ: ಜುಲೈ 15
ತೊಗರಿ, ನೆಲಗಡಲೆ, ನವಣೆ, ಸಜ್ಜೆ, ಮುಸುಕಿನ ಜೋಳ, ಭತ್ತ, ರಾಗಿ, ಜೋಳ: ಜುಲೈ 31
ಬಿತ್ತನೆ ಅಥವಾ ನಾಟಿ ಮಾಡುವ ಮೊದಲು ರೈತರು ಅರ್ಜಿ ಸಲ್ಲಿಸಬಹುದು. ಬೆಳೆ ಸಾಲವಿಲ್ಲದಿದ್ದರೆ ನಿಮ್ಮ ರೈತ ಪಹಣಿ ಪತ್ರ, ಆಧಾರ್ ಸಂಖ್ಯೆ ನೀಡಿ ದಾಖಲೆಗಳನ್ನು ಸಲ್ಲಿಸಿ, ಬ್ಯಾಂಕ್, ಅರ್ಥಿಕ ಸಂಸ್ಥೆಗಳು ಅಥವಾ ಸಿಎಸ್ ಸಿ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು. ಬೆಳೆ ಸಾಲ ಪಡೆಯುವವರು ಕಡ್ಡಾಯವಾಗಿ ಈ ಯೋಜನೆಗೆ ಒಳಪಟ್ಟಿರುತ್ತಾರೆ.