Webdunia - Bharat's app for daily news and videos

Install App

ಕುಖ್ಯಾತ ಕಳ್ಳನ ಬಂಧನ...!

Webdunia
ಶನಿವಾರ, 20 ಆಗಸ್ಟ್ 2022 (19:07 IST)
ಅಂದು ಚಪ್ಪಲಿ‌ ಕಳವು ಮಾಡ್ತಿದ್ದ ಸಣ್ಣ ಕಳ್ಳ ಇಂದು ಲಕ್ಷ ಲಕ್ಷ ಚಿನ್ನಾಭರಣ ಎಗರಿಸೋ ಕುಖ್ಯಾತ ಮನೆಗಳ್ಳನಾಗಿದ್ದು, ಇದೀಗ ಆರೋಪಿಯನ್ನು HSR ಲೇಔಟ್​​​​ನ ಪೊಲೀಸರು ಬಂಧಿಸಿದ್ದಾರೆ. ಉತ್ತರಹಳ್ಳಿಯ ಪ್ರಕಾಶ್ ಅಲಿಯಾಸ್ ಬಾಲಾಜಿ ಬಂಧಿತ ಆರೋಪಿಯಾಗಿದ್ದಾನೆ. ಮೊದಲಿಗೆ ದೇವಸ್ಥಾನಗಳ ಬಳಿ ಚಪ್ಪಲಿ ಕಳವು ಮಾಡ್ತಿದ್ದ ಈತ ತನ್ನ ತಂದೆ ಸಾವಿನ ಬಳಿಕ ಕಳ್ಳತನ ಕೃತ್ಯವೆಸಗಲು ಮುಂದಾಗಿದ್ನಂತೆ. ಬಳಿಕ ಮನೆ ಕಳವು ಕೃತ್ಯಕ್ಕೆ ಜಂಪ್ ಆಗಿದ್ದು,  ಬಾಡಿಗೆ ಮನೆ ಮಾಡುವ ನೆಪದಲ್ಲಿ ಮನೆಗಳನ್ನು ನೋಡಿ ಕಳ್ಳತನಕ್ಕೆ ಸ್ಕೆಚ್​​ ಹಾಕ್ತಿದ್ನಂತೆ. ಬಾಡಿಗೆಗೆ ಮನೆ ನೋಡುವಾಗ ಮನೆಯ ಬೀಗದ ಪೋಟೋ ತೆಗೆದುಕೊಳ್ತಿದ್ದ ಆರೋಪಿ
ಬಳಿಕ ಬೀಗದ ನಕಲಿ‌ ಕೀ ಮಾಡಿಸಿಕೊಂಡು, ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಗೆ ಕನ್ನ ಹಾಕ್ತಿದ್ನಂತೆ. ಆರೋಪಿ ಮುರುಗೇಶ್ ಪಾಳ್ಯ ಪಾರ್ಥಿವ್ ಹೈಟ್ಸ್ ಅಪಾರ್ಟ್ಮೆಂಟ್​​​​​ನಲ್ಲಿ ವಾಸವಿದ್ದು, ನಗರದಾದ್ಯಂತ 46 ಕೇಸ್​​​​​ಗಳಲ್ಲಿ ಭಾಗಿಯಾಗಿದ್ದ ಎಂದು ತಿಳಿದು ಬಂದಿದೆ. ಆರೋಪಿ ಬಂಧನದಿಂದ 7 ಮನೆಗಳವು ಪ್ರಕರಣ ಪತ್ತೆಯಾಗಿದ್ದು,  750 ಗ್ರಾಂ ಚಿನ್ನಾಭರಣವನ್ನು ವಶ ಪಡಿಸಿಕೊಳ್ಳಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments