Webdunia - Bharat's app for daily news and videos

Install App

ಸುರೇಶ್ ಹೇಳಿಕೆಯನ್ನ ವಿರೋಧಿಸಿದ ಪರಮೇಶ್ವರ್

geetha
ಶುಕ್ರವಾರ, 2 ಫೆಬ್ರವರಿ 2024 (20:00 IST)
ಬೆಂಗಳೂರು-ನಿನ್ನೆ ಸಿಎಂ ನಿವಾಸದಲ್ಲಿ ಸಭೆ ವಿಚಾರವಾಗಿ ಗೃಹಸಚಿವ ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.ಊಟಕ್ಕೂ ಸೇರಬಾರದಾ.?ಸಿಎಂ ನಿನ್ನೆ ರಾತ್ರಿ ಎಲ್ಲಾ ಸಚಿವರನ್ನ ಊಟಕ್ಕೆ ಕರೆದಿದ್ರು.ಇದೇ ಸಂದರ್ಭದಲ್ಲಿ ಲೋಕಸಭಾ ಚುನಾವಣೆಗೆ ತಯಾರಿ ಬಗ್ಗೆ ಚರ್ಚೆ ಮಾಡಿದೆವು.ಅಧ್ಯಕ್ಷರು ಹಲವು ಸೂಚನೆ ನೀಡಿದ್ರು.ಕ್ಯಾಂಡಿಡೇಟ್ ಬಗ್ಗೆ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ.ಇನ್ನೂ ಪ್ರಕಾಶ್ ಹುಕ್ಕೇರಿ ನಾನು ಫುಟ್ಬಾಲಾ ಅನ್ನೋ ಹೇಳೀಕೆ ವಿಚಾರವಾಗಿ ಈ ಬಗ್ಗೆ ಕಾಮೆಂಟ್ ಮಾಡಲ್ಲ ಎಂದು ಪರಮೇಶ್ವರ್ ಹೇಳಿದ್ದಾರೆ.
 
ಸಂಸದ ಡಿಕೆ ಸುರೇಶ್  ದೇಶ ವಿಭಜನೆ ಹೇಳಿಕೆ ವಿಚಾರವಾಗಿ ಸುರೇಶ್ ಯಾವ ಅರ್ಥದಲ್ಲಿ ಹೇಳಿದ್ದಾರೆ ಗೊತ್ತಿಲ್ಲ.ಈ ದೇಶ ಒಗ್ಗೂಡಿಸಲು ಲಕ್ಷಾಂತರ ಜನ ಜೀವ ಕಳೆದುಕೊಂಡಿದ್ದಾರೆ.ಗಾಂಧೀಜಿ ಸೇರಿದಂತೆ ಹಲವರು ದೇಶ ಒಗ್ಗೂಡಿಸಲು ಮುಂದಾದ್ರು.ಗಾಂದೀಜಿ ಸೇರಿದಂತೆ ಹಲವರು ಪ್ರಾಣ ಕಳೆದುಕೊಂಡ್ರು.ದೇಶ ಒಗ್ಗೂಡಿಸುವ ಮಾತನ್ನ ಆಡಬೇಕೇ ಹೊರತು, ವಿಭಜನೆ ಮಾತನ್ನ ಆಡಬಾರದು.ಸುರೇಶ್ ಯಾವ ಅರ್ಥದಲ್ಲಿ ಹೇಳಿದ್ರು ಗೊತ್ತಿಲ್ಲ.ಭಾರತ ಸ್ವಾತಂತ್ರ್ಯ ಬಂದಾಗ ನಾವು ಹುಟ್ಟಿರಲಿಲ್ಲ.ಇದು ಭವ್ಯವಾದ ಭಾರತ ಹಾಗಾಗಿ ನಾವೆಲ್ಲಾ ಒಂದು ರಾಷ್ಟ್ರ, ಒಂದು ದೇಶ ಅಂತ ಇರಬೇಕು ಎಂದು ಸುರೇಶ್ ಹೇಳಿಕೆಯನ್ನ ಪರಮೇಶ್ವರ್ ವಿರೋಧಿಸಿದ್ದಾರೆ.
 
ನಮ್ಮಲ್ಲಿ 50% ಕಮೀಷನ್ ದಂಧೆ ನಡೆಯುತ್ತಿದೆ ಅಂತ ಕಾಂಗ್ರೆಸ್‌ನ ಮಾಜಿ ಶಾಸಕ ಶಿವರಾಮ್ ಹೇಳಿಕೆ ವಿಚಾರವಾಗಿ ಸಿಎಂ ಗಮನಕ್ಕೆ ತಂದಿದ್ರೆ ಒಳ್ಳೆಯದು.ಬಾಲಕೃಷ್ಣ, ಶಿವರಾಮ್ ಹೇಳಿಕೆ ಪಕ್ಷಕ್ಕೆ ಡ್ಯಾಮೇಜ್ ಮಾಡ್ತಿಲ್ಲವಾ ಅನ್ನೋ ಪ್ರಶ್ನೆ.?ಅವರ ವಯಕ್ತಿಕ ಹೇಳಿಕೆಗಳು ಪಕ್ಷದ ಹೇಳಿಕೆಗಳಲ್ಲ.ಅವರ ಅನಿಸಿಕೆ ಪಕ್ಷದ ಹೇಳಿಕೆಯಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ.ಈಗ ನಾನು ಹೇಳಿದೆ ಭಾರತ ಭವ್ಯ ದೇಶ ಅಂತ.ದೇಶ ವಿಭಜನೆ ಹೇಳಿಕೆ ಸರಿಯಲ್ಲ ಅಂತ ಅದು ನನ್ನ ವೈಯಕ್ತಿಕ ಹೇಳಿಕೆ ಎಂದು ಪರಮೇಶ್ವರ್ ಹೇಳಿದ್ರು.ಕುಮಾರಸ್ವಾಮಿ ಬಿಹಾರ ರೀತಿಯಲ್ಲಿ ರಾಜ್ಯದಲ್ಲಿ ಸರ್ಕಾರ ಬೀಳಲಿದೆ ಅನ್ನೋ ಹೇಳಿಕೆ ವಿಚಾರವಾಗಿ ಅವರು ಕಾಯುತ್ತಾ ಕೂರಲಿ.ನೋಡಿಕೊಂಡು ಕೂರಲಿ ಏನಾಗುತ್ತೆ ಅಂತ.ತುಮಕೂರು ಲೋಕಸಭೆ ಮುದ್ದಹನುಮೇಗೌಡಗೆ ಟಿಕೆಟ್ ನೀಡುವ ವಿಚಾರವಾಗಿ ಟಿಕೆಟ್ ಕೊಡುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ.ಹೈಕಮಾಂಡ್ ಯಾರನ್ನ ಫೈನಲ್ ಮಾಡಿ ಕಳಿಸುತ್ತೆ ಅವರ ಪರ ಕೆಲಸ ಮಾಡ್ತೀವಿ ಎಂದು ಪರಮೇಶ್ವರ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold price today: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

Viral video: ಕಾಲ್ತುಳಿತವಾದಾಗ ಹೇಗೆ ನಮ್ಮನ್ನು ರಕ್ಷಿಸಿಕೊಳ್ಳಬೇಕು, ವೈರಲ್ ವಿಡಿಯೋ ನೋಡಿ

Chinnaswamy stampede: ಸೆಕ್ಯುರಿಟಿ ಕೊಡಕ್ಕಾಗಲ್ಲ, ಡಿಸಿಪಿ ಪತ್ರ ವೈರಲ್: ನಾನವನಲ್ಲ ಅಂತಿದ್ದ ಸರ್ಕಾರಕ್ಕೆ ಮುಜುಗರ

Indore murder: ಹನಿಮೂನ್ ನಲ್ಲೇ ಗಂಡನಿಗೆ ಚಟ್ಟ ಕಟ್ಟಿದಳು: ಇಂಧೋರ್ ನಲ್ಲಿ ಪತ್ನಿಯ ಚಿಲ್ಲಿಂಗ್ ಮರ್ಡರ್ ಕತೆ

Siddaramaiah: ಕಮಿಷನರ್ ಭದ್ರತೆ ಕೊಡ್ಬೇಕಿತ್ತು, ನಂದೇನು ತಪ್ಪಿದೆ ಎಂದ ಸಿಎಂ: ಆರ್ಡರ್ ಕೊಟ್ಟಿದ್ದು ನೀವಲ್ವಾ ಎಂದ ಪಬ್ಲಿಕ್

ಮುಂದಿನ ಸುದ್ದಿ
Show comments