ರೈತರ ಬದುಕನ್ನು ಛಿದ್ರಗೊಳಿಸಿದ ಮಳೆ!

Webdunia
ಶನಿವಾರ, 27 ನವೆಂಬರ್ 2021 (10:03 IST)
ಚಿಕ್ಕಬಳ್ಳಾಪುರ : ಹೊಲಗಳಲ್ಲೇ ಮೊಳಕೆಯೊಡೆದ ರಾಗಿ, ನೆಲಗಡಲೆ, ಮೇವಾಗಿ ಬಳಕೆಯಾಗುತ್ತಿದ್ದ ರಾಗಿ ಪೈರು,
ಮುಸುಕಿನ ಜೋಳ ಮಣ್ಣು ಪಾಲು ನಾನಾ ರೋಗಗಳಿಗೆ ತುತ್ತಾದ ಟೊಮೇಟೊ, ಮೂಲಂಗಿ, ತರಕಾರಿ ಬೆಳೆಗಳು ಇರುವ ಬೆಳೆಗಳನ್ನು ರಕ್ಷಿಸಲಾಗದೆ ರೈತರ ಪರದಾಟ.ಇದು ಸತತ 2 ತಿಂಗಳ ಮಳೆ ನಂತರ ಜಿಲ್ಲೆಯಲ್ಲಿ ನಿರ್ಮಾಣವಾಗಿರುವ ರೈತರ ದಯನೀಯ ಸ್ಥಿತಿ.
2019-2020ರಲ್ಲಿ ಕೊರೊನಾ ಬಿಟ್ಟೂ ಬಿಡದೆ ಕಾಡಿ ಕೃಷಿಕರ ಬದುಕು ಬೀದಿಗೆ ಬಿದ್ದಿತ್ತು. 2021ರಲ್ಲಿಯಾದರೂ ಉತ್ತಮ ಬೆಳೆ ಬೆಳೆಯಬಹುದು ಎಂದು ರೈತರು ನಿರೀಕ್ಷಿಸಿದ್ದರು. ಆದರೆ ಈ ಬಾರಿ ಬಿಟ್ಟೂ ಬಿಡದೆ ಕಾಡಿದ ಮಳೆರಾಯ ರೈತರ ಬದುಕನ್ನು ಮೂರಾಬಟ್ಟೆಯಾಗಿಸಿದೆ.
ಬೆಳೆ ಬಿತ್ತಲು ಮಾಡಿರುವ ವೆಚ್ಚವನ್ನು ಆಧರಿಸಿ ಸರ್ಕಾರ, ಬೆಳೆ ಹಾನಿ ಪರಿಹಾರ ನೀಡಬೇಕೆಂಬುದು ರೈತರ ಆಗ್ರಹವಾಗಿದೆ. ಪರಿಹಾರ ಸಿಗೋದು ಯಾವಾಗ? ಜಿಲ್ಲೆಯಲ್ಲಾದ ಮಳೆ ನಷ್ಟ ವೀಕ್ಷಿಸಲು ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವರು, ಮಾಜಿ ಸಿಎಂಗಳು ಬಂದು ಹೋದರೂ ರೈತರಿಗೆ ಇದುವರೆಗೂ ಪರಿಹಾರ ಸಿಕ್ಕಿಲ್ಲ. ಸಿಕ್ಕರೂ ಎಷ್ಟು ಸಿಗುತ್ತದೆ ಎಂಬುದರ ಬಗ್ಗೆ ಖಾತರಿಯಿಲ್ಲ. ಹೀಗಾಗಿ ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಉಪಚುನಾವಣೆ ಸಮಯದಲ್ಲೇ ಗ್ಯಾರಂಟಿ ಹಣ: ವರದಿ ಕೇಳಿದ ಚುನಾವಣಾ ಆಯೋಗದ ವಿರುದ್ಧ ಸಿಎಂ ಕೆಂಡ

ಕೇರಳ, ಪುದುಚೇರಿ, ಅಸ್ಸಾಂನಲ್ಲಿ ಬೆಳಿಗ್ಗೆ ಎಷ್ಟು ವೋಟ್ ಆಗಿದೆ ನೋಡಿ

ವೀಲ್ ಚೇರ್ ಸಿಗದೇ ಮಹಿಳೆಯನ್ನು ಸ್ಕೂಟಿಯಲ್ಲೇ ಆಸ್ಪತ್ರೆಯೊಳಗೆ ಕರೆತಂದ ಮೊಮ್ಮಗ Video

ಕರ್ನಾಟಕ ಉಪಚುನಾವಣೆ ಫಲಿತಾಂಶ ರಾಜ್ಯ ಕಾಂಗ್ರೆಸ್ ಗೆ ಮುಖ್ಯ ಯಾಕೆ

Karnataka Weather: ಇಂದು ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ

ಮುಂದಿನ ಸುದ್ದಿ
Show comments