Select Your Language

Notifications

webdunia
webdunia
webdunia
webdunia

ಪತ್ನಿಗಾಗಿ ಟವರ್ ಏರಿದ ಪಾಗಲ್ ಗಂಡ

ಪತ್ನಿಗಾಗಿ ಟವರ್ ಏರಿದ ಪಾಗಲ್ ಗಂಡ
ರಾಯಚೂರು , ಮಂಗಳವಾರ, 9 ಜುಲೈ 2019 (16:32 IST)
ಪತಿ ಮಹಾಶಯನೊಬ್ಬ ತನ್ನ ಪತ್ನಿಬೇಕೆಂದು ಟವರ್ ಏರಿ ಕುಳಿತು ಸುದ್ದಿಯಾಗಿದ್ದಾನೆ.

ಟವರ್ ಏರಿ ಕುಳಿತಿದ್ದ ಗಂಡ ಮಹಾಶಯ ರಾಯಚೂರು ಜಿಲ್ಲೆಯ ಅಸ್ಕಿಹಾಳ ಗ್ರಾಮದ ನಿವಾಸಿ ಕವಿತಾ ಎಂಬಾಕೆಯನ್ನು ಪ್ರೀತಿಸಿ ಮದುವೆಯಾಗಿದ್ದನು. ಮದುವೆಗೆ ಹುಡುಗಿಯ ಮನೆಯವರಿಗೆ ಇಷ್ಟ ಇರಲಿಲ್ಲ. ಮನೆ ಮಂದಿ ಸಾಯುತ್ತೇವೆ ಎಂದು ಕರೆ ಮಾಡಿ ಕವಿತಾಳನ್ನು ತಮ್ಮ ಮನೆಗೆ ಪಾಲಕರು ಕರೆಸಿಕೊಂಡಿದ್ದರಂತೆ.

ಪತ್ನಿ ಹೋದ ಸುದ್ದಿ ತಿಳಿದ ಗಂಡ, ನಿಜಲಿಂಗಪ್ಪ ಕಾಲೋನಿಯ ಕೆಇಬಿ ಶಾಲೆ ಹತ್ತಿರ ಇರುವಂತಹ ಬಿಎಸ್ ಎನ್ ಎಲ್ ಟವರ್ ಏರಿ ಕುಳಿತಿದ್ದನು.

ಕವಿತಾಳನ್ನು ನನ್ನ ಮನೆಗೆ ಕಳಿಸದೇ ಬೇರೆಲ್ಲೋ ಬಚ್ಚಿಟ್ಟಿದ್ದಾರೆ ಎಂದು ಗರಂ ಆಗಿರುವ ಕವಿತಾಳ ಪತಿ ಶಾಂತಕುಮಾರ್ ಟವರ್ ಏರಿದ್ದಾನೆ. ತನ್ನ ಪತ್ನಿಯನ್ನು ಹುಡುಕಿ ಕೊಡಬೇಕು ಎಂದು ಒತ್ತಾಯ ಮಾಡುತ್ತಿದ್ದಾನೆ.


Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ನಾಯಕರ ಫೋನ್ ಗಳಿಂದ ಶಾಸಕರ ಖರೀದಿ?