Webdunia - Bharat's app for daily news and videos

Install App

ಬೆಂಗಳೂರಿಗೆ ಕೇಂದ್ರೀಕೃತ ಪ್ರಾಧಿಕಾರ ರಚನೆಯಾಗಲಿ ಎಂದ ಸಂಸದ

Webdunia
ಬುಧವಾರ, 29 ಮೇ 2019 (15:01 IST)
ಮಳೆ ಅನಾಹುತ ಸೇರಿದಂತೆ ಮಹಾನಗರದ ನಾಗರಿಕರ ಕುಂದು-ಕೊರತೆ ನಿವಾರಿಸಿ ಸಕಾಲಕ್ಕೆ ಸೌಲಭ್ಯ ಕಲ್ಪಿಸಲು ಕೇಂದ್ರೀಕೃತ ಪ್ರಾಧಿಕಾರ ರಚನೆ ಅಗತ್ಯವಾಗಿದೆ. ಹೀಗಂತ ನೂತನ ಬಿಜೆಪಿ ಸಂಸದ ಹೇಳಿದ್ದಾರೆ.

ನೂತನ ಸಂಸದ ಡಿ.ವಿ ಸದಾನಂದಗೌಡ ಸರಣಿ ಟ್ವೀಟ್ ಮೂಲಕ ಈ ವಿಷ್ಯ ಪ್ರತಿಪಾದಿಸಿದ್ದಾರೆ.

ಬೆಂಗಳೂರಿನ ನಾಗರಿಕ ಸೌಲಭ್ಯಗಳ ಕುಂದು ಕೊರತೆಯನ್ನು ಹದ್ದು ಬಸ್ತಿನಲ್ಲಿಡಲು, ಬೆಳೆಯುತ್ತಿರುವ ನಮ್ಮ ನಗರ  ಬೆಂಗಳೂರಿನ ನಾಗರಿಕರಿಗೆ ಕ್ಲಪ್ತ ಸಮಯದಲ್ಲಿ ಬೇಕಾದ ಸೌಲಭ್ಯಗಳನ್ನು ಜಾರಿಗೊಳಿಸಲು ಕೇಂದ್ರೀಕೃತ ಪ್ರಾಧಿಕಾರವೊಂದರ  ರಚನೆ ಅತ್ಯಂತ ಪ್ರಸ್ತುತ ಮತ್ತು ಅತ್ಯಗತ್ಯ. ಈ ಕೇಂದ್ರೀಕೃತ ಪ್ರಾಧಿಕಾರ ರಚನೆಗೆ ಪಕ್ಷಾತೀತ ನಿರ್ಣಯ ಬೇಕು. ಚುನಾಯಿತ ಪ್ರತಿನಿದಿಗಳು, ಸಮರ್ಪಕ ಅಧಿಕಾರಿಗಳು ಮತ್ತು ಕೆಲ ನಾಗರಿಕರನ್ನು ಒಳಗೊಂಡ  ಈ ಪ್ರಾಧಿಕಾರ ನಿಯಮಾನುಸಾರ ರಚನೆಯಾಗಿ ತನ್ನ ಪರಿಮಿತಿಯಲ್ಲಿ ಕಾರ್ಯ ನಿರ್ವಹಿಸಿದಾಗ ಮಾತ್ರ ಬೆಂಗಳೂರನ್ನು ನಾಗರಿಕ ಸೌಲಭ್ಯದಲ್ಲಿ ವಿಶ್ವ ದರ್ಜೆಗೆ ಏರಿಸಲು ಸಾಧ್ಯ ಎಂದು ಟ್ವೀಟ್ ಮಾಡಿದ್ದಾರೆ.

ಬೆಂಗಳೂರಿನ‌ ಬೆಸ್ಕಾಂ,ಬಿಡಬ್ಲ್ಯುಎಸ್ಎಸ್ಬಿ, ಬಿಬಿಎಂಪಿ, ಬಿಟಿಪಿ, ಆರ್ಡಬ್ಲ್ಯುಎ, ಅರಣ್ಯ, ಅಗ್ನಿಶಾಮಕ, ಆರೋಗ್ಯ, ಪರಿಸರ, ಕೆರೆ ಸಂರಕ್ಷಣಾ ಪ್ರಾಧಿಕಾರಗಳನ್ನೊಳಗೊಂಡ ಈ ಕೇಂದ್ರೀಕೃತ ಪ್ರಾಧಿಕಾರ ಮಳೆ ಅನಾಹುತ,  ಯೋಜನೆಗಳ  ಅನುಷ್ಠಾನದಲ್ಲಿ ಆಗಬಹುದಾದ ವಿಳಂಬ, ನಗರ ಅಭಿವೃದ್ಧಿ ಹೆಸರಿನಲ್ಲಿ  ಕಮಿಷನ ಲೂಟಿ ಹೊಡೆಯುತ್ತಿರುವ ಕೆಲ ಪಟ್ಟಭದ್ರ ಹಿತಾಸಕ್ತಿಗಳನ್ನು ಹುಟ್ಟಡಗಿಸಲು ನೆರವಾಗಲಿದೆ ಎಂದು ಟ್ವೀಟ್ ಮಾಡಿದ್ದಾರೆ.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments