Webdunia - Bharat's app for daily news and videos

Install App

ಡಿಕೆ ಮನೇಲಿ ಇಡಿ ಕಚೇರಿ ತೆರೆಯಿರಿ-ರಣ್​ದೀಪ್ ಸಿಂಗ್​​ ಸುರ್ಜೆವಾಲಾ

Webdunia
ಮಂಗಳವಾರ, 20 ಡಿಸೆಂಬರ್ 2022 (20:38 IST)
ಬೊಮ್ಮಾಯಿ ಸರ್ಕಾರ ನ್ಯಾಯಸಮ್ಮತವಾದ ಸರ್ಕಾರ ಅಲ್ಲ, ಜನರ ದೃಷ್ಟಿಯಲ್ಲಿ ಎಂದೋ ಬಿದ್ದು ಹೋಗಿದೆ ಅಂತಾ  ಬೆಳಗಾವಿಯಲ್ಲಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣ್​ದೀಪ್ ಸಿಂಗ್​​ ಸುರ್ಜೆವಾಲಾ ಪ್ರತಿಕ್ರಿಯೆ ನೀಡಿದ್ದಾರೆ. ಇಲ್ಲಸಲ್ಲದ ಅಸ್ತ್ರವನ್ನ ಬಿಜೆಪಿಯವರು ಉಪಯೋಗಿಸುತ್ತಾರೆ. ಎಷ್ಟು ದಿನ ಅಂತ ಶಿವಕುಮಾರ್ ಮೇಲೆ‌ ರೇಡ್ ಮಾಡುವಿರಿ. ಸಿಬಿಐ, ಇಡಿ ಕಚೇರಿಯನ್ನು ಶಿವಕುಮಾರ್ ಮನೆಯಲ್ಲೇ ತೆರೆಯಿರಿ, ಪ್ರತಿದಿನ ಬೆಳಿಗ್ಗೆ ಎದ್ದು ರೇಡ್ ಮಾಡಿ. ಇಷ್ಟು ದಿನ ಶಿವಕುಮಾರ್ ಮನೆ ಮೇಲೆ ದಾಳಿ ಮಾಡಿದ್ದೀರಿ, ಆದರೆ ಇದುವರೆಗೆ ಯಾವುದೇ ಸಾಕ್ಷ್ಯ ನಿಮಗೆ ಸಿಕ್ಕಲ್ಲ. ಇದು ಹತಾಶ ಮತ್ತು ಸೋತ ಮಾನಸಿಕತೆಯನ್ನ ಸೂಚಿಸುತ್ತದೆ. ಇದರಿಂದ ಕಾಂಗ್ರೆಸ್ ನಾಯರಾಗಲಿ, ಕಾರ್ಯಕರ್ತರಾಗಲಿ ಹೆದರುವುದಿಲ್ಲ. ದೆಹಲಿಯಿಂದ ಕರ್ನಾಟಕದ ಎಲ್ಲ ಕಾಂಗ್ರೆಸ್ ಕಾರ್ಯಕರ್ತರು ಡಿಕೆ ಜೊತೆ ಇದ್ದಾರೆ ಡಿ.ಕೆ.ಶಿವಕುಮಾರ್​​ ಹೆದರುವ ವ್ಯಕ್ತಿ ಅಲ್ಲ ಎಂದು ಬಿಜೆಪಿ ವಿರುದ್ದ ಸುರ್ಜೆವಾಲಾ ಆಕ್ರೋಶ ಹೊರಹಾಕಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments