Webdunia - Bharat's app for daily news and videos

Install App

ಆನೆಯ ನಡವಳಿಕೆಯಿಂದ ಬೆಚ್ಚಿಬಿದ್ದ ಜನ

Webdunia
ಶನಿವಾರ, 9 ಅಕ್ಟೋಬರ್ 2021 (21:52 IST)
ಶ್ರೀರಂಗಪಟ್ಟಣ ದಸರಾ 2021: ಆನೆಯ ನಡವಳಿಕೆ ನೋಡಿ ಬೆಚ್ಚಿದ ಜನ ಸ್ಥಳದಿಂದ ಓಡಿದ್ದಾರೆ. ಮೆರವಣಿಗೆ ವೇಳೆ ಭಾರೀ ಶಬ್ದ ಮಾಡಿದ ಹಿನ್ನಲೆ ಆನೆ ಬೆದರಿದ ಎಂದು ಹೇಳಲಾಗಿದೆ. ಆ ಬಳಿಕ, ಮೆರವಣಿಗೆಯ ಬದಲು ವೇದಿಕೆಯ ಹಿಂಭಾಗಕ್ಕೆ ಆನೆಯನ್ನು ಕರೆದುಕೊಂಡು ಹೋಗಲಾಗಿದೆ.
ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿಗೆ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥಶ್ರೀ ಚಾಲನೆ ನೀಡಿದ್ದಾರೆ. ಸ್ಚಾಮೀಜಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ, ಶಾಸಕ ರವೀಂದ್ರ ಶ್ರೀಕಂಠಯ್ಯ ಸಾಥ್ ನೀಡಿದ್ದಾರೆ. ಆದರೆ, ಶ್ರೀರಂಗಪಟ್ಟಣ ದಸರಾಗೆ ಚಾಲನೆ ಹಾಗೂ ಪುಷ್ಪಾರ್ಚನೆ ವೇಳೆ ಗೋಪಾಲಸ್ವಾಮಿ ಹೆಸರಿನ ಆನೆ ಬೆದರಿದೆ. ಈ ಕಾರಣದಿಂದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಜಂಬೂಸವಾರಿಯನ್ನು ರದ್ದುಗೊಳಿಸಲಾಗಿದೆ.
 
ಆನೆ ಬೆದರಿದ ಹಿನ್ನೆಲೆ ಬೆಳ್ಳಿ ರಥದಲ್ಲಿ ಮೆರವಣಿಗೆ ಮಾಡಲಾಗಿದೆ. ತಾಯಿ ಚಾಮುಂಡೇಶ್ವರಿ ವಿಗ್ರಹದ ಮೆರವಣಿಗೆಯನ್ನು ಬೆಳ್ಳಿ ರಥದಲ್ಲಿ ಮುಂದುವರಿಸಲಾಗಿದೆ. ಜಂಬೂ ಸವಾರಿ ವೇಳೆ ಬೆದರಿದ ಗೋಪಾಲಸ್ವಾಮಿ ಆನೆ, ಬೆದರಿ ಒಂದು ಸುತ್ತು ಸುತ್ತಿದೆ. ಆನೆಯ ನಡವಳಿಕೆ ನೋಡಿ ಬೆಚ್ಚಿದ ಜನ ಸ್ಥಳದಿಂದ ಓಡಿದ್ದಾರೆ. ಮೆರವಣಿಗೆ ವೇಳೆ ಭಾರೀ ಶಬ್ದ ಮಾಡಿದ ಹಿನ್ನಲೆ ಆನೆ ಬೆದರಿದ ಎಂದು ಹೇಳಲಾಗಿದೆ. ಆ ಬಳಿಕ, ಮೆರವಣಿಗೆಯ ಬದಲು ವೇದಿಕೆಯ ಹಿಂಭಾಗಕ್ಕೆ ಆನೆಯನ್ನು ಕರೆದುಕೊಂಡು ಹೋಗಲಾಗಿದೆ.
 
ಆನೆ ವೈದ್ಯ ರಮೇಶ್, ಪಶು ವೈದ್ಯ ಸಹಾಯಕ ಅಕ್ರಂ, ಮಾವುತರ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ. ಜನರನ್ನು ನಿಯಂತ್ರಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ. ಇದು ಜಿಲ್ಲಾಡಳಿತ, ಪೊಲೀಸ್ ಇಲಾಖೆ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿ ಎಂದು ಹೇಳಲಾಗುತ್ತಿದೆ. ಪೊಲೀಸ್ ವೈಫಲ್ಯಕ್ಕೆ ಮೊಟಕುಗೊಂಡ ಜಂಬೂ ಸವಾರಿ ಎನ್ನಲಾಗುತ್ತಿದೆ. ಆದರೆ, ಜನರ ಗಾಬರಿ ನಡುವೆಯೂ ಸಿಬ್ಬಂದಿ, ಮಾವುತ ಆನೆಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ.
 
