Webdunia - Bharat's app for daily news and videos

Install App

ಕಾಳು ಮೆಣಸಿನ ಬಂಪರ್ ಬೆಲೆ! ಎಷ್ಟಿದೆ?

Webdunia
ಶನಿವಾರ, 27 ನವೆಂಬರ್ 2021 (10:22 IST)
ಕೃಷಿ ಉತ್ಪನ್ನಗಳ ಮಾರುಕಟ್ಟೆಯಲ್ಲಿ ಕಪ್ಪು ಬಂಗಾರವೆಂದು ಪ್ರಸಿದ್ಧವಾದ ಕಾಳು ಮೆಣಸಿನ ಬೆಲೆ ಈಗ ಏರಿಕೆಯ ಹಾದಿಯಲ್ಲಿದೆ.
 ಆದರೆ ಇದರ ಲಾಭ ಹೆಚ್ಚಿನ ಬೆಳೆಗಾರರಿಗೆ ದಕ್ಕದಂತಾಗಿದೆ. ಕಳೆದ ನಾಲ್ಕು ವರ್ಷಗಳ ಹಿಂದೆ ಏಕಾ ಏಕಿ ಕುಸಿತ ಕಂಡಿದ್ದ ದರ ಅಂತೂ ಈಗ ಚೇತರಿಕೆ ಕಂಡಿದೆ. ಅಂದಿನ ದರಕ್ಕೆ ಹೋಲಿಸಿದರೆ ಈಗ ದುಪ್ಪಟ್ಟು ದರ ದಾಖಲಾಗಿದೆ.
ಕಾಳುಮೆಣಸಿನ ಪ್ರಮುಖ ಮಾರುಕಟ್ಟೆಯಾದ ಶಿರಸಿಯಲ್ಲಿ ಕಳೆದ ಎರಡು ದಿನಗಳಿಂದ ಗರಿಷ್ಠ ದರ ಕ್ವಿಂಟಾಲ್ ಗೆ 60 ಸಾವಿರ ರೂ. ಗಳನ್ನು ಮೀರಿದೆ. ಸರಾಸರಿ 54 ಸಾವಿರ ರೂ. ಲಭ್ಯವಾಗುತ್ತಿದೆ. ಇದೇ ದರ 4 ವರ್ಷಗಳ ಹಿಂದೆ ಸಾಕಷ್ಟು ಬೆಳೆಗಾರರಿಗೆ ಲಭ್ಯವಾಗಿತ್ತು. ಅದರಲ್ಲೂ ವರ್ಷಗಟ್ಟಲೇ ಕಾಲ ಈ ದರ ಮುಂದುವರೆದಿತ್ತು.
ಆದರೆ ನಂತರ ಕುಸಿಯುತ್ತ ಬಂದು 2019.ರಲ್ಲಿ ಕ್ವಿಂಟಾಲ್ಗೆ 30 ಸಾವಿರ ರೂ. ಗಳಿಗಿಂತ ಕಡಿಮೆ ದಾಖಲಾಗಿ ಬೆಳೆಗಾರರು ನಿರಾಸೆ ಪಡುವಂತಾಗಿತ್ತು. ನಂತರದಲ್ಲಿ 30- 40 ಸಾವಿರ ರೂಗಳ ಮಧ್ಯದಲ್ಲಿ ಮಾರುಕಟ್ಟೆಯಲ್ಲಿ ಕಾಳು ಮೆಣಸು ವಿಕ್ರಿ ಆಗುತ್ತಿತ್ತು. ಮತ್ತೆ ದರ ಏರಿಕೆ ಆಗುತ್ತದೆಂದು ಕಾಯಲಾಗದ ಬೆಳೆಗಾರರು ಕಾಳುಮೆಣಸು ಮಾರುಕಟ್ಟೆಗೆ ಒಯ್ದು ಕೊಟ್ಟಿದ್ದಾರೆ. ಆದರೆ ಈಗ ಮೂರು ವಾರಗಳ ಹಿಂದಿನಿಂದ ದರ ಒಂದೇ ಸಮನೆ ಏರಿಕೆಯಾಗುತ್ತಿದೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಎಂ, ಡಿಸಿಎಂ, ರಾಹುಲ್ ಗಾಂಧಿ ಭೇಟಿ ಹಿಂದಿನ ಗುಟ್ಟು ಬಿಚ್ಚಿಟ್ಟ ವೇಣುಗೋಪಾಲ್‌

Kerala Rain: ಜೂ.15ರ ವರೆಗೆ ಭಾರೀ ಮಳೆಯ ಮುನ್ಸೂಚನೆ , ರಾಜ್ಯದಲ್ಲಿ ಹೇಗಿರಲಿದೆ ಹವಾಮಾನ

Meghalaya Murder Case: ಗಂಡನ ಜತೆಗಿನ ಬೆಡ್‌ ರೂಂ ಸಂಗತಿಯನ್ನು ಪ್ರಿಯಕರನಿಗೆ ಒಪ್ಪಿಸಿದ್ಳು ಸೋನಮ್

Bengaluru Stampede: ಆರ್‌ಸಿಬಿ ಮಾರ್ಕೆಂಟಿಗ್ ಮುಖ್ಯಸ್ಥ ನಿಖಿಲ್ ಸೋಸಲೆಗೆ ಕಾನೂನಿನಲ್ಲಿ ಹಿನ್ನಡೆ

Indore Raja Raguvamshi murder: ಅಬ್ಬಾ.. ಗಂಡನನ್ನು ಕೊಂದು ಸೋನಂ ಪ್ಲ್ಯಾನ್ ಏನಿತ್ತು ಗೊತ್ತಾ

ಮುಂದಿನ ಸುದ್ದಿ
Show comments