Publish Date: Sat, 06 May 2023 (16:40 IST)
Updated Date: Sat, 06 May 2023 (17:30 IST)
ಇಂದು ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನಡೆಸಿದ್ದು, ರೋಡ್ ಶೋ ಆರಂಭಕ್ಕೂ ಮುನ್ನಾ ಪ್ರತಿಕ್ರಿಯಿಸಿದ್ದ ಮಾಜಿ ಪ್ರಧಾನಿ H.D. ದೇವೇಗೌಡರು, ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದ್ರು.. ಇನ್ನು ಮುಂದುವರಿದು ಮಾತನಾಡಿದ ಅವರು, ಪ್ರಧಾನಿ ಮೋದಿಯವರ ರೋಡ್ ಶೋ ಎಷ್ಟು ಅಗತ್ಯವಿದೆ?.. ಅದರಿಂದ ಜನರಿಗೆ ಎಷ್ಟು ತೊಂದರೆಯಾಗುತ್ತಿದೆ ಅನ್ನೋದರ ಬಗ್ಗೆ ಅವರ ಪಕ್ಷದವರು ಯೋಚನೆ ಮಾಡಬೇಕು ಎಂದು ಅಸಮಾಧಾನ ಹೊರಹಾಕಿದ್ರು.. H.D. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಬೆಂಗಳೂರಿಗೆ ಐದು ಉಪನಗರಗಳ ಯೋಜನೆ ರೂಪಿಸಿದ್ದರು.. ಆದರೆ ಅದಕ್ಕೆ ಕಾಂಗ್ರೆಸ್ಸಿಗರು ಅಡ್ಡಿ ಮಾಡಿದ್ರು. ಇಲ್ಲವಾದರೆ ಈಗ ಬೆಂಗಳೂರಿನ ಚಿತ್ರಣವೇ ಬೇರೆ ಆಗಿರುತ್ತಿತ್ತು ಎಂದು ಹೇಳಿದ್ರು.