 
ಜಂಬೂಸವಾರಿಯಲ್ಲಿ ಬೆದರಿದ್ದ ಆನೆ ನಿಯಂತ್ರಸಿದ ಹಿನ್ನೆಲೆ ಆನೆ ನಿಯಂತ್ರಿಸಿದ ಮಾವುತನಿಗೆ 3 ಸಾವಿರ ರೂಪಾಯಿ ಬಹುಮಾನ ನೀಡಲಾಗಿದೆ. ಸಚಿವರು, ಶಾಸಕರು ಬಹುಮಾನ ನೀಡಿ ಗೌರವಿಸಿದ್ದಾರೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ದಸರಾ ಮೆರವಣಿಗೆ ವೇಳೆ ಜನರ ಗಲಾಟೆಯಿಂದಾಗಿ ಗೋಪಾಲಸ್ವಾಮಿ ಆನೆ ಬೆದರಿತ್ತು. ಕೂಡಲೇ ಎಚ್ಚೆತ್ತ ಮಾವುತ ಆನೆಯನ್ನು ನಿಯಂತ್ರಿಸಿದ್ದರು.
ಜಂಬೂಸವಾರಿಯಲ್ಲಿ ಬೆದರಿದ್ದ ಆನೆ ನಿಯಂತ್ರಸಿದ ಹಿನ್ನೆಲೆ ಆನೆ ನಿಯಂತ್ರಿಸಿದ ಮಾವುತನಿಗೆ 3 ಸಾವಿರ ರೂಪಾಯಿ ಬಹುಮಾನ ನೀಡಲಾಗಿದೆ. ಸಚಿವರು, ಶಾಸಕರು ಬಹುಮಾನ ನೀಡಿ ಗೌರವಿಸಿದ್ದಾರೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ದಸರಾ ಮೆರವಣಿಗೆ ವೇಳೆ ಜನರ ಗಲಾಟೆಯಿಂದಾಗಿ ಗೋಪಾಲಸ್ವಾಮಿ ಆನೆ ಬೆದರಿತ್ತು. ಕೂಡಲೇ ಎಚ್ಚೆತ್ತ ಮಾವುತ ಆನೆಯನ್ನು ನಿಯಂತ್ರಿಸಿದ್ದರು

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೊಹ್ಲಿ, ಅನುಷ್ಕಾ ಆಶೀರ್ವಾದ ಪಡೆದಿದ್ದ ಪ್ರೇಮಾನಂದ ಮಹಾರಾಜ್ ಬಾಯಿಂದ ಇದೆಂಥಾ ಮಾತು

ಆಪರೇಷನ್ ಸಿಂದೂರ್‌ನಿಂದ ಪಾಕ್‌ ಉಗ್ರರರು ಇನ್ನೂ ನಿದ್ರೆಯಿಲ್ಲದ ರಾತ್ರಿ ಕಳೆಯುತ್ತಿದ್ದಾರೆ: ಮೋದಿ

ನಡೆದುಕೊಂಡು ಹೋಗುತ್ತಿದ್ದ ಯುವತಿಗೆ ಕಿರುಕುಳ: ಸಕಲೇಶಪುರ ವ್ಯಕ್ತಿ ಅರೆಸ್ಟ್‌

ರೈತರ ಹೆಸರಿನಲ್ಲಿ ರಾಜಕೀಯ ಮಾಡುವ ವಿಜಯೇಂದ್ರ ಮೋದಿ ಮನೆ ಮುಂದೆ ಪ್ರತಿಭಟಿಸಲಿ: ಶಿವರಾಜ ತಂಗಡಗಿ

ಕಲಾಸಿಪಾಳ್ಯ ಬಿಎಂಟಿಸಿ ಬಸ್ ಸ್ಟ್ಯಾಂಡ್‌ನಲ್ಲಿ ಸ್ಪೋಟಕ ಪತ್ತೆ ಕೇಸ್: ಮೂವರು ಅರೆಸ್ಟ್

ಮುಂದಿನ ಸುದ್ದಿ
Show comments