Select Your Language

Notifications

webdunia
webdunia
webdunia
webdunia

ಶಿವಾಜಿನಗರದ ಭಾರತಿ ಸ್ಕೂಲ್ ಅವರಣದಲ್ಲಿ ಪೋಷಕರ ಗಲಾಟೆ

ಶಿವಾಜಿನಗರದ ಭಾರತಿ ಸ್ಕೂಲ್ ಅವರಣದಲ್ಲಿ ಪೋಷಕರ ಗಲಾಟೆ
bangalore , ಶನಿವಾರ, 24 ಸೆಪ್ಟಂಬರ್ 2022 (20:31 IST)
ಶಿವಾಜಿ ನಗರದ ಭಾರತಿ ಸ್ಕೂಲ್ ನಲ್ಲಿ ಗೊಂದಲ ಶುರುವಾಗಿದ್ದು, ಇದ್ದಕ್ಕಿದ್ದ ಹಾಗೇ ಇವತ್ತು ಶಾಲೆ ಕ್ಲೋಸ್ ಆಗಿದೆ.ಮನೆಗೆ ಮಕ್ಕಳನ್ನು ಕರೆದುಕೊಂಡು ಹೋಗಿ ಅಂತಾ ಪೊಲೀಸರು ಹಾಗೂ ಶಾಲೆಯಿಂದ ಹೇಳಲಾಗಿದೆ.ಇದ್ರಿಂದ ಗೊಂದಲಕ್ಕೆ ಒಳಗಾದ ಪೋಷಕರು ದೊಡ್ಡ ಗಲಾಟೆ ನಡೆಸಿದಾರೆ.ಇನ್ನೂ ಶಾಲಾ ಆವರಣದಲ್ಲಿ ಪೋಷಕರ ದೊಡ್ಡ ಗಲಾಟೆ ನಡೆಯುತ್ತಿದಂತೆ ಪೋಷಕರ ಜೊತೆ ರಿಜ್ವಾನ್ ಮಾತುಕತೆ ನಡೆಸಿದ್ದಾರೆ.
 
ಐಎಂಎ ಆಸ್ತಿ ಮುಟ್ಟುಗೋಲಿಗೆ ಈಗಾಗಲೇ ಸೂಚನೆ ಕೊಡಲಾಗಿದೆ.ಇನ್ನು ಈ ಆಸ್ತಿ ಮುಟ್ಟುಗೋಲು ಮಾಡಿ ಮೋಸ ಹೋಗಿರುವ ಹೂಡಿಕೆದಾರರಿಗೆ ಕೊಡಲಾಗುತ್ತೆ.ಐಎಂಎ ನಡೆಸುತ್ತಿದ್ದ ಸ್ಕೂಲ್ ಜಾಗ ಸೀಜ್  ಗೆ ನೋಟಿಸ್ ನೀಡಲಾಗಿದ್ದು,  ಸ್ಕೂಲ್ ಕ್ಲೋಸ್ ಮಾಡುವಂತೆ ಸರ್ಕಾರ ಆದೇಶ ಹೊರಡಿಸಿದೆ.ಆದ್ರೇ ಈ ವೇಳೆ ಮಾತನಾಡಿದ ರಿಜ್ವಾನ್ ಇದು ಸ್ಕೂಲ್ ವಿಚಾರ.ವಿದ್ಯಾರ್ಥಿಗಳಿಗೆ ಪರೀಕ್ಷೆ ಇದೆ.ಮಕ್ಕಳ ಭವಿಷ್ಯದ ಬಗ್ಗೆ ಪೋಷಕರು ಸಹಜವಾಗಿ ಆತಂಕದಲ್ಲಿ ಇರೋದು ನಂಗೆ ಗೊತ್ತು. ಈಗಾಗಲೇ ನಾನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಜೊತೆ ಪರ್ಯಾಯ ವ್ಯವಸ್ಥೆಯ ಬಗ್ಗೆ ಮಾತಾನಾಡ್ತಾ ಇದ್ದೇನೆ.ಮಕ್ಕಳ ಭವಿಷ್ಯಕ್ಕೆ ಒಂದು ದಿನವೂ ತೊಂದರೆಯಾಗಬಾರದು ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮನೆ ಬ್ರೋಕರ್ ಗಳಿಗೆ ಪತ್ರ ಕೊಡುವ ಮುನ್ನ ಎಚ್ಚರ ...!!!