Publish Date: Thu, 22 Sep 2022 (15:23 IST)
Updated Date: Thu, 22 Sep 2022 (15:04 IST)
ಬೆಂಗಳೂರು ನಗರದ ಹಲವೆಡೆ 'ಪೇ ಸಿಎಂ" ಪೋಸ್ಟರ್ ಅಂಟಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ಕಾರ್ಯಕರ್ತರ ಬಂಧನವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಖಂಡಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನಾಳೆ ಪಕ್ಷದ ಪರಿಷತ್ ಸದಸ್ಯರು ಸೇರಿದಂತೆ ಎಲ್ಲ ಶಾಸಕರು ಸೇರಿ ಯಾವುದಾದರೂ ಸರ್ಕಾರಿ ಕಟ್ಟಡಗಳ ಮೇಲೆ ನಮಗೆ ಅನುಕೂಲ ಆಗುವ ಸ್ಥಳಗಳಲ್ಲಿ ಪೋಸ್ಟರ್ ಗಳನ್ನು ಅಂಟಿಸುವ ಬಗ್ಗೆ ತೀರ್ಮಾನ ಮಾಡಿಕೊಂಡಿದ್ದು, ನಾವು ಮಾಡುತ್ತಿರೋದರಲ್ಲಿ ತಪ್ಪೇನಿಲ್ಲ' ಎಂದು ಹೇಳಿದರು.
ನಾಳೆ ಪ್ರತಿಯೊಬ್ಬ ಶಾಸಕರೂ ಕೂಡ ಈ ಅಭಿಯಾನದಲ್ಲಿ ಪಾಲ್ಗೊಲ್ಲಬೇಕು' ಎಂದು ಇದೇ ವೇಳೆ ಅವರು ಶಾಸಕರಿಗೆ ಕೆರೆ ನೀಡಿದರು.