Publish Date: Wed, 24 Apr 2019 (20:02 IST)
Updated Date: Wed, 24 Apr 2019 (20:04 IST)
ಲೋಕಸಭೆ ಚುನಾವಣೆ ಮುಗಿದ ಬಳಿಕ ಆಪರೇಷನ್ ಕಮಲ ಮತ್ತೆ ಸದ್ದು ಮಾಡುತ್ತಿರುವಂತೆ ಇದಕ್ಕೆ ಸಚಿವರೊಬ್ಬರು ವ್ಯಂಗ್ಯವಾಗಿ ಟಾಂಗ್ ನೀಡಿದ್ದಾರೆ.
ಆಪರೇಷನ್ ಕಮಲಾನೂ ಇಲ್ಲ ಹುಣಸೆ ಕಾಯಿಯೂ ಇಲ್ಲ. ರಾಜ್ಯದ ಮೈತ್ರಿ ಸರಕಾರ ಸುಭದ್ರವಾಗಿದೆ. ಹೀಗಂತ ಸಚಿವ ಹೆಚ್.ಡಿ.ರೇವಣ್ಣ ಹೇಳಿದ್ದಾರೆ.
ಬಿಜೆಪಿಯವರು ಎಷ್ಟೇ ಲಾಗ ಹಾಕಿದರೂ ಸರಕಾರ ಬೀಳುವುದಿಲ್ಲ. ಸರಕಾರ ಉಳಿಸಿಕೊಳ್ಳುವುದು ಚೆನ್ನಾಗಿ ನಮಗೆ ಗೊತ್ತಿದೆ ಅಂತಾ ಹೇಳಿದ್ರು.
ರಮೇಶ್ ಜಾರಕಿಹೊಳಿ ಅವರನ್ನು ನಾವೇನು ಹಿಡಿದಿಟ್ಟುಕೊಂಡಿಲ್ಲ. ಈಗಲೇ ಅವರು ರಾಜೀನಾಮೆ ಕೊಡಲಿ ಎಂದು ತಿರುಗೇಟು ನೀಡಿದ್ರು.