100 ಅಂಕ ವಿದ್ಯಾರ್ಥಿಗಳು ಪಡೆದಾರೆ ಮಾತ್ರ ಇಂಜಿನಿಯರಿಂಗ್ ಸೀಟ್ ಗೆ ಪ್ರವೇಶ

Webdunia
ಶನಿವಾರ, 2 ಅಕ್ಟೋಬರ್ 2021 (20:56 IST)
ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ(Second PUC) ವಿದ್ಯಾರ್ಥಿ ಶೇ.95ಕ್ಕಿಂತ ಅಧಿಕ ಅಂಕ ಗಳಿಸಿದರೆ ಆ ವಿದ್ಯಾರ್ಥಿ ಹಾಗೂ ಪೋಷಕರಿಗೆ ಅತೀವ ಮೆಚ್ಚುಗೆ ವ್ಯಕ್ತವಾಗುತ್ತದೆ. ಆದರೆ ದೆಹಲಿಯಲ್ಲಿ(Delhi) ಶೇ.95 ಅಂಕ ಗಳಿಸಿದವರಿಗೆ ಮೆಡಿಕಲ್‌,  ಎಂಜಿನಿಯರಿಂಗ್‌ ಬಿಡಿ, ಸಾಮಾನ್ಯ ಪದವಿ ಕೋರ್ಸಿಗೂ ಪ್ರವೇಶ ಸಿಗುತ್ತಿಲ್ಲ.
 
ಪ್ರತಿ ವರ್ಷ ದೆಹಲಿಯಲ್ಲಿ(Delhi) ಪದವಿ ಪ್ರವೇಶಕ್ಕೆ ಭಾರಿ ಪೈಪೋಟಿ ಇರುತ್ತದೆ. ಆದರೆ ಈ ವರ್ಷ ಸಿಬಿಎಸ್‌ಇ 12ನೇ ತರಗತಿಯಲ್ಲಿ 70 ಸಾವಿರ ವಿದ್ಯಾರ್ಥಿಗಳು ಶೇ.95ಕ್ಕಿಂತ ಅಧಿಕ ಅಂಕ ಗಳಿಸಿದ್ದಾರೆ. ಹೀಗಾಗಿ ಪೈಪೋಟಿ ಇನ್ನೂ ಹೆಚ್ಚಿದೆ.
 
ದೆಹಲಿ ವಿಶ್ವವಿದ್ಯಾಲಯದ ಜೀಸಸ್‌ ಅಂಡ್‌ ಮೇರಿ ಕಾಲೇಜು ಶುಕ್ರವಾರ ಬಿಎ (ಆನ​ರ್‍ಸ್) ಮನಃಶಾಸ್ತ್ರ ಕೋರ್ಸ್‌ನ ಪ್ರವೇಶಕ್ಕೆ ಮೊದಲ ಕಟಾಫ್‌ ಅಂಕ ಬಿಡುಗಡೆ ಮಾಡಿದ್ದು, ಶೇ.100ರಷ್ಟುಅಂಕ ಗಳಿಸಿದವರಿಗೆ ಪ್ರವೇಶ ನೀಡುವುದಾಗಿ ತಿಳಿಸಿದೆ. ಹಂಸರಾಜ್‌ ಕಾಲೇಜಿನಲ್ಲೂ ಕಂಪ್ಯೂಟ​ರ್‍ಸ್ ಸೈನ್ಸ್‌ ಆನರ್ಸ್‌ ಕೋರ್ಸ್‌ ಪ್ರವೇಶಕ್ಕೆ ಶೇ.100 ಅಂಕ ನಿಗದಿಪಡಿಸಲಾಗಿದೆ. ಇನ್ನು ಶ್ರೀ ಗಂಗಾರಾಮ್‌ ಕಾಲೇಜಿನಲ್ಲಿ ಕಾಮರ್ಸ್‌ ಫಾರ್‌ ಎಕನಾಮಿಕ್ಸ್‌ ಆನ​ರ್‍ಸ್ ಮತ್ತ ಬಿಕಾಂ ಆನ​ರ್‍ಸ್ಗೆ ಶೇ.100ರಷ್ಟು, ಹಿಂದೂ ಕಾಲೇಜ್‌ ಮತ್ತು ರಾಮ್‌ಜಾಸ್‌ ಕಾಲೇಜಿನಲ್ಲಿ ಪೊಲಿಟಿಕಲ್‌ ಸೈನ್ಸ್‌ ಆನ​ರ್‍ಸ್ಗೆ, ಹಿಂದೂ ಕಾಲೇಜ್‌ ಮತ್ತು ಎಸ್‌ಜಿಟಿಬಿ ಖಾಲ್ಸಾ ಕಾಲೇಜಿನಲ್ಲಿ ಬಿಕಾಂಗೆ, ದೀನ್‌ ದಯಾಲ್‌ ಕಾಲೇಜಿನಲ್ಲಿ ಕಂಪ್ಯೂಟ​ರ್‍ಸ್ ಸೈನ್ಸ್‌ ವಿಷಯಕ್ಕೆ ಶೇ.100ರಷ್ಟುಕಟಾಫ್‌ ನಿಗದಿ ಮಾಡಲಾಗಿದೆ.
 
