Select Your Language

Notifications

webdunia
webdunia
webdunia
webdunia

ಭಜರಂಗದಳ ಸಂಚಾಲಕನ ಕಾರಿನ ಮೇಲೆ ಪೆಟ್ರೋಲ್ ಬಾಂಬ್ ದಾಳಿ?

ಭಜರಂಗದಳ
ಬೆಂಗಳೂರ , ಸೋಮವಾರ, 14 ನವೆಂಬರ್ 2016 (15:03 IST)
ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಸರಣಿ ಹತ್ಯೆಗಳು ನಡೆಯುತ್ತಿರುವ ಬೆನ್ನಲ್ಲೆ ಭಜರಂಗದಳ ಸಂಘಟನೆಯ ಸಂಚಾಲಕರೊಬ್ಬರ ಕಾರಿನ ಮೇಲೆ ಪೆಟ್ರೋಲ್ ಬಾಂಬ್ ದಾಳಿ ನಡೆದಿರುವ ಶಂಕೆ ಕೊಡಗು ಜಿಲ್ಲೆಯ ಸೋಮವಾರಪೇಟೆಯಲ್ಲಿ ವ್ಯಕ್ತವಾಗುತ್ತಿದೆ. 
ಕೊಡಗು ಜಿಲ್ಲೆಯ ಸೋಮವಾರಪೇಟೆಯ ಐಗೂರು ಸಮೀಪದಲ್ಲಿ ಭಜರಂಗದಳ ಸಂಘಟನೆಯ ಸಂಚಾಲಕ ಹಾಗೂ ವಕೀಲರಾಗಿರುವ ಪದ್ಮನಾಭ ಎಂಬವರ ಕಾರಿನ ಮೇಲೆ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸೆದಿದ್ದಾರೆ ಎಂದು ಆರೋಪಿಸಲಾಗಿದೆ. 
 
ಪದ್ಮನಾಭ ಅವರ ಕಾರು ಭಾಗಶಃ ಸುಟ್ಟು ಹೋಗಿದೆ. ಈ ಕುರಿತು ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹೊಸ 2,000 ರೂ ನೋಟನ್ನು ಮುದ್ದೆ ಮಾಡಿ, ನೀರಲ್ಲಿ ಹಾಕಿ, ಏನಾಗುತ್ತದೆ (ವಿಡಿಯೋ)