Select Your Language

Notifications

webdunia
webdunia
webdunia
webdunia

ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಬರುವ ಆನೆಗೆ ಕಲ್ಲೆಸೆತ: ನೆಟ್ಟಿಗರ ಆಕ್ರೋಶ

Himavad Gopalaswamy temple elephant

Krishnaveni K

ಗುಂಡ್ಲುಪೇಟೆ , ಶುಕ್ರವಾರ, 12 ಜನವರಿ 2024 (10:20 IST)
Photo Courtesy: Twitter
ಗುಂಡ್ಲುಪೇಟೆ: ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಪ್ರತಿನಿತ್ಯ ಬಂದು ದೇವರ ಪ್ರಸಾದ ಸ್ವೀಕರಿಸುವ ಆನೆ ಬಗ್ಗೆ ಕಳೆದ ಕೆಲವು ದಿನಗಳಿಂದ ಕೇಳಿರುತ್ತೀರಿ.

ಕೆಲವು ಸಮಯದಿಂದ ಈ ಆನೆ ಪ್ರತಿನಿತ್ಯ ದೇವಾಲಯ ಪರಿಸರಕ್ಕೆ ಬಂದು ದೇವಸ್ಥಾನಕ್ಕೆ ಸುತ್ತು ಹಾಕುವುದಲ್ಲದೆ, ಬಾಗಿಲ ಬಳಿ ಬಂದು ದೇವರಿಗೆ ನಮಸ್ಕರಿಸಿ ಪ್ರಸಾದ ಸ್ವೀಕರಿಸಿ ತೆರಳುತ್ತದೆ.

ಈ ಆನೆಯ ಫೋಟೋ, ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಎಂದಿನಂತೇ ಆನೆ ದೇವಾಲಯದ ಪ್ರಾಂಗಣದಲ್ಲಿ ಓಡಾಡಿಕೊಂಡಿರುವಾಗ ಕೆಲವರು ಅದಕ್ಕೆ ಕಲ್ಲು ಎಸೆದು ಓಡಿಸುವ ದೃಶ್ಯವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಇದಕ್ಕೆ ನೆಟ್ಟಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಯಾರಿಗೂ ಏನೂ ಮಾಡದೇ ತನ್ನ ಪಾಡಿಗೆ ತಾನು ಬಂದು ದೇವರ ಪ್ರಸಾದ ಸ್ವೀಕರಿಸಿ ಹೋಗುವ ಆನೆಗೆ ಕಲ್ಲು ಎಸೆದು ಯಾಕೆ ತೊಂದರೆ ಕೊಡುತ್ತೀರಿ? ಅಧಿಕಾರಿಗಳು ಯಾಕೆ ಇದನ್ನು ಗಮನಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರು-ತಮಿಳುನಾಡು ನಡುವೆ ವಿಶೇಷ ರೈಲು