Select Your Language

Notifications

webdunia
webdunia
webdunia
webdunia

ಕೆಜಿಎಫ್ ವಿರುದ್ಧ ಜನರ ಆಕ್ರೋಶ

ಕೆಜಿಎಫ್ ವಿರುದ್ಧ ಜನರ ಆಕ್ರೋಶ
ಕೋಲಾರ , ಮಂಗಳವಾರ, 28 ಮೇ 2019 (16:45 IST)
ಕೆಜಿಎಫ್ ನಲ್ಲಿ ಮತ್ತೊಂದು ದುರಂತ ಸಂಭವಿಸಿದ್ದು, ಜನರು ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ.

ಕೋಲಾರ ಕೆಜಿಎಫ್ ಸರ್ಕಾರಿ ಆಸ್ಪತ್ರೆಯಲ್ಲಿ ಮತ್ತೊಂದು ದುರಂತ ನಡೆದಿದೆ.  ಗರ್ಭಿಣಿಗೆ ಚಿಕಿತ್ಸೆ ನೀಡದೇ ಸತಾಯಿಸಿದ್ದಾರೆ ವೈದ್ಯರು.  ಗರ್ಭಪಾತ ಆಗಿ ಆಸ್ಪತ್ರೆಗೆ ಬಂದು ನರಳಾಡಿದ್ದಾಳೆ ಬಾಣಂತಿ.

ಸಮೀನಾ ಕೆಜಿಎಫ್ ನ ರಾಬರ್ಟ್ ಸನ್ ಪೇಟೆ ನಿವಾಸಿಯಾಗಿದ್ದು, ಮಧ್ಯಾಹ್ನ ಕೆಜಿಎಪ್ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದಿದ್ದ ಬಾಣಂತಿಯಾಗಿದ್ದಾರೆ.

ಹೊಟ್ಟೆ ನೋವೆಂದು ಆಗಮಿಸಿ ಮಗು ಹೊಟ್ಟೆಯಲ್ಲೆ ಸತ್ತಿರುವ ವಿಚಾರ ಅರಿತ ಸಮೀನಾ, ಮಗು ಹೊಟ್ಟೆಯಲ್ಲಿ ಮೃತ  ಪಟ್ಟಿರುವ ವಿಚಾರ ತಿಳಿದು ಗೋಳಾಡಿದ್ದಾರೆ. ಹೊಟ್ಟೆ ನೋವೆಂದು ಗೋಗರೆಯುತ್ತಿದ್ದರು ಸ್ಪಂದಿಸದ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಸಮೀನಾ ರನ್ನ ಕೋಲಾರ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ ಕೆಜಿಎಫ್ ಸರ್ಕಾರಿ ವೈದ್ಯರು.  ಕೆಜಿಎಫ್ ಸರ್ಕಾರಿ ಆಸ್ಪತ್ರೆ ವಿರುದ್ದ ಸಾರ್ವಜನಿಕರ ಆಕ್ರೋಶ ಹೆಚ್ಚುತ್ತಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಹಾಳಾದ ವಾಹನಗಳನ್ನು ರಸ್ತೆ ಬದಿ ನಿಲ್ಲಿಸಿದರೆ ಬಾರೀ ದಂಡ ತೆರಬೇಕಾಗುತ್ತದೆ ಎಚ್ಚರ