Select Your Language

Notifications

webdunia
webdunia
webdunia
webdunia

ನಕ್ಸಲ್ ವಿಕ್ರಂಗೌಡ ಎನ್‌ಕೌಂಟರ್‌ ಆಗಿ ಒಂದು ವರ್ಷ, ದಿಡೀರ್ ಕೂಂಬಿಂಗ್ ನಡೆಸಿದ ಎಎನ್‍ಎಫ್ ಪೊಲೀಸರು

Naxal Leader Vikram Gouda

Sampriya

ಉಡುಪಿ , ಮಂಗಳವಾರ, 18 ನವೆಂಬರ್ 2025 (15:59 IST)
Photo Credit X
ಉಡುಪಿ: ನಕ್ಸಲ್ ಮುಖಂಡ ವಿಕ್ರಂಗೌಡ  ಎನ್‌ಕೌಂಟರ್‌ನಲ್ಲಿ  ಹತ್ಯೆಯಾಗಿ ಇಂದಿಗೆ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆ ಮುನ್ನೇಚರಿಕಾ ಕ್ರಮವಾಗಿ  ಕೂಂಬಿಂಗ್ ಕಾರ್ಯಾಚರಣೆ  ನಡೆಸಲಾಯಿತು. ಎಎನ್‍ಎಫ್ ಪೊಲೀಸರು ಉಡುಪಿ  ಜಿಲ್ಲೆಯ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದಲ್ಲಿ ಕೂಂಬಿಂಗ್ ನಡೆಸಲಾಯಿತು.

ರಾಜ್ಯದಲ್ಲಿ ಭಾರೀ ದೊಡ್ಡ ಸುದ್ದಿಯಾದ ಹೆಬ್ರಿ ಸಮೀಪದ ಪೀತಬೈಲಿನಲ್ಲಿ ವಿಕ್ರಂ ಗೌಡನನ್ನು ಎನ್‍ಕೌಂಟರ್ ನಡೆದ ಬೆನ್ನಲ್ಲೇ ಅನೇಕ ನಕ್ಸಲರು ಶರಣಾಗಿದ್ದರು. 

ಈ ಮೂಲಕ ಕರ್ನಾಟಕ ನಕ್ಸಲ್‌ ಮುಕ್ತ ಎಂದು ಘೋಷಿಸಲಾಗಿತ್ತು. ಆದರೂ ಸಹ ತಮ್ಮ ನಾಯಕರು ಹತ್ಯೆಯಾದ ದಿನ ತಮ್ಮ ಇರುವಿಕೆ ತೋರಿಸುವ ಸಾಧ್ಯತೆಯಿರುವ ಹಿನ್ನೆಲೆ ಪೊಲೀಸರು ಕೂಂಬಿಂಗ್‌ ಕಾರ್ಯಾಚರಣೆ ನಡೆಸಿದ್ದಾರೆ. 

ಸದ್ಯ ಸಕ್ರಿಯ ನಕ್ಸಲರು ಇಲ್ಲದೇ ಹೋದರು ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರು ಕಟ್ಟೆಚ್ಚರವಹಿಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು ಇಂದು ಕೂಂಬಿಂಗ್ ನಡೆಸಲಾಯಿತು. 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಿಯಾಂಕ್ ಖರ್ಗೆ ಸುಳ್ಳುಗಳನ್ನು ಹೇಳುವುದರಲ್ಲಿ ನಿಸ್ಸೀಮ: ಛಲವಾದಿ ನಾರಾಯಣಸ್ವಾಮಿ