Publish Date: Thu, 21 Apr 2022 (18:59 IST)
Updated Date: Thu, 21 Apr 2022 (19:05 IST)
ಸ್ವಾಮೀಜಿಗಳಿಂದ ಮಠ ಮಾನ್ಯಗಳ ಅನುದಾನದಲ್ಲಿ ಪಸೆ೯ಂಟೇಜ್ ಆರೋಪಕ್ಕೆ ಬಾಗಲಕೋಟೆಯಲ್ಲಿ ಕೂಡಲಸಂಗಮದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ. ನಮ್ಮ ಮಠಕ್ಕೆ ಯಡಿಯೂರಪ್ಪನವರು ಆಥಿ೯ಕ ಸಹಕಾರ ಕೊಟ್ಟರು. ಪ್ರಾಧಿಕಾರಕ್ಕೆ ಟ್ರಾನ್ಸ್ಫರ್ ಮಾಡಿದ್ರು. ನಾನು ಎಲ್ಲಿಯೂ ಒಂದು ರೂಪಾಯಿ ಕಮಿಷನ್ ಕೊಟ್ಟಿಲ್ಲ. ಸದಾನಂದಗೌಡರು ಅನುದಾನ ಕೊಟ್ಟಾಗಲೂ ಕಮಿಷನ್ ಕೊಟ್ಟಿಲ್ಲ.. ಧಮ೯ ಗುರುಗಳು ಯಾವತ್ತೂ ಕಮಿಷನ್ ಕೊಡಲ್ಲ. ಕೆಲಸ ಮಾಡಿದ ಅಧಿಕಾರಿಗಳನ್ನ ಮಠಕ್ಕೆ ಕರೆಯಿಸಿ ಶಾಲು ಹಾಕಿ ಸನ್ಮಾನ ಮಾಡಿ, ಕಲ್ಲು ಸಕ್ಕರೆ ಕೊಟ್ಟು ಪ್ರಸಾದ ಮಾಡಿಸುತ್ತೇವೆ. ಕಮಿಷನ್ ಕೊಟ್ಟ ಬಗ್ಗೆ ಇವತ್ತೇ ನಾನು ಕೇಳ್ತಾ ಇರೋದು. ಅವರು ಯಾಕೆ ಹೇಳಿದ್ರೋ ನನಗೆ ಗೊತ್ತಿಲ್ಲ ಎಂದರು.