Webdunia - Bharat's app for daily news and videos

Install App

ಕುಖ್ಯಾತ ಕಳ್ಳನ ಬಂಧನ...!

Webdunia
ಶನಿವಾರ, 20 ಆಗಸ್ಟ್ 2022 (19:07 IST)
ಅಂದು ಚಪ್ಪಲಿ‌ ಕಳವು ಮಾಡ್ತಿದ್ದ ಸಣ್ಣ ಕಳ್ಳ ಇಂದು ಲಕ್ಷ ಲಕ್ಷ ಚಿನ್ನಾಭರಣ ಎಗರಿಸೋ ಕುಖ್ಯಾತ ಮನೆಗಳ್ಳನಾಗಿದ್ದು, ಇದೀಗ ಆರೋಪಿಯನ್ನು HSR ಲೇಔಟ್​​​​ನ ಪೊಲೀಸರು ಬಂಧಿಸಿದ್ದಾರೆ. ಉತ್ತರಹಳ್ಳಿಯ ಪ್ರಕಾಶ್ ಅಲಿಯಾಸ್ ಬಾಲಾಜಿ ಬಂಧಿತ ಆರೋಪಿಯಾಗಿದ್ದಾನೆ. ಮೊದಲಿಗೆ ದೇವಸ್ಥಾನಗಳ ಬಳಿ ಚಪ್ಪಲಿ ಕಳವು ಮಾಡ್ತಿದ್ದ ಈತ ತನ್ನ ತಂದೆ ಸಾವಿನ ಬಳಿಕ ಕಳ್ಳತನ ಕೃತ್ಯವೆಸಗಲು ಮುಂದಾಗಿದ್ನಂತೆ. ಬಳಿಕ ಮನೆ ಕಳವು ಕೃತ್ಯಕ್ಕೆ ಜಂಪ್ ಆಗಿದ್ದು,  ಬಾಡಿಗೆ ಮನೆ ಮಾಡುವ ನೆಪದಲ್ಲಿ ಮನೆಗಳನ್ನು ನೋಡಿ ಕಳ್ಳತನಕ್ಕೆ ಸ್ಕೆಚ್​​ ಹಾಕ್ತಿದ್ನಂತೆ. ಬಾಡಿಗೆಗೆ ಮನೆ ನೋಡುವಾಗ ಮನೆಯ ಬೀಗದ ಪೋಟೋ ತೆಗೆದುಕೊಳ್ತಿದ್ದ ಆರೋಪಿ
ಬಳಿಕ ಬೀಗದ ನಕಲಿ‌ ಕೀ ಮಾಡಿಸಿಕೊಂಡು, ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಗೆ ಕನ್ನ ಹಾಕ್ತಿದ್ನಂತೆ. ಆರೋಪಿ ಮುರುಗೇಶ್ ಪಾಳ್ಯ ಪಾರ್ಥಿವ್ ಹೈಟ್ಸ್ ಅಪಾರ್ಟ್ಮೆಂಟ್​​​​​ನಲ್ಲಿ ವಾಸವಿದ್ದು, ನಗರದಾದ್ಯಂತ 46 ಕೇಸ್​​​​​ಗಳಲ್ಲಿ ಭಾಗಿಯಾಗಿದ್ದ ಎಂದು ತಿಳಿದು ಬಂದಿದೆ. ಆರೋಪಿ ಬಂಧನದಿಂದ 7 ಮನೆಗಳವು ಪ್ರಕರಣ ಪತ್ತೆಯಾಗಿದ್ದು,  750 ಗ್ರಾಂ ಚಿನ್ನಾಭರಣವನ್ನು ವಶ ಪಡಿಸಿಕೊಳ್ಳಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Tejasvi Surya: ಬೀದಿ ಬದಿ ತಿಂಡಿ ಚಪ್ಪರಿಸಿದ ತೇಜಸ್ವಿ ಸೂರ್ಯ: ವಿಡಿಯೋಗೆ ನೆಟ್ಟಿಗರ ಕಾಮೆಂಟ್ ನೋಡಿ

ಚಿನ್ನಸ್ವಾಮಿ ಕಾಲ್ತುಳಿತ ಯಾಕಾಯ್ತು ಎಂದು ಕೇಳಿದರೆ ಸಚಿವ ಎಂಬಿ ಪಾಟೀಲ್ ಹೇಳಿದ್ದೇನು ನೋಡಿ

Arecanut price today: ಅಡಿಕೆ, ಕಾಳುಮೆಣಸು ಇಂದಿನ ಮಾರುಕಟ್ಟೆ ದರ ಹೇಗಿದೆ

Gold Price today: ಚಿನ್ನದ ದರ ಇಂದು ಮತ್ತಷ್ಟು ಕಡಿಮೆ

Indore Raja Raguvamshi murder: ಸೋನಮ್, ಪ್ರಿಯಕರ ಮಾಡಿದ ಈ ಒಂದು ತಪ್ಪಿನಿಂದ ಸಿಕ್ಕಿಬಿದ್ದಿದ್ದು ಹೇಗೆ

ಮುಂದಿನ ಸುದ್ದಿ
Show comments