Select Your Language

Notifications

webdunia
webdunia
webdunia
webdunia

ಮಂಗಳೂರು ಎಳನೀರು ಸವಿಗೆ ಮನಸೋತ ಪ್ರಧಾನಿ ಮೋದಿ

ಮಂಗಳೂರು ಎಳನೀರು ಸವಿಗೆ ಮನಸೋತ ಪ್ರಧಾನಿ ಮೋದಿ
ಮಂಗಳೂರು , ಸೋಮವಾರ, 30 ಅಕ್ಟೋಬರ್ 2017 (14:24 IST)
ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಹನಿ ನೀರು ಸೇವಿಸದೆ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಬಂದು ಮಂಜುನಾಥ ದೇವರ ದರ್ಶನ ಮಾಡಿ ಹೊರಟಿದ್ದಾರೆ. ಆದರೆ ವಿಶೇಷ ಅಂದ್ರೆ ಮಂಗಳೂರಿನ ಎಳನೀರಿಗೆ ಮೋದಿ ಮನಸೋತಿದ್ದಾರೆ.

ಪ್ರಧಾನಿ ಮೋದಿ ಆಸ್ತಿಕರು. ಹೀಗಾಗಿಯೇ ದೈವ ಭಕ್ತಿ ಹೆಚ್ಚಿದೆ. ಈ ನಿಟ್ಟಿನಲ್ಲಿ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡುವ ಸಲುವಾಗಿ ಅವರು ಹನಿ ನೀರು ಕುಡಿಯದೆ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದರು. ಕ್ಷೇತ್ರದಲ್ಲಿ ಬಿಸಿಲಿನ ತಾಪ ಹೆಚ್ಚಿತ್ತು. ಆದರೆ ಪ್ರಧಾನಿ ಮೋದಿಯವರು ಈ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಹನಿ ನೀರು ಸಹ ಸೇವಿಸಿಲ್ಲ.

ಮಂಜುನಾಥ ದೇವರ ದರ್ಶನ ಮಾಡಿ ಅಲ್ಲಿ ಸಂಕಲ್ಪ ಮಾಡಿಸಿದ್ದಾರೆ. ಈ ಸಂದರ್ಭದಲ್ಲಿ ಮಾಡಿದ್ದು, ತೀರ್ಥ ಸೇವನೆಯಷ್ಟೆ. ಧ್ಯಾನ, ಪೂಜೆ ಮುಗಿಸಿದ ನಂತರ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಎಳನೀರಿನ ಜತೆ ಒಣ ಹಣ್ಣುಗಳನ್ನ ನೀಡಿದ್ದಾರೆ. ಆದರೆ ಉಪವಾಸ ಇರುವ ಕಾರಣ ಯಾವುದೂ ಬೇಡ ಎಂದಿದ್ದಾರೆ. ಆದರೆ ಎಳನೀರು ದೇವರ ಪ್ರಸಾದದಂತೆ ಸ್ವೀಕರಿಸಿ ಎಂದಾಗ ಪ್ರಧಾನಿ ಮೋದಿ ಸ್ಟ್ರಾ ಬಳಸದೆ ಎಳನೀರು ಸವಿದಿದ್ದಾರೆ. ಶಿವನ ಕ್ಷೇತ್ರದಲ್ಲಿ ಅಮೃತ ಕುಡಿದಂತಾಯ್ತು ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ, ಜಾರ್ಜ್ ವಿರುದ್ಧ ಎಸಿಬಿಯಲ್ಲಿ ಮತ್ತೆ ದಾಖಲಾಯ್ತು ಕೇಸ್