ಏಕೆ ಇಷ್ಟೊಂದು ಕಟಾಫ್‌?:
 
ಪ್ರವೇಶಾತಿ ಮಿತಿಗಿಂತ ಹೆಚ್ಚಿನ ವಿದ್ಯಾರ್ಥಿಗಳು ಪ್ರವೇಶ ಪಡೆಯುವುದನ್ನು ತಪ್ಪಿಸಲು ಈ ರೀತಿ ಕಟಾಫ್‌ ಅಂಕ ಪ್ರಕಟಿಸಲಾಗುತ್ತದೆ. ಹೆಚ್ಚು ಅಂಕ ಗಳಿಸಿದವರಿಗೆ ಮೊದಲು ಪ್ರವೇಶ ನೀಡಿ, ಬಳಿಕ ಉಳಿಕೆ ಸೀಟುಗಳಿಗೆ ಮತ್ತೊಮ್ಮೆ ಕಟಾಫ್‌ ಅಂಕ ನಿಗದಿಪಡಿಸಲಾಗುತ್ತದೆ. ಈಗ ಬಿಡುಗಡೆಯಾಗಿರುವುದು ಮೊದಲ ಕಟಾಫ್‌ ಪಟ್ಟಿ. ಸೀಟುಗಳ ಮಿತಿಗೆ ಅನುಗುಣವಾಗಿ ಮತ್ತಷ್ಟುಕಟಾಫ್‌ ಪಟ್ಟಿಬಿಡುಗಡೆಯಾಗಲಿವೆ ಎಂದು ಪ್ರಾಧ್ಯಾಪಕರು ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಧರ್ಮೇಂದ್ರ ಪ್ರಧಾನ್ ರಾಜೀನಾಮೆ, ಮಹತ್ವದ ಫೋಸ್ಟ್ ಹಂಚಿಕೊಂಡ ರಾಜನಾಥ್ ಸಿಂಗ್

ಧರ್ಮೇಂದ್ರಾ ಪ್ರಧಾನ್ ರಾಜೀನಾಮೆ ನೀಡುತ್ತಿದ್ದ ಹಾಗೇ ಮಹತ್ವದ ನಿರ್ಧಾರ ಕೈಗೊಂಡ ಸಿಜೆ ಚಳುವಳಿಯು ತನ್ನ ಪ್ರತಿಭಟನೆಯನ್ನು ಕೊನೆಗೊಳಿಸಿದೆ

ಧರ್ಮೇಂದ್ರ ಪ್ರಧಾನ್ ಅವರ ಸ್ಥಾನಕ್ಕೆ ಇದೀಗ ಹರಿದಾಡುತ್ತಿರುವ ಹೆಸರುಗಳು ಇಲ್ಲಿದೆ

ಈ ಸರ್ಕಾರವನ್ನು ಕಿತ್ತೊಗೆಯುವ ಸಮಯ ಬಂದಿದೆ: ರಾಹುಲ್ ಗಾಂಧಿ ಕಿಡಿ

ಅವನ ಮೇಲೆ ಹಲ್ಲೆ ನಡೆದಾಗ ನನಗೆ ಭಯವಾಗುತ್ತಿತ್ತು: ಅಭಿಜೀತ್ ದಿಪ್ಕೆ ತಾಯಿ ಮೊದಲ ಪ್ರತಿಕ್ರಿಯೆ

ಮುಂದಿನ ಸುದ್ದಿ
Show comments