Select Your Language

Notifications

webdunia
webdunia
webdunia
webdunia

ಪೆಟ್ರೋಲ್ ಬಂಕ್ ನಲ್ಲಿ ಮೋಸ ರಾಜಧಾನಿಯಲ್ಲಿ ಪ್ರತಿಭಟನೆ

ಪೆಟ್ರೋಲ್ ಬಂಕ್ ನಲ್ಲಿ ಮೋಸ ರಾಜಧಾನಿಯಲ್ಲಿ ಪ್ರತಿಭಟನೆ
ಬೆಂಗಳೂರು , ಭಾನುವಾರ, 25 ಸೆಪ್ಟಂಬರ್ 2022 (14:03 IST)

ನಿಗದಿತ ಬೆಲೆಗೆ ಪೆಟ್ರೋಲ್ ಹಾಕದೇ ವಂಚನೆ ಮಾಡಿದ್ದಾರೆಂದು ವಾಹನ ಸವಾರರು ಆರೋಪಿಸಿದ್ದಾರೆ. ಕಾರು ಚಾಲಕ ಮೋಹನ್‌ ಎಂಬುವವರು ೧ ಸಾವಿರ ರೂ ಪೆಟ್ರೋಲ್ ಹಾಕಿಸಿದ್ದರೆ, ಆದರೆ ಸಿಬ್ಬಂದಿ ೯೮೫ ಪೆಟ್ರೋಲ್ ಹಾಕಿ, ೧ ಸಾವಿರ ಬಿಲ್ ಕೊಟ್ಟಿದ್ದಾರೆ. ಇದರಿಂದ ಕೋಪಗೊಂಡ ವಾಹನ ಸವಾರರು ಪ್ರತಿಭಟಿಸಿದ್ದಾರೆ.

ಬಂಕ್‌ನಲ್ಲಿ ಸಾರ್ವಜನಿಕರು ಜಮಾಯಿಸುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಆಗಮಿಸಿ, ಜನರನ್ನು ಚದುರಿಸಲು ಮುಂದಾದರು. ಈ ವೇಳೆ ಆಕ್ರೋಶಗೊಂಡ ಸಾರ್ವಜನಿಕರು, ತಪ್ಪು ಮಾಡಿದವರನ್ನು ಪ್ರಶ್ನಿಸುವುದು ಬಿಟ್ಟು ನಮ್ಮನ್ನು ಕಳುಹಿಸುವ ಪ್ರಯತ್ನ ಮಾಡುತ್ತಿದ್ದಾರೆಂದು ಕಿಡಿಕಾರಿದರು. ಪೆಟ್ರೋಲ್ ಗನ್ ಮಿಷನ್ ಪರಿಶೀಲನೆಗೆ ಪಟ್ಟುಹಿಡಿದರು. ಸೂಕ್ತ ತನಿಖೆ ವಹಿಸುವುದಾಗಿ ಪೊಲೀಸರು ಹೇಳಿದರು. ಆದರೆ, ನಿಜವಾಗಿಯೂ ಕ್ರಮವಾಗುತ್ತದೆಯೇ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಅಂಬುಲೆನ್ಸ್ ಸೇವೆ ವ್ಯತ್ಯಯ! ಸರ್ಕಾರದ ನಿರ್ಲಕ್ಷ್ಯಕ್ಕೆ ರೋಗಿಗಳು ಕಂಗಾಲು