Select Your Language

Notifications

webdunia
webdunia
webdunia
webdunia

ಪಾಕ್‌ಗೆ ಹೋಗಿ ಮದುವೆ ಊಟ ಮಾಡಿಕೊಂಡು ಬರುವ ಮೋದಿ ದೇಶದ್ರೋಹಿ: ದಿನೇಶ್ ಗುಂಡೂರಾವ್

ಪಾಕಿಸ್ತಾನ
ತುಮಕೂರು , ಬುಧವಾರ, 17 ಆಗಸ್ಟ್ 2016 (11:38 IST)
ಪ್ರಧಾನಿ ಮೋದಿ ಪಾಕಿಸ್ತಾನಕ್ಕೆ ಹೋಗಿ ಮದುವೆ ಊಟ ಮಾಡಿಕೊಂಡು ಬರುತ್ತಾರೆ ಇದಕ್ಕೆ ನಾವು ದೇಶದ್ರೋಹವೆನ್ನದೆ ಇನ್ನೇನನ್ನಬೇಕು ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
 
ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಳಸದ್ರೋಹ ಮಾಡುತ್ತಿರುವವರು ಬೆಜೆಪಿಯವರು. ಕಾಂಗ್ರೆಸ್‌ನಿಂದ ದೇಶದ್ರೋಹ ಎಂದು ವಿನಾಕಾರಣ ಆರೋಪ ಮಾಡಲಾಗುತ್ತಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
 
ಕಾಶ್ಮೀರದಲ್ಲಿ ಪಾಕ್ ದ್ವಜ ಹಾರಾಡುತ್ತಿದ್ದರು, ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನಕ್ಕೆ ಹೋಗಿ ಮದುವೆ ಊಟ ಮಾಡಿಕೊಂಡು ಬರುತ್ತಾರೆ ಇದಕ್ಕೆ ದೇಶದ್ರೋಹವೆನ್ನದೆ ಇನ್ನೇನನ್ನಬೇಕು ಎಂದು ಲೇವಡಿ ಮಾಡದರು.
 
ಎಬಿವಿಪಿ ಕಾರ್ಯಕರ್ತರ ಮೇಲೆ ಲಾಠಿ ಚಾರ್ಚ್......
 
ಬೆಂಗಳೂರಿನಲ್ಲಿ ಭಾರತೀಯ ಸೇನೆ ವಿರುದ್ಧ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಬಿಪಿಪಿ ಕಾರ್ಯಕರ್ತರು ನಿಷೇಧಿತ ಪ್ರದೇಶದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಆದರಿಂದ ಅವರ ಮೇಲೆ ಲಾಠಿ ಚಾರ್ಚ್ ಮಾಡಲಾಗಿದೆ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ದಿನೇಶ್ ಗುಂಡೂರಾವ್ ಸಮರ್ಥನೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಗಳ ಜಾಗದಲ್ಲಿ ಯಾರೇ ಇದ್ದರೂ ಕೊಲೆ ಮಾಡುತ್ತಿದ್ದರು: ಆರೋಪಿ ರಾಜೇಶ್ವರಿ ತಾಯಿ