Webdunia - Bharat's app for daily news and videos

Install App

ಪೆಟ್ರೋಲ್-ಡೀಸೆಲ್ ಬೆಲೆ ಸಾರ್ವಕಾಲಿಕ ದಾಖಲೆ

Webdunia
ಶನಿವಾರ, 2 ಅಕ್ಟೋಬರ್ 2021 (20:59 IST)
ದೇಶದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಸಾರ್ವಕಾಲಿಕ ದಾಖಲೆ ಬರೆದಿದೆ. ಅಲ್ಲದೆ ಬೆಲೆ ಏರಿಕೆ  ಮುಂದುವರೆಯುತ್ತಲೇ ಇದೆ. ಇಂದೂ ಸಹ ರಾಷ್ಟ್ರಾದ್ಯಂತ ಪೆಟ್ರೋಲ್-ಡೀಸೆಲ್ ಬೆಲೆ 1.33 ರೂ ವರೆಗೆ ಏರಿಕೆಯಾಗಿದೆ. ಕರ್ನಾಟಕದ ಪೈಕಿ ಬಳ್ಳಾರಿಯಲ್ಲಿ  ಅತ್ಯಧಿಕ ಅಂದರೆ 1 ಲೀಟರ್​ ಪೆಟ್ರೋಲ್ ಅನ್ನು 107.15 ರೂ.ಗೆ ಮತ್ತು ಡೀಸೆಲ್ ಅನ್ನು 97.29 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದಲ್ಲದೆ, ದೇಶದ ಪ್ರಮುಖ ನಗರಗಳಲ್ಲೂ ಸಹ ತೈಲ ಬೆಲೆ ಏರಿಕೆ ನಾಗಾಲೋಟ ಮುಂದುವರೆಯುತ್ತಿದೆ.
 
ಪ್ರಸ್ತುತ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸಹ ಇಂದು ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದ್ದು, ಆ ಕುರಿತ ವಿವರ ಇಲ್ಲಿದೆ.
 
ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ ವಿವರ;
 
ಬಾಗಲಕೋಟೆ - 105.95 ರೂ. (17ಪೈಸೆ ಏರಿಕೆ)
ಬೆಂಗಳೂರು - 105.44 ರೂ. (16 ಪೈಸೆ ಏರಿಕೆ)
ಬೆಂಗಳೂರು ಗ್ರಾಮಾಂತರ -105.06ರೂ. (19 ಪೈಸೆ ಏರಿಕೆ)
ಬೆಳಗಾವಿ - 106.30 ರೂ. (68 ಪೈಸೆ ಏರಿಕೆ)
ಬಳ್ಳಾರಿ - 107.15 ರೂ. (72 ಪೈಸೆ ಏರಿಕೆ )
ಬೀದರ್ - 105.70 ರೂ. (01 ಪೈಸೆ ಇಳಿಕೆ)
ಬಿಜಾಪುರ - 105.14 ರೂ. (24 ಪೈಸೆ ಇಳಿಕೆ)
ಚಾಮರಾಜನಗರ - 105.32 ರೂ. (01 ಪೈಸೆ ಏರಿಕೆ)
ಚಿಕ್ಕಬಳ್ಳಾಪುರ - 105.33 ರೂ. (33 ಪೈಸೆ ಇಳಿಕೆ)
ಚಿಕ್ಕಮಗಳೂರು - 105.92ರೂ. (21 ಪೈಸೆ ಏರಿಕೆ)
ಚಿತ್ರದುರ್ಗ - 106.85 ರೂ. (40 ಪೈಸೆ ಇಳಿಕೆ)
ದಕ್ಷಿಣ ಕನ್ನಡ - 104.94 ರೂ. (70 ಪೈಸೆ ಏರಿಕೆ)
ದಾವಣಗೆರೆ - 107.25 ರೂ. (26 ಪೈಸೆ ಏರಿಕೆ)
ಧಾರವಾಡ - 105.16 ರೂ. (30 ಪೈಸೆ ಇಳಿಕೆ)
ಗದಗ - 105.87 ರೂ. (13 ಪೈಸೆ ಏರಿಕೆ)
ಗುಲಬರ್ಗ - 105.67 ರೂ. (88 ಪೈಸೆ ಏರಿಕೆ)
ಹಾಸನ - 105.43 ರೂ. (50 ಪೈಸೆ ಏರಿಕೆ)
ಹಾವೇರಿ - 106.41 ರೂ. (94 ಪೈಸೆ ಏರಿಕೆ)
ಕೊಡಗು - 106.97 ರೂ. (58 ಪೈಸೆ ಏರಿಕೆ)
ಕೋಲಾರ - 105.27 ರೂ. (51 ಪೈಸೆ ಏರಿಕೆ)
ಕೊಪ್ಪಳ- 106.69 ರೂ. (66 ಪೈಸೆ ಏರಿಕೆ)
ಮಂಡ್ಯ - 105.23 ರೂ. (66 ಪೈಸೆ ಏರಿಕೆ)
ಮೈಸೂರು - 104.93 ರೂ. (23 ಪೈಸೆ ಇಳಿಕೆ )
ರಾಯಚೂರು - 105.63 ರೂ. (24 ಪೈಸೆ ಏರಿಕೆ)
ರಾಮನಗರ - 105.79 ರೂ. (14 ಪೈಸೆ ಇಳಿಕೆ)
ಶಿವಮೊಗ್ಗ - 106.92 ರೂ. (24 ಪೈಸೆ ಏರಿಕೆ)
ತುಮಕೂರು - 106.78 ರೂ. (1.33 ರೂ. ಏರಿಕೆ)
ಉಡುಪಿ - 104.84 ರೂ. (20 ಪೈಸೆ ಇಳಿಕೆ)
ಉತ್ತರಕನ್ನಡ - 106.48 ರೂ . (1.15 ರೂ. ಏರಿಕೆ)
ಯಾದಗಿರಿ - 105.90 ರೂ. (27 ಪೈಸೆ ಏರಿಕೆ ).
 
ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ಬೆಲೆ
 
ಬಾಗಲಕೋಟೆ - 96.20
ಬೆಂಗಳೂರು - 95.70
ಬೆಂಗಳೂರು ಗ್ರಾಮಾಂತರ : 95.36
ಬೆಳಗಾವಿ - 96.52
ಬಳ್ಳಾರಿ - 97.29
ಬೀದರ್ -95.96
ಬಿಜಾಪುರ - 95.46
 
ಚಾಮರಾಜನಗರ - 95.59
ಚಿಕ್ಕಬಳ್ಳಾಪುರ - 95.60
ಚಿಕ್ಕಮಗಳೂರು - 96.04
ಚಿತ್ರದುರ್ಗ - 96.87
ದಕ್ಷಿಣ ಕನ್ನಡ - 95.21
ದಾವಣಗೆರೆ -97.23
ಧಾರವಾಡ - 95.47
ಗದಗ - 96.12
ಗುಲಬರ್ಗ - 95.94
ಹಾಸನ - 95.58
ಹಾವೇರಿ - 96.61
 
ಕೊಡಗು - 96.98
ಕೋಲಾರ - 95.64
ಕೊಪ್ಪಳ- 96.88
ಮಂಡ್ಯ - 95.51
ಮೈಸೂರು -95.24
ರಾಯಚೂರು - 95.92
ರಾಮನಗರ - 96.02
ಶಿವಮೊಗ್ಗ - 96.97
ತುಮಕೂರು -96.93
ಉಡುಪಿ - 95.12
ಉತ್ತರಕನ್ನಡ - 96.61
ಯಾದಗಿರಿ - 95.15
 
ಇದಲ್ಲದೆ, ಇಂದು ಚೆನ್ನೈನಲ್ಲಿ ಪೆಟ್ರೋಲ್​ ಬೆಲೆ 99.58 ರೂ ಇದ್ದರೆ ಡೀಸೆಲ್​ ಬೆಲೆ 94.74 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಅದರಂತೆ ಹೈದ್ರಾಬಾದ್​ನಲ್ಲಿ ಪೆಟ್ರೋಲ್​ ಬೆಲೆ 105.74 ರೂ ಆಗಿದ್ದರೆ, ಡೀಸೆಲ್​ ಬೆಲೆ 98.06 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇನ್ನೂ ನೋಡ್ಡಾದಲ್ಲಿ ಒಂದು ಲೀಟರ್​ ಪೆಟ್ರೋಲ್ ಬೆಲೆ 101.89 ರೂ ಆಗಿದ್ದರೆ, ದೆಹಲಿಯಲ್ಲಿ 90.17 ರೂ ಮತ್ತು ಮಹಾರಾಷ್ಟ್ರದಲ್ಲಿ 107.95 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಡೀಸೆಲ್ ಅನ್ನು 97.84 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇನ್ನೂ ರಾಜಸ್ಥಾನದ ಜೈಪುರದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 108.80 ರೂ ಇದೆ. ಇದು ದೇಶದಲ್ಲೇ ಅತ್ಯಂತ ಹೆಚ್ಚಿನ ಬೆಲೆ ಎಂದು ಗುರುತಿಸಿಕೊಂಡಿದೆ.
 
ಭಾರತದಲ್ಲಿ ಪೆಟ್ರೋಲ್ ದರಗಳನ್ನು ಪ್ರತಿದಿನ ಪರಿಷ್ಕರಿಸಲಾಗುತ್ತದೆ. ಪ್ರತಿದಿನ ಬೆಳಿಗ್ಗೆ 06:00 ಗಂಟೆಗೆ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. ಜಾಗತಿಕ ತೈಲ ಬೆಲೆಯಲ್ಲಿ ಒಂದು ನಿಮಿಷದ ವ್ಯತ್ಯಾಸವನ್ನು ಇಂಧನ ಬಳಕೆದಾರರು ಮತ್ತು ವಿತರಕರಿಗೆ ರವಾನಿಸಬಹುದು ಎಂದು ಇದು ಖಚಿತಪಡಿಸುತ್ತದೆ. ಇಂಧನದ ಬೆಲೆಯು ಅಬಕಾರಿ ಸುಂಕ, ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಮತ್ತು ಡೀಲರ್ ಕಮಿಷನ್ ಅನ್ನು ಒಳಗೊಂಡಿದೆ. ವ್ಯಾಟ್ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ.
 
ಅಬಕಾರಿ ಸುಂಕ, ಡೀಲರ್ ಕಮಿಷನ್ ಮತ್ತು ವ್ಯಾಟ್ ಸೇರಿಸಿದ ನಂತರ, ಪೆಟ್ರೋಲ್‌ನ ಚಿಲ್ಲರೆ ಮಾರಾಟ ಬೆಲೆ ದ್ವಿಗುಣಗೊಳ್ಳುತ್ತದೆ. ವಿವಿಧ ಅಂಶಗಳು ಇಂಧನದ ಬೆಲೆಯ ಮೇಲೆ ಪ್ರಭಾವ ಬೀರುತ್ತವೆ. ಇವುಗಳಲ್ಲಿ ರೂಪಾಯಿಗಳಿಂದ ಯುಎಸ್ ಡಾಲರ್ ವಿನಿಮಯ ದರ, ಕಚ್ಚಾ ತೈಲದ ಬೆಲೆ, ಜಾಗತಿಕ ಸೂಚನೆಗಳು, ಇಂಧನದ ಬೇಡಿಕೆ ಇತ್ಯಾದಿಗಳು ಸೇರಿವೆ. ಅಂತರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳು ಹೆಚ್ಚಾದಾಗ ಭಾರತದಲ್ಲೂ ಸಾಮಾನ್ಯವಾಗಿ ಬೆಲೆ ಏರಿಕೆಯಾಗುವುದು ವಾಡಿಕೆಯಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಎಂ, ಡಿಸಿಎಂ, ರಾಹುಲ್ ಗಾಂಧಿ ಭೇಟಿ ಹಿಂದಿನ ಗುಟ್ಟು ಬಿಚ್ಚಿಟ್ಟ ವೇಣುಗೋಪಾಲ್‌

Kerala Rain: ಜೂ.15ರ ವರೆಗೆ ಭಾರೀ ಮಳೆಯ ಮುನ್ಸೂಚನೆ , ರಾಜ್ಯದಲ್ಲಿ ಹೇಗಿರಲಿದೆ ಹವಾಮಾನ

Meghalaya Murder Case: ಗಂಡನ ಜತೆಗಿನ ಬೆಡ್‌ ರೂಂ ಸಂಗತಿಯನ್ನು ಪ್ರಿಯಕರನಿಗೆ ಒಪ್ಪಿಸಿದ್ಳು ಸೋನಮ್

Bengaluru Stampede: ಆರ್‌ಸಿಬಿ ಮಾರ್ಕೆಂಟಿಗ್ ಮುಖ್ಯಸ್ಥ ನಿಖಿಲ್ ಸೋಸಲೆಗೆ ಕಾನೂನಿನಲ್ಲಿ ಹಿನ್ನಡೆ

Indore Raja Raguvamshi murder: ಅಬ್ಬಾ.. ಗಂಡನನ್ನು ಕೊಂದು ಸೋನಂ ಪ್ಲ್ಯಾನ್ ಏನಿತ್ತು ಗೊತ್ತಾ

ಮುಂದಿನ ಸುದ್ದಿ
Show comments