Webdunia - Bharat's app for daily news and videos

Install App

ಆಪರೇಷನ್ ಹಸ್ತ ಠುಸ್ ಆಗಿದ್ದೆಲ್ಲಿ ಗೊತ್ತಾ?

Webdunia
ಶನಿವಾರ, 23 ಮಾರ್ಚ್ 2019 (16:35 IST)
ರಾಜ್ಯದಲ್ಲಿ ಈ ಹಿಂದೆ ಆಪರೇಷನ್ ಕಮಲ ಸುದ್ದಿಯಾಗಿದ್ದರೆ ಇತ್ತ ಬಿಸಿಲೂರಿನಲ್ಲಿ ಆಪರೇಷನ್ ಹಸ್ತ ನಡೆಯುತ್ತಿರುವ ವದಂತಿಗಳು ಹರಿದಾಡಲಾರಂಭಿಸಿವೆ.

ರಾಜ್ಯದಲ್ಲಿ ಕೈ-ತೆನೆ ದೋಸ್ತಿ ಇದ್ದು, ಮೈತ್ರಿ ಸರಕಾರ ನಡೆಯುತ್ತಿದೆ. ಆದರೆ ಕಲಬುರಗಿಯಲ್ಲಿ ಕೈ-ತೆನೆ ಕುಸ್ತಿ ಆಂತರಿಕವಾಗಿ ಶುರುವಾದಂತಿದೆ.

ಕಲಬುರಗಿಯಲ್ಲಿ 'ಆಪರೇಶನ್ ಹಸ್ತ' ಮಾಡಲು ಹೋಗಿ ಕೈ ಸುಟ್ಟುಕೊಂಡಿದ್ದಾರೆ ಕಾಂಗ್ರೆಸ್ ಮುಖಂಡರು ಎನ್ನುವ ಮಾತುಗಳು ಬಲವಾಗಿ ಕೇಳಿಬರುತ್ತಿವೆ.

ದೋಸ್ತಿ ಪಕ್ಷ ಜೆಡಿಎಸ್ ನಾಯಕರು ಮತ್ತು ಕಾರ್ಯಕರ್ತರನ್ನ ಸೆಳೆಯಲು ಮುಂದಾಗಿದ್ದ ಕಾಂಗ್ರೆಸ್ ಗೆ ಭಾರಿ ಮುಖಭಂಗವಾಗಿದೆ ಎನ್ನಲಾಗುತ್ತಿದೆ.

ಕೈ ಪಾಳೆಯದ ತಂತ್ರಕ್ಕೆ ಕೆಂಡಮಂಡಲವಾದ ಕಲಬುರಗಿ ಉತ್ತರ ಜೆಡಿಎಸ್ ಅಲ್ಪಸಂಖ್ಯಾತ ಮುಖಂಡರು, ಸ್ಥಳೀಯವಾಗಿ ನಿಮ್ಮ ಪಕ್ಷ ಸೇರಿದ್ರೆ ಮುಂದೆ ನಮ್ಮ ಗತಿ ಏನು? ಅಂತಾ ಪ್ರಶ್ನಿಸಿದ್ದಾರೆ.

ಆಪರೇಶನ್ ಹಸ್ತ ಮುಂದುವರಿಸಿದ್ರೆ ನಮ್ಮ ದಾರಿ ನಮಗೆ, ನಿಮ್ಮ ದಾರಿ ನಿಮಗೆ ಅಂತ ಪರೋಕ್ಷವಾಗಿ ಮಲ್ಲಿಕಾರ್ಜುನ ಖರ್ಗೆಗೆ ಎಚ್ಚರಿಕೆ ಸಂದೇಶವನ್ನು ಜೆಡಿಎಸ್ ಅಲ್ಪಸಂಖ್ಯಾತ ಮುಖಂಡರು ನೀಡಿದ್ದಾರೆ.



ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments