Webdunia - Bharat's app for daily news and videos

Install App

ಪ್ರೀತಿಸಿ ಮದುವೆಯಾದ ದಂಪತಿಯನ್ನು ಬೇರ್ಪಡಿಸಲು ಪೋಷಕರ ಯತ್ನ..!

Webdunia
ಬುಧವಾರ, 26 ಸೆಪ್ಟಂಬರ್ 2018 (14:27 IST)
ಯುವತಿಗೆ ವಾಮಾಚಾರ ಮಾಡಿಸಿ ಮತ್ತೊಬ್ಬನೊಂದಿಗೆ ಮರು ಮದುವೆಯನ್ನು ಕುಟುಂಬಸ್ಥರು, ಸಂಬಂಧಿಗಳು ಸೇರಿ ಮಾಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಯುವತಿಯ ಮೈ, ಕೈಗೆ ಬೆಂಕಿಯಿಂದ ಬರೆ ಹಾಕಿ ಹಲ್ಲೆ ನಡೆಸಿರೋ ಆರೋಪ ಕೇಳಿಬಂದಿದೆ. ಯುವತಿ ಮಾನಸಾಳ ಸಂಬಂಧಿ ಮನೋಜ್ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಮೋಸದಿಂದ ಮರು ಮದುವೆ ಮಾಡಿಸಿ  ಯುವತಿ ಯನ್ನು ಧರ್ಮಸ್ಥಳಕ್ಕೆ ಪೋಷಕರು ಕರೆದೊಯ್ದಿದ್ದರು. ಆದರೆ ಪೋಷಕರಿಂದ  ತಪ್ಪಿಸಿಕೊಂಡು ಬಂದ ಯುವತಿ ಮಾನಸಾ, ಚಿತ್ರದುರ್ಗದಲ್ಲಿರೋ ಗಂಡನನ್ನು ಸೇರಿದ್ದಾಳೆ. 

ಘಟನೆ ಇದಿಷ್ಟು:
ಬಳ್ಳಾರಿ ಜಿಲ್ಲೆಯ ಹಿರೇ ಕುಂಬಳಗುಂಟೆ ಬಸವರಾಜಪ್ಪ, ಮಂಗಳಮ್ಮ ದಂಪತಿಯ ಪುತ್ರಿ ಮಾನಸ ಮತ್ತು
ವಿಜಯಕುಮಾರ್ ಕಳೆದ ಎರಡು ವರ್ಷಗಳಿಂದ  ಪ್ರೀತಿಸುತಿದ್ರು. ಕಳೆದ ಎರಡು ತಿಂಗಳ ಹಿಂದೆಯಷ್ಟೇ ಚಿತ್ರದುರ್ಗದಲ್ಲಿ ವಿವಾಹವಾಗಿದ್ದರು. ಆದರೆ ವಾಮಾಚಾರದ ಮೂಲಕ ಸೋದರ ಅಳಿಯ ರಾಘವೇಂದ್ರನೊಂದಿಗೆ ಮಾನಸಾಳ ಮರು ಮದುವೆಯನ್ನು ಆಕೆಯ ಪೋಷಕರು ಮಾಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.  ಹೀಗಾಗಿ ಪ್ರಾಣಭಯದಲ್ಲಿರೋ ಪ್ರೇಮಿಗಳಿಂದ ರಕ್ಷಣೆಗಾಗಿ ಚಿತ್ರದುರ್ಗದಲ್ಲಿ ಪರದಾಟ ನಡೆದಿದೆ.  ರಕ್ಷಣೆಗಾಗಿ ಚಿತ್ರದುರ್ಗ, ಬಳ್ಳಾರಿ ಜಿಲ್ಲೆಗಳ ಪೊಲೀಸರ ರಕ್ಷಣೆ ಕೋರಿ ಮೊರೆ ಹೋಗಿದ್ದಾರೆ.



 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments