Select Your Language

Notifications

webdunia
webdunia
webdunia
webdunia

ಪ್ರಿಯತಮೆಯ ಹಠಕ್ಕೆ ಕತ್ತು ಕೊಯ್ದುಕೊಂಡ ಪಾಗಲ್ ಪ್ರೇಮಿ

ಪ್ರಿಯತಮೆಯ ಹಠಕ್ಕೆ ಕತ್ತು ಕೊಯ್ದುಕೊಂಡ ಪಾಗಲ್ ಪ್ರೇಮಿ
ಹುಬ್ಬಳ್ಳಿ , ಶನಿವಾರ, 14 ಮಾರ್ಚ್ 2020 (18:09 IST)

ಪಾಗಲ್ ಪ್ರೇಮಿಯೊಬ್ಬ ತನ್ನ ಪ್ರಿಯತಮೆಯ ಮಾತಿನಿಂದ ಮನನೊಂದು ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿರೋ ಘಟನೆ ನಡೆದಿದೆ.
 

ರಂಗ ಪಂಚಮಿ ದಿನ ತಾನು ಪ್ರೀತಿಸಿದ ಹುಡುಗಿ ಮನೆ ಇರೋ ಪ್ರದೇಶಕ್ಕೆ ಹುಡುಗ ಹೋಗಿದ್ದಾನೆ. ಆಗ ಬಣ್ಣ ಹಚ್ಚಬೇಡ ಅಂತ ಹುಡುಗಿ ಹೇಳಿದ್ದಾಳೆ.

ಹೀಗಾಗಿ ಹುಡುಗಿ ಹೇಳಿದ ಮಾತಿನಿಂದ ಮನನೊಂದ ಹುಡುಗ ತನ್ನ ಕುತ್ತಿಗೆಗೆ ಚಾಕುವಿನಿಂದ ತಿವಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಹುಬ್ಬಳ್ಳಿ ನಗರದ ಮಧುರಾ ಕಾಲೋನಿಯಲ್ಲಿ ಘಟನೆ ನಡೆದಿದ್ದು, ಕುತ್ತಿಗೆಗೆ ಚಾಕು ಇರಿದುಕೊಂಡವನು ಆನಂದ ನಗರದ ವಿಕ್ಕಿ ಚವ್ಹಾಣ ಎಂದು ಗುರುತಿಸಲಾಗಿದೆ. ಯುವಕನಿಗೆ ಚಿಕಿತ್ಸೆ ಮುಂದುವರಿದಿದ್ದು, ಪೊಲೀಸರು ಕೇಸ್ ದಾಖಲು ಮಾಡಿಕೊಂಡಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಈ ಜಿಲ್ಲೆಯಲ್ಲಿ ಯಾರಿಗೂ ಕೊರೊನಾ ಇಲ್ಲ : ವೈದ್ಯಕೀಯ ವರದಿಯಲ್ಲಿ ಸ್ಪಷ್ಟ