Webdunia - Bharat's app for daily news and videos

Install App

ಮೈಸೂರು ಮೃಗಾಲಯದಲ್ಲಿ ಆಪರೇಷನ್ ಚೀತಾ ಸಕ್ಸಸ್

Webdunia
ಗುರುವಾರ, 26 ಅಕ್ಟೋಬರ್ 2017 (15:10 IST)
ಮೈಸೂರು: ಚಾಮುಂಡಿಬೆಟ್ಟದಿಂದ ಮೃಗಾಲಯಕ್ಕೆ ಬಂದ ಚಿರತೆಯನ್ನ ಯಶಸ್ವಿಯಾಗಿ ಸೆರೆ ಹಿಡಿಯುವಲ್ಲಿ ಮೃಗಾಲಯ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಚಾಮುಂಡಿಬೆಟ್ಟದಿಂದ ನಿನ್ನೆ ರಾತ್ರಿ ಒಂದೂವರೆ ವರ್ಷದ ಗಂಡು ಚಿರತೆ ದಾರಿ ತಪ್ಪಿ ಮೃಗಾಲಯದೊಳಗೆ ಬಂದಿದೆ. ಆದರೆ ಅಪರಿಚಿತ ಪ್ರಾಣಿ ಮೃಗಾಲಯದ ಒಳಗೆ ಬಂದಿದ್ದನ್ನ ಕಂಡ ಮೃಗಾಲಯದ ಕೋತಿಗಳು ಜೋರಾಗಿ  ಶಬ್ಧ ಮಾಡಲು ಆರಂಭಿಸಿವೆ. ಇದರಿಂದ ಗಾಬರಿಯಾದ ಚಿರತೆ ಮೃಗಾಲಯದಲ್ಲಿದ್ದ ದೊಡ್ಡಮರವೇರಿ ಕುಳಿತಿದೆ.

ಬೆಳಗ್ಗೆ 8.30ಕ್ಕೆ ಮೃಗಾಲಯದ ಸಿಬ್ಬಂದಿ ಆಗಮಿಸಿದಾಗ ಕೋತಿಗಳ ಚೀರಾಟ ಕಂಡು ಮರ ನೋಡಿದಾಗ  ಚಿರತೆ ಇರುವುದು ಕಂಡು ಬಂದಿದೆ. ಕೂಡಲೇ ಮೇಲಾಧಿಕಾರಿಗಳಿಗೆ ವಿಚಾರ  ತಿಳಿಸಿದಾಗ ತಕ್ಷಣ ಆಗಮಿಸಿದ ಅಧಿಕಾರಿಗಳು ಪ್ರವಾಸಿಗರಿಗೆ ನಿರ್ಬಂಧ ವಿಧಿಸಿ ಕಾರ್ಯಾಚರಣೆ ನಡೆಸಿದ್ದಾರೆ.

ಕಾರ್ಯಾಚರಣೆ ಹೇಗೆ?

ಕಾರ್ಯಾಚರಣೆ ಕೈಗೊಂಡ ಮೃಗಾಲಯ ಪಶುವೈದ್ಯರು ಚಿರತೆಗೆ ಅರವಳಿಕೆ ಚುಚ್ಚು ಮದ್ದು ನೀಡಿದ್ದು, ಚುಚ್ಚು ಮದ್ದಿನಿಂದ ಮಂಪರಿಗೆ ಬಂದ ಚಿರತೆಯನ್ನು ಮರದ ಮೇಲಿಂದ ಬಲೆ ಮೂಲಕ ಕೆಳಗೆ ಸುರಕ್ಷಿತವಾಗಿ ಮತ್ತೊಂದು ಬಲೆಗೆ ತಳ್ಳಿದ್ದಾರೆ. ಚಿರತೆ ಹಿಡಿಯುವ ಕಾರ್ಯಾಚರಣೆ ಯಶಸ್ವಿಯಾದ ನಂತರ ಸಿಬ್ಬಂದಿ ಚಿರತೆಯನ್ನು ಮೃಗಾಲಯದಲ್ಲಿರುವ ಆಸ್ಪತ್ರೆಗೆ ಬೋನ್‍ ನಲ್ಲಿ ತಂದಿದ್ದಾರೆ. ಅಲ್ಲಿ ಮತ್ತೊಂದು ಇಂಜೆಕ್ಷನ್  ನೀಡಿ ಪ್ರಜ್ಞೆ ಬರುವಂತೆ ಮಾಡಿದ್ದಾರೆ ಎಂದು ಮೃಗಾಲಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರವಿಶಂಕರ್ ವಿವರಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments